ಅಂಚೆ ಇಲಾಖೆಯಿಂದ ನಿಮ್ಮ ಕೈಗೆ ಗಂಗಾಜಲ ವಿತರಣೆ
ನವದೆಹಲಿ, ಜುಲೈ 11: ಹಿಂದೂಗಳ ಪಾಲಿನ ಪವಿತ್ರ ಗಂಗಾಜಲವನ್ನು ದೇಶದ ಎಲ್ಲಾ ಭಾಗದ ಜನತೆಗೂ ಸುಲಭವಾಗಿ ದೊರಕುವಂತೆ ಮಾಡಲು ಕೇಂದ್ರ ಸರ್ಕಾರ, ಗಂಗಾಜಲ ಯೋಜನೆ ಆರಂಭಿಸಿದೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು 'ಗಂಗಾಜಲ ಯೋಜನೆ'ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಚಿವ ಮನೋಜ್ ಸಿನ್ಹಾ ಉಪಸ್ಥಿತರಿದ್ದರು.[20 ಸಾವಿರ ಕೋಟಿ ರು. ಮೌಲ್ಯದ ನಮಾಮಿ ಗಂಗಾ ಯೋಜನೆಗೆ ಚಾಲನೆ]

ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡೀ ಮಾತನಾಡಿದ ರವಿಶಂಕರ್ ಪ್ರಸಾದ್, 'ಪವಿತ್ರ ಸ್ಥಳಗಳಾದ ಗಂಗೋತ್ರಿ ಹಾಗೂ ಋಷಿಕೇಷದಲ್ಲಿ ದೊರೆಯುವ ಜಲವನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ ವಿತರಿಸಲಾಗುವುದು, ಅತ್ಯಲ್ಪ ಬೆಲೆಗೆ ಗಂಗಾಜಲ ದೊರೆಯಲಿದೆ' ಎಂದರು.[ಮಾತಾ 'ಅಮ್ಮ' ಕಡೆಯಿಂದ ನೂರು ಕೋಟಿ!]
Inaugurated delivery of #Gangajal by @IndiaPostOffice today at Patna. Now Post Man will deliver pious Ganga Jal also pic.twitter.com/lsqV80EUDu
— Ravi Shankar Prasad (@rsprasad) July 10, 2016
ಖಾಸಗಿ ಕಂಪನಿಗಳು ಇ ಮಾರುಕಟ್ಟೆಯಲ್ಲಿ ಗಂಗಾಜಲವನ್ನು ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸರ್ಕಾರ ಈ ರೀತಿ ಮಾರುಕಟ್ಟೆ ತಂತ್ರ ಅನುಸರಿಸುತ್ತಿದೆ. ಅಂಚೆ ಇಲಾಖೆ ಸಹಯೋಗದೊಂದಿಗೆ ಗಂಗಾಜಲ ನೀಡಲಾಗುತ್ತಿದೆ.[ವಿಡಿಯೋ: ಗಂಗಾ ಶುದ್ಧೀಕರಣ ಯೋಜನೆಯ ಆಶಯ ಗೀತೆ]
आज पटना से डाक विभाग द्वारा गंगाजल के वितरण की सुविधा का शुभारम्भ किया। अब डाकिया गंगा जल भी पहुँचाएगा आपके घर तक। pic.twitter.com/1rXEnpCZyJ
— Ravi Shankar Prasad (@rsprasad) July 10, 2016
ಗೋಮುಖದಲ್ಲಿ ಸಂಗ್ರಹಿಸಿರುವ ಗಂಗಾಜಲಕ್ಕೆ ಪ್ರತಿ ಲೀಟರ್ಗೆ 299 ರೂ. ನಿಗದಿ ಮಾಡಿ ಮಾರಾಟಮಾಡಲಾಗುತ್ತಿದೆ. ಅಂಚೆ ಇಲಾಖೆಯಿಂದ ರವಾನೆಯಾಗುವ ಗಂಗಾಜಲದ ಬೆಲೆ ನಿಗದಿ ಮಾಡಿಲ್ಲ.












Click it and Unblock the Notifications