Get Updates
Get notified of breaking news, exclusive insights, and must-see stories!

ಅಂಚೆ ಇಲಾಖೆಯಿಂದ ನಿಮ್ಮ ಕೈಗೆ ಗಂಗಾಜಲ ವಿತರಣೆ

ನವದೆಹಲಿ, ಜುಲೈ 11: ಹಿಂದೂಗಳ ಪಾಲಿನ ಪವಿತ್ರ ಗಂಗಾಜಲವನ್ನು ದೇಶದ ಎಲ್ಲಾ ಭಾಗದ ಜನತೆಗೂ ಸುಲಭವಾಗಿ ದೊರಕುವಂತೆ ಮಾಡಲು ಕೇಂದ್ರ ಸರ್ಕಾರ, ಗಂಗಾಜಲ ಯೋಜನೆ ಆರಂಭಿಸಿದೆ.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು 'ಗಂಗಾಜಲ ಯೋಜನೆ'ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಚಿವ ಮನೋಜ್ ಸಿನ್ಹಾ ಉಪಸ್ಥಿತರಿದ್ದರು.[20 ಸಾವಿರ ಕೋಟಿ ರು. ಮೌಲ್ಯದ ನಮಾಮಿ ಗಂಗಾ ಯೋಜನೆಗೆ ಚಾಲನೆ]

Now, Indian Post To Deliver 'Gangajal'

ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡೀ ಮಾತನಾಡಿದ ರವಿಶಂಕರ್ ಪ್ರಸಾದ್, 'ಪವಿತ್ರ ಸ್ಥಳಗಳಾದ ಗಂಗೋತ್ರಿ ಹಾಗೂ ಋಷಿಕೇಷದಲ್ಲಿ ದೊರೆಯುವ ಜಲವನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ ವಿತರಿಸಲಾಗುವುದು, ಅತ್ಯಲ್ಪ ಬೆಲೆಗೆ ಗಂಗಾಜಲ ದೊರೆಯಲಿದೆ' ಎಂದರು.[ಮಾತಾ 'ಅಮ್ಮ' ಕಡೆಯಿಂದ ನೂರು ಕೋಟಿ!]

ಖಾಸಗಿ ಕಂಪನಿಗಳು ಇ ಮಾರುಕಟ್ಟೆಯಲ್ಲಿ ಗಂಗಾಜಲವನ್ನು ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸರ್ಕಾರ ಈ ರೀತಿ ಮಾರುಕಟ್ಟೆ ತಂತ್ರ ಅನುಸರಿಸುತ್ತಿದೆ. ಅಂಚೆ ಇಲಾಖೆ ಸಹಯೋಗದೊಂದಿಗೆ ಗಂಗಾಜಲ ನೀಡಲಾಗುತ್ತಿದೆ.[ವಿಡಿಯೋ: ಗಂಗಾ ಶುದ್ಧೀಕರಣ ಯೋಜನೆಯ ಆಶಯ ಗೀತೆ]

ಗೋಮುಖದಲ್ಲಿ ಸಂಗ್ರಹಿಸಿರುವ ಗಂಗಾಜಲಕ್ಕೆ ಪ್ರತಿ ಲೀಟರ್​ಗೆ 299 ರೂ. ನಿಗದಿ ಮಾಡಿ ಮಾರಾಟಮಾಡಲಾಗುತ್ತಿದೆ. ಅಂಚೆ ಇಲಾಖೆಯಿಂದ ರವಾನೆಯಾಗುವ ಗಂಗಾಜಲದ ಬೆಲೆ ನಿಗದಿ ಮಾಡಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+