ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀನಾಯವಾಗಿ ಸೋತ ಎಡಪಕ್ಷ, ಕಾಂಗ್ರೆಸಿಗೆ ನೆಟಿಜನ್ಸ್ ಗುದ್ದು

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 3: ತ್ರಿಪುರಾ, ನಾಗಲ್ಯಾಂಡ್ ಮತ್ತು ಮೇಘಾಲಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ. ಮೇಘಾಲಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್ ಸರಕಾರ ರಚಿಸುವ ಸಾಧ್ಯತೆಗಳಿಲ್ಲ.

ಇದೀಗ ಬಿದ್ದವನಿಗೆ ಎರಡು ಗುದ್ದು ಜಾಸ್ತಿ ಎನ್ನುವಂತೆ ಟ್ಟಿಟ್ಟರ್ ಬಳಕೆದಾರರು ಸರಿಯಾಗಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಕಾಲೆಳೆದಿದ್ದಾರೆ. ಇದಕ್ಕೆ ಕೇಂದ್ರ ಸಚಿವರು, ಸೆಲೆಬ್ರಿಟಿಗಳೂ ಕೈ ಜೋಡಿಸಿದ್ದಾರೆ.

ನಮಗೆ ಬೇರೆ ಶಾಖೆಗಳಿಲ್ಲ

"ತ್ರಿಪುರಾದಲ್ಲಿ ಬಿಜೆಪಿ ಜಯ ಸಾಧಿಸುವುದರೊಂದಿದೆ, ಕಮ್ಯೂನಿಸ್ಟ್ ಪಾರ್ಟಿ ಆಫ್ ಕೇರಳ (ನಮಗೆ ಬೇರೆ ಯಾವುದೇ ಶಾಖೆಗಳಿಲ್ಲ)" ಎಂದು ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಎಡಪಕ್ಷದ ಕಾಲೆಳೆದಿದ್ದಾರೆ.

ಪದವಿ ಮುಗಿಸಿ ಬನ್ನಿ

ಎಡಪಕ್ಷದವರು ಜೆಎನ್ ಯುಗೆ ಹೋಗಿ ತಮ್ಮ ಪದವಿ ಮುಗಿಸುವುದರ ಬಗ್ಗೆ ಆಲೋಚಿಸುವುದು ಒಳಿತು ಎಂದು ಕ್ರಿಕೆಟಿಗ ರವೀಂದ್ರ ಜಡೇಜಾ ವ್ಯಂಗ್ಯವಾಡಿದ್ದಾರೆ.

ಪಾಪಾ ಕಾಂಗ್ರೆಸ್

ತ್ರಿಪುರಾದಲ್ಲಿ ಕಾಂಗ್ರೆಸ್ ಗೆ ಆಗಿದ್ದು ಇದೇ ಎಂದು ಹೇಳಿ ಉಕ್ಕುತ್ತಿರುವ ನೊರೆಯ ಜಿಫ್ ನ್ನು ಟ್ಟೀಟ್ ಮಾಡಲಾಗಿದೆ.

ಉತ್ತರಾಧಿಕಾರಿಗೆ ಚಿಕಿತ್ಸೆಯಿಲ್ಲ

ಸೋನಿಯಾ ಗಾಂಧಿ: ಹಲೋ.. ಡಾ. ಬಾತ್ರಾ?

ಡಾ. ಬಾತ್ರಾ: ನಾನು ಇದನ್ನು ಕೊನೆಯ ಬಾರಿ ಹೇಳುತ್ತಿದ್ದೇನೆ. ನಮ್ಮಲ್ಲಿ ಕೂದಲಿಗೆ ಚಿಕಿತ್ಸೆ ಇದೆಯೇ ಹೊರತು ಉತ್ತರಾಧಿಕಾರಿಗೆ ಇಲ್ಲ.

English summary
As the assembly election results started to pour in, the social media was filled with humour. The netizens were particularly harsh on the Congress which scored a duck in Tripura and Nagaland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X