ಭಾರತವು ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಉಳಿದಿದೆ: ನಿರ್ಮಲಾ ಸೀತಾರಾಮನ್
ನವದೆಹಲಿ,ಆಗಸ್ಟ್. 2: ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕೇಂದ್ರದ ಕ್ರಮಗಳ ಬಗ್ಗೆ ವಿವರಣೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಂತಾರಾಷ್ಟ್ರೀಯ ಸಂಸ್ಥೆಗಳ ಮೌಲ್ಯಮಾಪನದಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಬೆಲೆ ಏರಿಕೆ ಕುರಿತ ಚರ್ಚೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, "ಜಾಗತಿಕ ಸಂಸ್ಥೆಗಳ ಮೌಲ್ಯಮಾಪನದಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿದಿದೆ. ಪಕ್ಷವನ್ನು ಲೆಕ್ಕಿಸದೇ ಈ ಸದನವು ದೇಶ ಮತ್ತು ಅದರ ಜನರ ಬಗ್ಗೆ ಹೆಮ್ಮೆಪಡಬೇಕು. ಈ ರೀತಿಯ ಸಾಂಕ್ರಾಮಿಕ ರೋಗವನ್ನು ನಾವು ಎಂದಿಗೂ ನೋಡಿರಲಿಲ್ಲ" ಎಂದರು.
14 ಅಗತ್ಯ ಆಹಾರ ಧಾನ್ಯಗಳು ಜಿಎಸ್ಟಿಯಿಂದ ಹೊರಗೆ: ನಿರ್ಮಲಾ ಸೀತಾರಾಮನ್
"ಪ್ರತಿಯೊಬ್ಬ ಸಂಸದರು ಮತ್ತು ರಾಜ್ಯ ಸರ್ಕಾರಗಳು ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಹೀಗೆ ಇರುತ್ತಿರಲಿಲ್ಲ. ಇದಕ್ಕಾಗಿ ನಾನು ಭಾರತದ ಜನರಿಗೆ ಸಂಪೂರ್ಣ ಮನ್ನಣೆ ನೀಡುತ್ತೇನೆ. ದೇಶದಲ್ಲಿ ಪ್ರತಿಕೂಲ ವಾತಾವರಣದ ನಡುವೆಯೂ ನಾವು ಎದ್ದು ನಿಲ್ಲಲು ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಗುರುತಿಸಲು ಸಾಧ್ಯವಾಗುತ್ತಿದೆ" ಎಂದು ಅವರು ಹೇಳಿದರು.
"ಭಾರತವು ಸಾಕಷ್ಟು ವಿದೇಶೀ ವಿನಿಮಯ ಮೀಸಲು ಹೊಂದಿದೆ. ಅಲ್ಲದೆ ಆರ್ಥಿಕ ಮೂಲಭೂತ ಅಂಶಗಳು ಪರಿಪೂರ್ಣವಾಗಿವೆ. ಸರ್ಕಾರದ ಕ್ರಮಗಳಿಂದಾಗಿ ಭಾರತವು ಹೆಚ್ಚಿನ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಸರ್ಕಾರ ತೆಗೆದುಕೊಂಡ ಕ್ರಮಗಳ ನಂತರ ಖಾದ್ಯ ತೈಲಗಳ ಬೆಲೆಗಳು ಸುಧಾರಿಸಲ್ಪಟ್ಟಿವೆ. ಕೋವಿಡ್ ಸಾಂಕ್ರಾಮಿಕ ಮತ್ತು ಭೌಗೋಳಿಕ, ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ ವಿಶ್ವದ ಇತರ ಪ್ರಮುಖ ಆರ್ಥಿಕತೆಗಳಂತೆ ಭಾರತವು ಸ್ಥಗಿತ ಅಥವಾ ಆರ್ಥಿಕ ಹಿಂಜರಿತಕ್ಕೆ ಸಿಲುಕುವ ಪ್ರಶ್ನೆಯೇ ಇಲ್ಲ" ಎಂದರು.
ಭಾರತವು ಆರ್ಥಿಕ ಹಿಂಜರಿತಕ್ಕೆ ಸಿಲುಕುವ ಪ್ರಶ್ನೆಯೇ ಇಲ್ಲ
ಸಮೀಕ್ಷೆಯನ್ನು ಉಲ್ಲೇಖಿಸಿದ ಸೀತಾರಾಮನ್, ಮೊದಲ ತ್ರೈಮಾಸಿಕದಲ್ಲಿ ಶೇಕಡಾ 1.6 ರಷ್ಟು ಕುಸಿತದ ನಂತರ ಎರಡನೇ ತ್ರೈಮಾಸಿಕದಲ್ಲಿ ಯುಎಸ್ನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 0.9 ರಷ್ಟು ಕುಸಿದಿದೆ. ಅವರು ಇದನ್ನು ಅನಧಿಕೃತ ಆರ್ಥಿಕ ಹಿಂಜರಿತ ಎಂದು ಕರೆದಿದ್ದಾರೆ. ಇಲ್ಲಿ ಭಾರತವು ಆರ್ಥಿಕ ಹಿಂಜರಿತ ಅಥವಾ ನಿಶ್ಚಲತೆಗೆ ಸಿಲುಕುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಹೇಳಿದರು.
ಕಳೆದ 8 ವರ್ಷದಲ್ಲಿ ರೂಪಾಯಿ ಮೌಲ್ಯ ಶೇ. 25 ಕುಸಿತ: ಕೇಂದ್ರ ಮಾಹಿತಿ
ನಾವು ಹಣದುಬ್ಬರವನ್ನು ಹಿಡಿದಿಟ್ಟಿದ್ದೇವೆ
ಸಾಂಕ್ರಾಮಿಕದ ಎರಡನೇ ಅಲೆ, ಓಮಿಕ್ರಾನ್, ರಷ್ಯಾ- ಉಕ್ರೇನ್ (ಯುದ್ಧ), ಇಂದಿಗೂ ಸಹ ಚೀನಾದಲ್ಲಿ ಅತಿದೊಡ್ಡ ಪೂರೈಕೆ ಘಟಕಗಳು ಲಾಕ್ಡೌನ್ನಲ್ಲಿವೆ. ಅದರ ಹೊರತಾಗಿಯೂ ನಾವು ಹಣದುಬ್ಬರವನ್ನು ಶೇಕಡಾ 7 ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಿಡಿದಿದ್ದೇವೆ. ಅದನ್ನು ಎಲ್ಲರೂ ಗುರುತಿಸಬೇಕು ಎಂದು ತಿಳಿಸಿದರು.
5 ವರ್ಷಗಳ ಕನಿಷ್ಠ ಮಟ್ಟಕ್ಕೆ ಎನ್ಪಿಎ
ಚೀನಾದಲ್ಲಿ 4,000 ಬ್ಯಾಂಕ್ಗಳು ದಿವಾಳಿಯಾಗುತ್ತಿವೆ ಎಂದು ವರದಿಯಾಗಿದೆ. ಭಾರತದಲ್ಲಿ 2022ರಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ಗಳ ಒಟ್ಟು ಎನ್ಪಿಎಗಳು (ನಿರ್ವಹಣೆ ಮಾಡದ ಆಸ್ತಿಗಳು) 5 ವರ್ಷಗಳ ಕನಿಷ್ಠ 5.9 ಪ್ರತಿಶತದಷ್ಟಿದೆ. ಆದ್ದರಿಂದ ನಮ್ಮ ಎನ್ಪಿಎಗಳು ಸುಧಾರಿಸುತ್ತಿದೆ. ಜಪಾನ್, ಗ್ರೀಸ್, ಭೂತಾನ್, ಸಿಂಗಾಪುರ್, ಯುಎಸ್, ಪೋರ್ಚುಗಲ್, ಸ್ಪೇನ್, ಫ್ರಾನ್ಸ್, ಶ್ರೀಲಂಕಾ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳ ಜಿಡಿಪಿ ಅನುಪಾತಕ್ಕೆ ಸರ್ಕಾರದ ಸಾಲವು ಮೂರು ಅಂಕಗಳಲ್ಲಿದೆ ಎಂದು ಸಚಿವರು ವಿವರಿಸಿದರು.
1.49 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹ
ಐಎಂಎಫ್ ಅಂಕಿ ಅಂಶಗಳ ಪ್ರಕಾರ, ಜಿಡಿಪಿ ಅನುಪಾತಕ್ಕೆ ಸಾಮಾನ್ಯ ಸಾಲವು ಕೇಂದ್ರ ಮತ್ತು ರಾಜ್ಯವನ್ನು ಒಳಗೊಂಡಂತೆ ಶೇಕಡಾ 86.9 ರಷ್ಟಿದೆ. ಜುಲೈ 2022ರಲ್ಲಿ ಜಿಎಸ್ಟಿಯನ್ನು ಪರಿಚಯಿಸಿದ ನಂತರ ದೇಶವು 1.49 ಲಕ್ಷ ಕೋಟಿ ರೂಪಾಯಿಗಳ ಎರಡನೇ ಅತ್ಯುನ್ನತ ಮಟ್ಟವನ್ನು ಗಳಿಸಿದೆ. ಏಪ್ರಿಲ್ 2022 ರಲ್ಲಿ ಇದು 1.67 ಲಕ್ಷ ಕೋಟಿ ಆಗಿತ್ತು. ಇದು ಸತತ ಐದನೇ ತಿಂಗಳು 1.4 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿವೆ ಎಂದು ಅವರು ಹೇಳಿದರು.
Recommended Video