ಹಾದಿ ತಪ್ಪಿದ ನಿರ್ಭಯ್ ಕ್ಷಿಪಣಿ, ಪರೀಕ್ಷೆಯಲ್ಲಿ ಫೇಲ್!
ಬೆಂಗಳೂರು, ಅ.16: ಬೆಂಗಳೂರಿನಲ್ಲಿಯೇ ಸಂಪೂರ್ಣವಾಗಿ ತಯಾರಾದ ಕ್ಷಿಪಣಿ(sub-sonic cruise missile) ನಿರ್ಭಯ ಪರೀಕ್ಷಾರ್ಥ ಹಾರಾಟದಲ್ಲಿ ಫೇಲ್ ಆಗಿದೆ. ನಿರ್ದೇಶಿತ ಹಾದಿ ಬಿಟ್ಟು ಕ್ಷಿಪಣಿ ಬೇರೆ ಪಥ ಹಿಡಿದಿದ್ದರಿಂದ ಪರೀಕ್ಷೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ.
ಒರಿಸ್ಸಾದ ಚಂಡಿಪುರದ ಕೇಂದ್ರದಿಂದ ಈ ಹಿಂದೆ ನಿರ್ಭಯ್ ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಅದರೆ, ಈ ಬಾರಿ ಶುಕ್ರವಾರ ಬೆಳಗ್ಗೆ ಹಾರಿ ಬಿಡಲಾದ ಕ್ಷಿಪಣಿಯನ್ನು ಮಧ್ಯದಲ್ಲೇ ತಡೆ ಹಿಡಿಯಲಾಯಿತು ಎಂದು ರಕ್ಷಣಾ ಇಲಾಖೆಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್ ಡಿಒ) ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ. [ಸೈನ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲಿರುವ ಬೆಂಗಳೂರ ಕ್ಷಿಪಣಿ]

ಒರಿಸ್ಸಾದ ಬಾಲಾಸೂರು ಬಳಿಯ ಚಂಡೀಪುರದಲ್ಲಿ ಸಂಯೋಜಿತ ಪರೀಕ್ಷಾ ವಲಯದಲ್ಲಿ ಕ್ಷಿಪಣಿ ಪರೀಕ್ಷೆ ಆರಂಭಗೊಂಡ 10ನಿಮಿಷದಲ್ಲೇ ರದ್ದು ಪಡಿಸಲಾಯಿತು. [ಅಂತರಿಕ್ಷದಲ್ಲಿ ಒಂದು ರೋಮಾಂಚನಕಾರಿ ರೇಸ್!]
ಸುಖೋಯ್ ನಿಂದ ಚೇಸ್: ಈ ರೀತಿ ಕ್ಷಿಪಣಿ ಪರೀಕ್ಷೆ ಇದ್ದಾಗ ಕ್ಷಿಪಣಿಯ ವೇಗ ಅರಿಯಲು ಭಾರತೀಯ ವಾಯುಸೇನೆಯ ಸುಖೋಯ್ ಅಥವಾ ಜಾಗ್ವಾರ್ ಯುದ್ಧ ವಿಮಾನಗಳು ಕ್ಷಿಪಣಿಯನ್ನು ಚೇಸ್ ಮಾಡುತ್ತವೆ.

ಈ ಹಿಂದೆ ನಡೆದಿದ್ದ ಕ್ಷಿಪಣಿ vs ಯುದ್ಧ ವಿಮಾನ ಚೇಸ್ ನಲ್ಲಿ ಜಾಗ್ವಾರ್ ಯುದ್ಧ ವಿಮಾನ ತನ್ನ ಶಕ್ತಿ ಪ್ರದರ್ಶನ ಮೂಲಕ ನಿರ್ಭಯ ಕ್ಷಿಪಣಿ ಹಿಂದಿಕ್ಕಿ ಸೈ ಎನಿಸಿಕೊಂಡಿತ್ತು. ಈ ಬಾರಿ ಸುಖೋಯ್ ಯುದ್ಧ ವಿಮಾನ ಬಳಸಲಾಗಿತ್ತು.
ಡಿಆರ್ ಡಿಒ ನಿರ್ದೇಶಕ ಡಾ. ಕೆ.ತಮೀಳ್ ಮಣಿ ಭಾರತೀಯ ವಾಯುಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಕ್ಷಿಪಣಿ ಹಿಂದಿಕ್ಕುವ ಪ್ರಯತ್ನದಲ್ಲಿ ಯಾವುದೇ ಅವಘಡವಾಗದಂತೆ ನೋಡಿಕೊಳ್ಳಲಾಗಿದೆ. ನಿರ್ಭಯದ ಶಕ್ತಿ ಅರಿಯಲು ಸೇನೆ ಸೂಕ್ತ ರೀತಿಯಲ್ಲಿ ನೆರವು ನೀಡಿತು. ಅಲ್ಲದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ತಮಿಳ್ ಮಣಿ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications