Delhi Cold Wave: ದೆಹಲಿಯಲ್ಲಿ ಅತೀ ಕನಿಷ್ಠ ಉಷ್ಣಾಂಶ ದಾಖಲು: ಜ. 21ರವರೆಗೆ ಯೆಲ್ಲೋ ಅಲರ್ಟ್
ನವದೆಹಲಿ, ಜನವರಿ 16: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಳಿ ತೀವ್ರಗತಿಯಲ್ಲಿ ಹೆಚ್ಚಾಗಿದ್ದು, ಇದು ಮುಂದಿನ ಆರು ದಿನಗಳವರೆಗೆ ಮುಂದುವರಿಯಲಿದೆ. ಇಲ್ಲಿನ ಕನಿಷ್ಠ ತಾಪಮಾನ ಸೋಮವಾರ ಬೆಳಗ್ಗೆ 1 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಮುನ್ಸೂಚನಾ ವರದಿ ಪ್ರಕಾರ ಮುಂದಿನ ಆರು ದಿನ ದೆಹಲಿಯಲ್ಲಿ ಶೀತ ಅಲೆಗಳು ಸಕ್ರಿಯವಾಗಿರಲಿವೆ. ಈ ಪೈಕಿ ಮುಂದಿನ ಮೂರು ದಿನ ಮಾತ್ರ ಮೈ ಕೊರೆವ ಚಳಿ ಕಂಡು ಬರಲಿದೆ. ಈ ಕಾರಣಕ್ಕೆ IMD ದೆಹಲಿಗೆ ಸೋಮವಾರದಿಂದ ಮುಂದಿನ ಆರು ದಿನ (ಜ.21) ಹಳದಿ ಎಚ್ಚರಿಕೆ ನೀಡಿದೆ.
ತೀವ್ರ ಶೀತಗಾಳಿ ಹಿನ್ನಲೆಯಲ್ಲ ದೆಹಲಿ ಮುಂದಿನ 6 ದಿನ ಗಳ ಪೈಕಿ ಮೊದಲ ಮೂರು ದಿನ ಅಂದರೆ ಜನವರಿ 18ರವರೆಗೆ ದೆಹಲಿ ನಗರದಲ್ಲಿ ನಿರೀಕ್ಷೆಗಿಂತಲೂ ಶೀತ ಅಲೆಗಳು ತರಂಗವನ್ನು ಮೀರಿದೆ. ದಟ್ಟವಾದ ಮಂಜು ಬೀಳುವ ಸಾಧ್ಯತೆ ಇದೆ. ತಾಪಮಾನವು 2 ಡಿಗ್ರಿಗಳಿಗೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ. ದೆಹಲಿಯ ಜನರು ಮುಂದಿನ ಒಂದು ವಾರ ಮತ್ತೆ ಅತ್ಯಧಿಕ ಚಳಿ, ದಟ್ಟ ಮಂಜಿಗೆ ಸಾಕ್ಷಿಯಾಗಲಿದ್ದಾರೆ. ಇತ್ತ ವೈದ್ಯರು ಆರೋಗ್ಯ ಬಗ್ಗೆ ಕಾಳಜಿ ವಹಿಸಿ, ಚಳಿಗೆ ಮೈಯೊಡ್ಡದಂತೆ ಸಲಹೆ ನೀಡಿದ್ದಾರೆ.

ಬುಧವಾರದವರೆಗೆ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಕೆಲವು ರಾಜ್ಯಗಳಲ್ಲಿ ತೀವ್ರ ಶೀತದ ಅಲೆಗಳು ಆವರಿಸುವ ಲಕ್ಷಣಗಳು ಇವೆ. ದೆಹಲಿಯಲ್ಲಿ ಮಂಗಳವಾರವು ಕನಿಷ್ಠ ತಾಪಮಾನ ತೀರಾ ಕಡಿಮೆ ಕಂಡು ಬರಲಿದೆ. ನಂತರ ತುಸು ಹೆಚ್ಚಾಗುವ ಸಾಧ್ಯತೆ ಇದೆ. ಡಿಸೆಂಬರ್ 22ರ ವೇಳೆಗೆ ಕನಿಷ್ಠ 5 -7ಡಿಗ್ರಿ ಸೆಲ್ಸಿಯಸ್ ಹೆಚ್ಚಾಬಹುದು ಎನ್ನಲಾಗಿದೆ. ಈ ವೇಳೆ ಗರಿಷ್ಠ ತಾಪಮನ 19-22 ಡಿಗ್ರಿ ಸೆಲ್ಸಿಯಸ್ ಆಗಿರಲಿದೆ.
ತೀವ್ರ ಚಳಿ: 13 ರೈಲಿನಲ್ಲಿ ಸಂಚಾರ ವಿಳಂಬ
ಈ ಕಾರಣದಿಂದ ದೆಹಲಿ ನಾಗರಿಕರು ಬುಧವಾರದಿಂದ ನಿಟ್ಟು ಬಿಡಬಹುದಾದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.
ಸದ್ಯ ಸೋಮವಾರ ಬೆಳಗ್ಗೆ ನಗರಾದ್ಯಂತ ದಟ್ಟ ಮಂಜು ಆವರಿಸಿದೆ. ಕನಿಷ್ಠ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ಗೆ ಇಲಾಖೆ ಆಗಿದ್ದು, ಇದು ಕಳೆದ ಹತ್ತು ವರ್ಷಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಸೋಮವಾರ ಬೆಳಗ್ಗೆ ದಟ್ಟ ಮಂಜಿನ ವಾತಾವರಣ ಕಂಡು ಬಂತು ಈ ಕಾರಣಕ್ಕಾಗಿ ಉತ್ತರ ರೈಲ್ವೆ ಪ್ರದೇಶದಲ್ಲಿ 13 ರೈಲುಗಳು ತಡವಾಗಿ ಓಡಲಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಧಾರಬಾಂಗ್- ನವದೆಹಲಿ (ರೈಲಿನ ಸಂಖ್ಯೆ- 02569), ಪುರಿ-ನವದೆಹಲಿ ಪುರಷೋತ್ತಮ್ ಎಕ್ಸಪ್ರೆಸ್ (ಸಂಖ್ಯೆ-12801), ಗಯಾ- ದೆಹಲಿ ಎಕ್ಸಪ್ರೆಸ್ (ಸಂಖ್ಯೆ- 12397), ದಿಬ್ರುಗರ್- ದೆಹಲಿ (ಸಂಖ್ಯೆ-12423), ಉದಮ್ ಪುರ್- ದೆಹಲಿ (ಸಂಖ್ಯೆ-22402) ಸೇರಿದಂತೆ ಒಟ್ಟು ಹದಿಮೂರು ರೈಲುಗಳು ನಿಗದಿತ ಸಮಯಕ್ಕೆ ತಡವಾಗಿ ಹೊರಡಲಿವೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications