ಪೀಲೆಯಿಂದ ಪರಿಕ್ಕರ್ ವರೆಗೆ... 10 ಸುದ್ದಿ ಚಿತ್ರಗಳು
ನವದೆಹಲಿ ಅಕ್ಟೋಬರ್. 13: ಪುಟ್ಬಾಲ್ ದಂತಕತೆ ಬ್ರೆಜಿಲ್ ನ ಪೀಲೆ ಭಾರತಕ್ಕೆ ಭೇಟಿ ನೀಡಿದ್ದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಜತೆಗಿದ್ದರು. ನವದೆಹಲಿಯಲ್ಲಿ ನೂರಕ್ಕೂ ಹೆಚ್ಚು ಹಿರಿಯ ಐಎಎಸ್ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ತರಬೇತಿ ಕಾರ್ಯಕ್ರಮವೊಂದರಲ್ಲಿ ಮೋದಿ ದೇಶದ ಆಗು ಹೋಗುಗಳ ಬಗ್ಗೆ ಮಾತನಾಡಿದರು.
ಭಾರತೀಯ ಸೇನೆ ವಿಶ್ವದಲ್ಲೇ 5 ನೇ ಬಲಿಷ್ಠ ಸೇನೆ ಎಂಬ ಹೆಗ್ಗಳಿಕೆಯನ್ನು ಕೆಲ ದಿನಗಳ ಹಿಂದೆ ಪಡೆದುಕೊಂಡಿದೆ. ಭಾರತೀಯ ವಾಯು ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಭೆ ನಡೆಸಿದರು ದೇಶದ ರಕ್ಷಣಾ ಇಲಾಖೆಯ ಬೆಳವಣಿಗೆ ಸಂಬಂಧ ಮಾಹಿತಿ ಪಡೆದುಕೊಂಡರು.[ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿರುವ ದೇಶಗಳು : ಇಲ್ಲಿದೆ ಪಟ್ಟಿ]
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಎರಡನೇ ಏಕದಿನ ಪಂದ್ಯ ಇಂದೋರ್ ನಲ್ಲಿ ಅಕ್ಟೋಬರ್ 14 ರಂದು ನಡೆಯಲಿದ್ದು ಎರಡು ತಂಡದ ಆಟಗಾರರು ತಾಲೀಮು ನಡೆಸಿದರು. ಇನ್ನಷ್ಟು ಪ್ರಮುಖ ಸುದ್ದಿಗಳನ್ನು ಚಿತ್ರಗಳಲ್ಲಿ ನೋಡಿ..(ಪಿಟಿಐ ಚಿತ್ರಗಳು)
ಪುಟ್ಬಾಲ್ ದಂತಕತೆ ಭಾರತದಲ್ಲಿ
ಪುಟ್ಬಾಲ್ ದಂತಕತೆ ಭಾರತದಲ್ಲಿ ಪುಟ್ಬಾಲ್ ದಂತಕತೆ ಪಿಲೇ ಭಾರತಕ್ಕೆ ಭೇಟಿ ನೀಡಿದ್ದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಎದುರುಗೊಂಡಿದ್ದು ಹೀಗೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಜತೆಗಿದ್ದರು.
ಎರಡೆರಡು ಪೀಲೆ
ತಮ್ಮದೇ ವಿಶೇಷ ಭಂಗಿಯ ಗೋಲು ಹೊಡೆಯುವ ಪುತ್ಥಳಿಯನ್ನು ಕೋಲ್ಕತ್ತಾದಲ್ಲಿ ಅನಾವರಣ ಮಾಡಿದ ವಿಶ್ವ ಪುಟ್ಬಾಲ್ ಸಾಮ್ರಾಟ ಪೀಲೆ.
ಮಮತಾ ಅವರೊಂದಿಗೆ ಮಾತು
ಕೋಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ಸಂವಾದದ ವೇಳೆ ವಿದ್ಯಾರ್ಥಿಗಳೊಂದಿಗೆ ಪೀಲೆ ಮಾತನಾಡಿದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿಯವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು.
ಭರ್ಜರಿ ತಾಲೀಮು
ನಿರಂತರ ಸೋಲಿನಿಂದ ಕಂಗೆಟ್ಟಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಇಂದೋರ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಬುಧವಾರ ಎದುರಿಸಲಿದ್ದಾರೆ. ಪಂದ್ಯಕ್ಕೂ ಮುನ್ನ ಅಭ್ಯಾಸ ನಿರತರಾಗಿದ್ದ ಭಾರತದ ಆಟಗಾರರು.
ನರೇಂದ್ರ ಮೋದಿ ಸಭೆ
ನವದೆಹಲಿಯಲ್ಲಿ ನೂರಕ್ಕೂ ಹೆಚ್ಚು ಹಿರಿಯ ಐಎಎಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ. ತರಬೇತಿ ಕಾರ್ಯಕ್ರಮವೊಂದರಲ್ಲಿ ಮೋದಿ ದೇಶದ ಆಗು ಹೋಗುಗಳ ಬಗ್ಗೆ ಮಾತನಾಡಿದರು.
ಬಲಿಷ್ಠ ಸೇನೆಯಾಗಲಿ
ಭಾರತೀಯ ವಾಯು ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಭೆ ನಡೆಸಿದರು. ಭಾರತೀಯ ಸೇನೆ ವಿಶ್ವದಲ್ಲೇ 5 ನೇ ಬಲಿಷ್ಠ ಸೇನೆ ಎಂಬ ಹೆಗ್ಗಳಿಕೆಯನ್ನು ಕೆಲ ದಿನಗಳ ಹಿಂದೆ ಪಡೆದುಕೊಂಡಿತ್ತು.
ಆಳೆತ್ತರಕ್ಕೆ ಬೆಂಕಿ
ಅಮೆರಿಕದ ಕಾನ್ಸಾಸ್ ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ಆಸ್ತಿ -ಪಾಸ್ತಿಗಳನ್ನು ಭಸ್ಮ ಮಾಡಿತು. ಕೆಲ ದಿನಗಳ ಹಿಂದೆ ಕ್ಯಾಪಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಸಾವಿರಾರು ಎಕರೆ ಅರಣ್ಯವನ್ನು ಬಲಿ ಪಡೆದುಕೊಂಡಿತ್ತು.
ಸುಂದರಿ ನಾನೇ!
ಮಿಸ್ ಲೆಬೆನಾನ್ ಆಗಿ ಹೊರಹೊಮ್ಮಿದ 23 ವರ್ಷದ ವಾಲೆರಿಯೆ ಅಬು ಶಕ್ರಾ ಸಂಭ್ರಮ.
ಶಾಂದಾರ್ ಪ್ರಚಾರ
ಮುಂಬೈನಲ್ಲಿ ಬಹುನಿರೀಕ್ಷಿತ ಚಿತ್ರ ಶಾಂದಾರ್ ದ ಪ್ರಚಾರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡ ಬಾಲಿವುಡ್ ನಟ ಶಾಹೀದ್ ಕಪೂರ್ ಮತ್ತು ನಟಿ ಆಲಿಯಾ ಭಟ್.