ಪ್ರತಿಪಕ್ಷಗಳಿಗೆ ಟಾಂಗ್ ನೀಡಲು ಬಿಜೆಪಿ ಸಿದ್ಧ
ನವದೆಹಲಿ ಜು. 20: ಸಂಸತ್ ಮಳೆಗಾಲದ ಅಧಿವೇಶನ ಜುಲೈ 21 ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ ಡಿಎ ಮೈತ್ರಿ ಪಕ್ಷಗಳ ಸಭೆ ಸೋಮವಾರ ದೆಹಲಿಯಲ್ಲಿ ನಡೆಯಿತು. ವಿಪಕ್ಷಗಳ ಆರೋಪಗಳಿಗೆ ಯಾವ ಬಗೆಯಲ್ಲಿ ಉತ್ತರ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು.
ಲಲಿತ್ ಮೋದಿ ವೀಸಾ ಹಗರಣ, ಇರಾನಿ ನಕಲಿ ಅಂಕಪಟ್ಟಿ ಹಗರಣ, ಮಹಾರಾಷ್ಟ್ರ ಸರ್ಕಾರದ ಮಕ್ಕಳ ಆಹಾರ ಹಗರಣ, ವ್ಯಾಪಂ ಹಗರಣ ಕುರಿತು ವಿಪಕ್ಷಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಯಾವ ಕಾರಣಕ್ಕೂ ಆರೋಪಿತರು ರಾಜೀನಾಮೆ ನೀಡುವ ಪ್ರಮೆಯವೇ ಇಲ್ಲ. ವಿಪಕ್ಷಗಳ ಆರೋಪವನ್ನು ಎದುರಿಸಿ ತಕ್ಕ ಉತ್ತರ ಮತ್ತು ಸಮರ್ಥಬೆ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸಂಸತ್ ಅಧಿವೇಶನದ ಹಿನ್ನೆಲಯಲ್ಲಿ ಸೊಮವಾರ ಸರ್ವಪಕ್ಷಗಳ ಸಭೆ ನಡೆಸಿದರು. ಕಾಲೇಜುಗಳು ಆರಂಭವಾಗಿದ್ದು ಹೊಸಬರನ್ನು ತಿಲಕವಿಟ್ಟು ಬರಮಾಡಿಕೊಂಡ ಬಗೆಯನ್ನು ವರ್ಣಿಸಲು ಅಸಾಧ್ಯ. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ (ಪಿಟಿಐ ಚಿತ್ರಗಳು)

ಏನು ಮಾತುಕತೆ?
ಸಂಸತ್ ಮಳೆಗಾಲದ ಅಧಿವೇಶನ ಜುಲೈ 21 ರಿಂದ ಆರಂಭವಾಗಲಿದ್ದು ನವದೆಹಲಿಯಲ್ಲಿ ನಡೆದ ಎನ್ ಡಿಎ ಮೈತ್ರಿ ಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾತುಕತೆ.

ವಿಪಕ್ಷಗಳಿಗೆ ಉತ್ತರ ಸಿದ್ಧ
ಸಂಸತ್ ಮಳೆಗಾಲದ ಅಧಿವೇಶನ ಜುಲೈ 21 ರಿಂದ ಆರಂಭವಾಗಲಿದ್ದು ನವದೆಹಲಿಯಲ್ಲಿ ನಡೆದ ಎನ್ ಡಿಎ ಮೈತ್ರಿ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರು.

ಸರ್ವ ಪಕ್ಷಗಳ ಸಭೆ
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸಂಸತ್ ಅಧಿವೇಶನದ ಹಿನ್ನೆಲಯಲ್ಲಿ ಸೊಮವಾರ ಸರ್ವಪಕ್ಷಗಳ ಸಭೆ ನಡೆಸಿದರು.

ದಲೈ ಲಾಮಾ ಪ್ರವಚನ
ಟಿಬೇಟ್ ಧರ್ಮಗುರು ದಲೈಲಾಮಾ ಧರ್ಮಶಾಲಾ ದಲ್ಲಿ ಬುದ್ಧ ಅನುಯಾಯಿಗಳನ್ನು ಉದ್ದೇಶಿಸಿ ಪ್ರವಚನ ನೀಡಿದರು.

ತಿಲಕವಿಟ್ಟು ಸ್ವಾಗತ
ದೆಹಲಿಯಲ್ಲಿ ಕಾಲೇಜುಗಳು ಆರಂಭವಾಗಿದ್ದು ಹೊಸಬರನ್ನು ತಿಲಕವಿಟ್ಟು ಬರಮಾಡಿಕೊಂಡ ವಿದ್ಯಾರ್ಥಿಗಳು

ಕಾಲೇಜಿನ ಮೊದಲ ದಿನ ಹೇಗಿತ್ತು?
ದೆಹಲಿಯಲ್ಲಿ ಕಾಲೇಜುಗಳು ಆರಂಭವಾಗಿದ್ದು ಮೊದಲ ದಿನದ ಸಂಭ್ರಮ ಅನುಭವಿಸಿದ ವಿದ್ಯಾರ್ಥಿಗಳು.












Click it and Unblock the Notifications