ಮಂಗಳೂರಿನ ಕಚ್ಚಾ ತೈಲ ಸಂಗ್ರಹಾಗಾರಕ್ಕೆ ಯುಎಇ ಇಂಧನ
ಮಂಗಳೂರಿನಲ್ಲಿ ಈಗಾಗಲೇ ಇರಾನ್ ತೈಲ ಸಂಗ್ರಹಾರವಿದ್ದು, ಇದೀಗ, ಯುಎಇ ಸರ್ಕಾರವು ಈ ಸಂಗ್ರಹಾಗಾರದ ಅರ್ಧದಷ್ಟು ತೈಲ ನೀಡಲು ಸಮ್ಮತಿಸಿದೆ. ಇದರಿಂದ, ತುರ್ತು ಪರಿಸ್ಥಿತಿಗಳಲ್ಲಿ ತೈಲ ಕ್ಷೋಭೆಯನ್ನು ನಿಭಾಯಿಸಲು ಭಾರತಕ್ಕೆ ನೆರವಾಗಲಿದೆ.
ನವದೆಹಲಿ, ಜನವರಿ 26: ಮಂಗಳೂರಿನಲ್ಲಿರುವ ಭೂಗರ್ಭ ಕಚ್ಚಾ ತೈಲ ಸಂಗ್ರಹಾಗಾರದ ಸಾಮರ್ಥ್ಯದ ಅರ್ಧದಷ್ಟು ಭಾಗದ ತೈಲವನ್ನು ತನ್ನ ಕಚ್ಚಾ ತೈಲ ಸಂಗ್ರಹದಿಂದ ಕಳುಹಿಸುವ ಮಹತ್ವದ ಒಪ್ಪಂದವೊಂದಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಒಪ್ಪಿದ್ದು, ಈ ನಿಟ್ಟಿನಲ್ಲಿ, ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿರುವ ಅಬುಧಾಬಿಯ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್- ನಹ್ಯಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಬುಧವಾರ ನಡೆದ ಮಾತುಕತೆಯ ನಂತರ ಈ ಒಪ್ಪಂದದ ಬಗ್ಗೆ ಪ್ರಕಟಿಸಲಾಗಿದೆ.

ಈ ಒಪ್ಪಂದದ ಪ್ರಕಾರ, ಯುಎಇ ಸರ್ಕಾರವು ಮಂಗಳೂರಿನಲ್ಲಿ ಸಂಗ್ರಹಾಗಾರ ತನ್ನಲ್ಲಿನ ಕಚ್ಚಾ ತೈಲದ ಒಂದು ಭಾಗವನ್ನು ಇರಾನ್ ಭಾರತಕ್ಕೆ ಸರಬರಾಜು ಮಾಡಲಿದೆ. ತುರ್ತು ಪರಿಸ್ಥಿತಿಗಳಲ್ಲಿ ಈ ಸಂಗ್ರಹಾಗಾರದ ತೈಲವನ್ನು ಉಪಯೋಗಿಸುವ ಮೊದಲ ಹಕ್ಕು ಭಾರತದ್ದಾಗಿರುತ್ತದೆ.
ಮಂಗಳೂರಿನಲ್ಲಿ ಈಗಾಗಲೇ ಸ್ಥಾಪಿತವಾಗಿರುವ ತೈಲ ಸಂಗ್ರಹಾಗಾರದಲ್ಲಿ ಇರಾನ್ ತೈಲವನ್ನು ಸಂಗ್ರಹಿಸಲಾಗುತ್ತಿದೆ. ಇದನ್ನು ಹೊರತುಪಡಿಸಿದರೆ, ರಾಜ್ಯದ ಪಡೂರು ಹಾಗೂ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲೂ ಭಾರತ ಸರ್ಕಾರದ ವಿವಿಧ ಭೂಗರ್ಭ ತೈಲ ಸಂಗ್ರಹಾಗಾರಗಳಿವೆ.
ಯುಎಇ ತೈಲ ಸರಬರಾಜಿನಿಂದ ಏನು ಪ್ರಯೋಜನ?
ಯುಎಇ ನೆರವಿನಿಂದ ಭಾರತವು ಸುಮಾರು 36.87 ಮಿಲಿಯನ್ ಬ್ಯಾರೆಲ್ ಗಳಷ್ಟು ಕಚ್ಚಾ ತೈಲ ಸಂಗ್ರಹಾಗಾರವನ್ನು ಸ್ಥಾಪಿಸುವ ಇರಾದೆ ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಠಾತ್ ಇಂಧನ ಕ್ಷೋಭೆ ತಲೆದೋರಿದಲ್ಲಿ ಭಾರತಕ್ಕೆ ಸುಮಾರು 10 ದಿನಗಳ ಕಾಲ ತೈಲ ಸರಬರಾಜನ್ನು ಮಂಗಳೂರು ಸಂಗ್ರಹಾಗಾರದಿಂದ ಪೂರೈಸಬಹುದಾಗಿದೆ. ಹಾಗಾಗಿ, ಈ ತೈಲ ಸಂಗ್ರಹಾಗಾರಕ್ಕೆ ತೈಲ ಸಂಪನ್ಮೂಲ ದೇಶಗಳಿಂದ ಕಚ್ಚಾ ತೈಲವನ್ನು ತಂದು ಸುರಿಯುವ ಯೋಜನೆ ಇದಾಗಿದೆ. ಈ ಬೃಹತ್ ಯೋಜನೆಗಾಗಿ 2014ರಲ್ಲೇ ಯುಎಇ ಜತೆಗೆ ಮಾತುಕತೆ ನಡೆಸಲಾಗಿತ್ತು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications