ಲಿಂಗ ಪರಿವರ್ತನೆಗೊಂಡ ನಾವಿಕ ನೌಕಾಪಡೆಯಿಂದ ವಜಾ
ಮುಂಬೈ, ಅಕ್ಟೋಬರ್ 10: ಭಾರತೀಯ ನೌಕಾ ಪಡೆಯ ಸೇವೆಯಲ್ಲಿದ್ದ ನಾವಿಕನೊಬ್ಬನನ್ನು ಲಿಂಗ ಪರಿವರ್ತನೆಗೊಂಡಿದ್ದಕ್ಕೆ ಉದ್ಯೋಗದಿಂದ ವಜಾಗೊಳಿಸಿರುವ ಘಟನೆ ನಡೆದಿದೆ. ಲಿಂಗ ಪರಿವರ್ತನೆಗೆ ಒಳಗಾಗಿದ್ದ ಭಾರತೀಯ ನೌಕಾ ಪಡೆಯ ನಾವಿಕನನ್ನು ಮನೀಶ್ ಗಿರಿ ಎಂದು ಗುರುತಿಸಲಾಗಿದೆ.
ರಜೆ ಮೇಲೆ ಊರಿಗೆ ತೆರಳಿದ್ದ ಮನೀಶ್ ಮತ್ತೆ ನೌಕಾ ಪಡೆ ಕೆಲಸಕ್ಕೆ ಬಂದಾಗ ಅವನು ಬದಲು ಅವಳಾಗಿದ್ದ. ಗಂಡು ಹೆಣ್ಣಾದ ಪ್ರಸಂಗ ನೌಕಾಪಡೆಗೆ ಇರಿಸುಮುರಿಸು ತಂದಿತ್ತು. ಈ ಕಾರಣದಿಂದ ಆತನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ನೌಕಾ ಪಡೆಯ ನಿಯಮಗಳ ಪ್ರಕಾರ ಈತ/ಈಕೆಯ ಸೇವೆ ಅಗತ್ಯವಿಲ್ಲ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮನೀಶ್, ನೌಕಾ ಪಡೆ ಸೇವೆಗೆ ಹಿಂದಿರುಗಿದಾಗ ಅವನಲ್ಲಿ/ಅವಳಲ್ಲಿ ಕಂಡು ಬಂದ ಬದಲಾವಣೆ ಮತ್ತು ಸ್ತ್ರೀವರ್ತನೆಯನ್ನು ಪರಿಗಣಿಸಿ, ನೌಕಾಪಡೆ ನಿಯಮ ಮೀರಿದ ಕಾರಣಕ್ಕೆ ಗಿರಿಯನ್ನು ಕರ್ತವ್ಯದಿಂದ ಆಡಳಿತಾತ್ಮಕವಾಗಿ ಕೈಬಿಡಲಾಗಿದೆ ಎಂದು ನೌಕಾಪಡೆ ಪ್ರಕಟಿಸಿದೆ.
ವಿಶಾಖಪಟ್ಟಣಂನ ಐಎನ್ಎಸ್ ಎಕ್ಸಿಲಾ ಬೇಸ್ನಲ್ಲಿ ಕರ್ತವ್ಯದಲ್ಲಿದ್ದ ಮನೀಶ್ ನೌಕಾಪಡೆಯ ನಾವಿಕನಾಗಿದ್ದ. ಲಿಂಗ ಪರಿವರ್ತನೆಗೆ ಒಳಗಾಗುವ ಮುನ್ನವೇ ಸೀರೆಯುಡಲು ಹಾಗೂ ಕೂದಲನ್ನು ಉದ್ದವಾಗಿ ಬೆಳೆಸಲು ಆರಂಭಿಸಿದ್ದ. ಅಲ್ಲದೇ ತನ್ನ ಹೆಸರನ್ನು ಸಬಿ ಎಂದು ಬದಲಿಸಿಕೊಂಡಿದ್ದ ಎಂದು ಜತೆಗಾರರು ಹೇಳಿದ್ದಾರೆ.
ವಿನಾಕಾರಣ ನನ್ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ನಾನು ಏಳುವರ್ಷ ದುಡಿದಿದ್ದೇನೆ. ಲಿಂಗ ಪರಿವರ್ತನೆಯಾಗಿದ್ದಕ್ಕೆ ಉದ್ಯೋಗದಿಂದ ವಜಾಗೊಳಿಸಿರುವುದು ಎಷ್ಟು ಸರಿ? ನಾನು ಈ ಬಗ್ಗೆ ಕಾನೂನಿನ ಹೋರಾಟ ನಡೆಸುತ್ತೇನೆ ಎಂದು ಸಬಿ ಟೈಮ್ಸ್ ಆಫ್ ಇಂಡಿಯಾಕ್ಕೆ ಪ್ರತಿಕ್ರಿಯಿಸಿದ್ದಾರೆ.
-
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ












Click it and Unblock the Notifications