ಹಿಂದೂ ನೆರೆಹೊರೆಯವರಿಗಾಗಿ ದುರ್ಗಾ ಪೂಜೆ ಆಯೋಜಿಸಿದ ಮುಸ್ಲಿಂಮರು
ಕೋಲ್ಕತ್ತಾ, ಅಕ್ಟೋಬರ್ 2: ಕೋಮುಸಾಮರಸ್ಯ ಹಾಗೂ ಭ್ರಾತೃತ್ವ ಮೆರೆದಿರುವ ಮುಸ್ಲಿಂ ಸಮುದಾಯದ ಜನರು ಇಲ್ಲಿನ ತಮ್ಮ ನೆರೆಹೊರೆಯವರಿಗಾಗಿ ದುರ್ಗಾಪೂಜೆ ಆಯೋಜಿಸಿದ್ದಾರೆ.
ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶವಾದ ಕೋಲ್ಕತ್ತಾದ ಅಲಿಮುದ್ದೀನ್ ಸ್ಟ್ರೀಟ್ನಲ್ಲಿ ಎರಡು ಹಿಂದೂ ಕುಟುಂಬಗಳಿಗೆ ಪೂಜೆ ಮಂಟಪವನ್ನು ಸ್ಥಾಪಿಸಲಾಗಿದೆ. ಈ ಬಗ್ಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮತ್ತು ಸ್ಥಳೀಯ ದುರ್ಗಾ ಪೂಜೆಯ ಸಂಘಟಕ ಎಂಡಿ ತೌಸಿಫ್ ರೆಹಮಾನ್, ಸಮರಸ್ಯದ ಭಾಗವಾಗಿ ದುರ್ಗಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಹಿಂದೂ ಸಮುದಾಯದ ಜನರು ಸರಿಯಾದ ವಿಧಿವಿಧಾನಗಳೊಂದಿಗೆ ಪೂಜೆಯನ್ನು ಮಾಡುತ್ತಾರೆ ಎಂದಿದ್ದಾರೆ.
ದುರ್ಗಾಪೂಜೆ: ಬೆಂಗಳೂರಿನಲ್ಲಿ ಸಿದ್ಧವಾಗಲಿವೆ ಸುಮಾರು 140 ಪೂಜಾ ಪೆಂಡಾಲ್ಗಳು
ಮುಸ್ಲಿಂ ಆಗಿರುವುದರಿಂದ ನಮಗೆ ಕೆಲವು ಮಿತಿಗಳಿವೆ. ಆದರೆ ನಾವು ಪೂಜೆಯನ್ನು ಆಯೋಜಿಸಲು ಸಾಧ್ಯವಿಲ್ಲ. ನಮ್ಮ ಸಹೋದರರು ಮತ್ತು ಸಹೋದರಿಯರು ಪೂಜೆ ಮಾಡಲು ದೂರದ ಪೂಜಾ ಮಂಟಪಗಳಿಗೆ ಏಕೆ ಹೋಗಬೇಕು? ಈ ದೇವಾಲಯದಲ್ಲಿ ನಾವು ಮಾ ದುರ್ಗೆ ಮೂರ್ತಿಯನ್ನು ತಂದಿದ್ದೇವೆ. ಪ್ರತಿದಿನವೂ ಆಚರಣೆಗಳು ನಡೆಯುತ್ತವೆ. ದುರ್ಗೆಗೆ ಪೂಜೆಯನ್ನು ಹಿಂದೂ ಕುಟುಂಬದಿಂದ ಮಾಡಲಾಗುತ್ತದೆ. ಎಂದು ಅವರು ಹೇಳಿದರು.
ಸ್ಥಳೀಯ ನಿವಾಸಿ ಸಯಂತನ್ ಸೇನ್ ಮಾತನಾಡಿ, ನೆರೆಹೊರೆಯವರ ಹಾವಭಾವವು ಸಮಾಜದಲ್ಲಿ ಮಾನವೀಯತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರುತ್ತದೆ. ಮುಸ್ಲಿಂಮರು ಹಿಂದೂ ಕುಟುಂಬಕ್ಕಾಗಿ ಮಾತ್ರ ಈ ಪೂಜೆಯನ್ನು ಆಯೋಜಿಸಿರುವುದನ್ನು ನೋಡಿ ನಮಗೆ ತುಂಬಾ ಸಂತೋಷವಾಗಿದೆ. ಇದು ಮಾನವೀಯತೆ ಮತ್ತು ಮನುಕುಲಕ್ಕೆ ಉದಾಹರಣೆಯಾಗಿದೆ ಮತ್ತು ಧರ್ಮಗಳಿಗೆ ಸಂಬಂಧಿಸಿದಂತೆ ಯಾವುದೇ ಭೇದ ಇರಬಾರದು ಎಂದು ನಮಗೆ ಕಲಿಸುತ್ತದೆ ಎಂದು ಅವರು ಹೇಳಿದರು.
ದುರ್ಗೋತ್ಸವ ಅಥವಾ ಶರದೋತ್ಸವ
ಸಯಂತನ್ ಸೇನ್ ಕುಟುಂಬದ ಮತ್ತೊಬ್ಬ ಸದಸ್ಯ ಗುಡಿಯಾ ಕುಮಾರಿ ದೇವಿ, ನನಗೆ ದುರ್ಗ ಮಾತೆಯನ್ನು ಅಲಂಕರಿಸಲು ಮತ್ತು ವಸ್ತುಗಳನ್ನು ಸಿದ್ಧಪಡಿಸಲು ನನಗೆ ಅವಕಾಶ ಸಿಕ್ಕಿದ್ದರಿಂದ ಇದು ನನಗೆ ಉತ್ತಮ ಸಂದರ್ಭವಾಗಿದೆ. ನನ್ನ ಮುಸ್ಲಿಂ ಸಹೋದರರಿಗೆ ಧನ್ಯವಾದಗಳು ಎಂದರು. ಹಿಂದೂ ಹಬ್ಬವಾದ ದುರ್ಗಾ ಪೂಜೆಯನ್ನು ದುರ್ಗೋತ್ಸವ ಅಥವಾ ಶರದೋತ್ಸವ ಎಂದೂ ಕರೆಯುತ್ತಾರೆ. ಇದು ಹಿಂದೂ ದೇವತೆ ದುರ್ಗಾವನ್ನು ಗೌರವಿಸುವ ಮತ್ತು ಮಹಿಷಾಸುರನ ಮೇಲೆ ಆಕೆಯ ವಿಜಯವನ್ನು ಸ್ಮರಿಸುವ ವಾರ್ಷಿಕ ಆಚರಣೆಯಾಗಿದೆ.
ಭಕ್ತರನ್ನು ಆಶೀರ್ವದಿಸಲು ಬರುವ ದುರ್ಗೆ
ದುರ್ಗಾ ಪೂಜೆಯು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಅಸಂಖ್ಯಾತ ಜನರು ಈ ಹಬ್ಬವನ್ನು ಸಂಪ್ರದಾಯಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಹಿಂದೂ ಪುರಾಣದ ಪ್ರಕಾರ ದೇವಿಯು ತನ್ನ ಭಕ್ತರನ್ನು ಆಶೀರ್ವದಿಸಲು ಈ ಸಮಯದಲ್ಲಿ ತನ್ನ ಐಹಿಕ ನಿವಾಸಕ್ಕೆ ಬರುತ್ತಾಳೆ. ಬಂಗಾಳಿ ಸಮುದಾಯಕ್ಕೆ ದುರ್ಗಾ ಪೂಜೆ ದೊಡ್ಡ ಹಬ್ಬವಾಗಿದೆ. ಈ ವರ್ಷ ಮಹಾ ಷಷ್ಠಿ ಅಕ್ಟೋಬರ್ 1 ರಂದು ಮತ್ತು ವಿಜಯ ದಶಮಿ ಅಕ್ಟೋಬರ್ 5 ರಂದು ಬರುತ್ತದೆ.
ದುರ್ಗಪೂಜೆ ವಿಜೃಂಭಣೆಯ ಹಬ್ಬ
ದುರ್ಗಾ ಪೂಜೆಯ ಮಹತ್ವವು ಧರ್ಮವನ್ನು ಮೀರಿದೆ. ಸಹಾನುಭೂತಿ, ಸಹೋದರತ್ವ, ಮಾನವೀಯತೆ, ಕಲೆ ಮತ್ತು ಸಂಸ್ಕೃತಿಯ ಆಚರಣೆ ಎಂದು ಪೂಜಿಸಲಾಗುತ್ತದೆ. 'ಧಕ್' ಮತ್ತು ಹೊಸ ಬಟ್ಟೆಗಳ ಪ್ರತಿಧ್ವನಿಯಿಂದ ರುಚಿಕರವಾದ ಆಹಾರದವರೆಗೆ ಈ ದಿನಗಳಲ್ಲಿ ಉಲ್ಲಾಸದ ಮನಸ್ಥಿತಿ ಇರುತ್ತದೆ. ಇನ್ನೂ ಪಶ್ಚಿಮ ಬಂಗಾಳದ ಜನರಲ್ಲಿ ದುರ್ಗಪೂಜೆ ವಿಜೃಂಭಣೆಯ ಹಬ್ಬವಾಗಿದೆ.
ಸಿಟಿ ಆಫ್ ಜಾಯ್, ಕಲ್ಕತ್ತಾ
ಕೋಲ್ಕತ್ತಾ ನಿವಾಸಿಗಳು ಪ್ರತಿ ವರ್ಷ ದುರ್ಗಾ ಪೂಜೆಯನ್ನು ನವೀನ ಥೀಮ್ಗಳೊಂದಿಗೆ ಆಚರಿಸುತ್ತಾರೆ. ಈ ವರ್ಷ ಡುಮ್ಡಮ್ ತರುಣ್ ದಳ, ಪೂಜಾ ಸಮಿತಿಯು ಸ್ಥಾಪಿಸಿದ ವಿನೂತನ ಪಂಡಲ್ನ ಥೀಮ್ 'ಸಿಟಿ ಆಫ್ ಜಾಯ್, ಕಲ್ಕತ್ತಾ.' ಇದು ಹಳೆಯ ಕಲ್ಕತ್ತಾದಿಂದ ಇಂದಿನ ಕೋಲ್ಕತ್ತಾಗೆ ನಗರದ ರೂಪಾಂತರವನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತದೆ.