ಜಗತ್ತಿನ ದುಬಾರಿ ನಗರಗಳಲ್ಲಿ ಮುಂಬೈಗೆ 2ನೇ ಸ್ಥಾನ!
ಹೆಚ್ಚುತ್ತಿರುವ ಜನಸಂಖ್ಯೆ, ಮೂಲ ಸೌಕರ್ಯಗಳ ಕೊರತೆಯು ಈ ವಾಣಿಜ್ಯ ನಗರವನ್ನು ದುಬಾರಿಯನ್ನಾಗಿಸಿದೆ.
ಭಾರತದ ವಾಣಿಜ್ಯ ನಗರಿ ಮುಂಬೈ, ಜಗತ್ತಿನ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಆಕ್ಸ್ ಫರ್ಡ್ ಎಕನಾಮಿಕ್ಸ್ ಸಂಸ್ಥೆಯು ನಡೆಸಿರುವ ಈ ಸಮೀಕ್ಷಾ ವರದಿಯಲ್ಲಿ ಮುಂಬೈ ಭಾರತದ ಅತ್ಯಂತ ದುಬಾರಿ ನಗರವೆಂದೂ ಪರಿಗಣಿಸಲ್ಪಟ್ಟಿದೆ.
ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಹಾಂಕಾಂಗ್ ಇದ್ದರೆ, ಮೂರನೇ ಸ್ಥಾನದಲ್ಲಿ ಬೀಜಿಂಗ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಶಾಂಘೈ ಇದೆ.

ವರ್ಷಗಳೇ ಬೇಕು ವಾಸಕ್ಕೊಂದು ಜಾಗ ಕೊಳ್ಳಲು
ಸಮೀಕ್ಷೆಯ ಪ್ರಕಾರ, ಮುಂಬೈನಲ್ಲಿ 90 ಸ್ಕ್ವಯರ್ ಮೀಟರ್ (970 ಚದುರಡಿ) ಜಾಗ ಖರೀದಿಸಬೇಕೆಂದರೆ ಇಂದಿನ ದರ ಪ್ರಕಾರ, ಮಧ್ಯಮ ಹಂತದ ವರಮಾನವಿರುವ ಕುಟುಂಬಕ್ಕೆ ಏನಿಲ್ಲವೆಂದರೂ ಕನಿಷ್ಠ 30 ವರ್ಷ ಬೇಕು.

ಯಾರಿಗೆ ಸಾಲುತ್ತೆ ಸಂಬಳ
ಮುಂಬೈನಲ್ಲಿ ಮನೆ ಬಾಡಿಗೆ ಕಡಿಮೆ ಎನ್ನುವುದು ವಾಡಿಕೆ. ಆದರೆ, ಇಲ್ಲಿನ ಮಧ್ಯಮ ವರ್ಗದ ಜನರ ಸರಾಸರಿ ವರಮಾನಕ್ಕೆ ಅನುಗುಣವಾಗಿ ಯೋಚಿಸಿದರೆ, ಟೋಕಿಯೋ, ನ್ಯೂಯಾರ್ಕ್ ಗಳಲ್ಲಿರುವ ಮನೆ ಬಾಡಿಗೆಗಳಿಗಿಂತ ಹೆಚ್ಚು ಎನ್ನಲಾಗಿದೆ.

ಇರಲು ಜಾಗವಿಲ್ಲದಂಥ ಪರಿಸ್ಥಿತಿ
ವರ್ಷದಿಂದ ವರ್ಷಕ್ಕೆ ಉದ್ಯೋಗ ಮತ್ತಿತರ ಕಾರಣಗಳಿಗಾಗಿ ಇಲ್ಲಿಗೆ ವಲಸೆ ಬರುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವಸತಿ ಸೌಕರ್ಯ ನೀಡಲು ಈ ನಗರಕ್ಕೆ ಸಾಧ್ಯವಾಗುತ್ತಿಲ್ಲ. ಇದೇ ಮನೆ ಬಾಡಿಗೆ ಏರಿಕೆಗೆ ಕಾರಣವೆಂದು ಹೇಳಲಾಗಿದೆ.

ಮೂಲ ಸೌಕರ್ಯಕ್ಕೆ ಪೈಪೋಟಿ
ಮೊದಲೇ ವಾಣಿಜ್ಯ ಕೇಂದ್ರವಾಗಿರುವುದರಿಂದ ಎಲ್ಲೆಲ್ಲೂ ಮೂಲಸೌಕರ್ಯಗಳ ಕೂಗು ಇದ್ದೇ ಇದೆ ಈ ನಗರದಲ್ಲಿ. ಕೆಲವಾರು ವೈಭವೋಪೇತ ಪ್ರದೇಶಗಳಲ್ಲಿ ಸೌಕರ್ಯಗಳಿಗೆ ಪೈಪೋಟಿಯಿಲ್ಲ. ಆದರೆ, ಮಧ್ಯಮವರ್ಗ, ಬಡವರು ವಾಸಿಸುವ ಪ್ರದೇಶಗಳಲ್ಲಿ ಇದಕ್ಕೆ ಪೈಪೋಟಿಯಿದ್ದು ಬೆಲೆ ಏರಿಕೆಗೆ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ಏಷ್ಯಾದಲ್ಲೇ ದುಬಾರಿ ಎನಿಸಲಿದೆಯೇ ಮುಂಬೈ?
ಸದ್ಯಕ್ಕೆ ಮುಂಬೈ ನಗರವು ಭಾರತದಲ್ಲೇ ಅತಿ ದುಬಾರಿ ಎಂದೆನಿಸಿದೆ. ಆದರೆ, ಇದು ಇಷ್ಟಕ್ಕೇ ತಟಸ್ಥವಾಗುವುದಿಲ್ಲ. ಮುಂಬರುವ ವರ್ಷಗಳಲ್ಲಿ ಏಷ್ಯಾದ ಅತಿ ದುಬಾರಿ ನಗರವಾಗಿಯೂ ಇದು ರೂಪುಗೊಳ್ಳುವ ಅವಕಾಶಗಳಿವೆ ಎನ್ನಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications