ಹಸನ್ಮುಖಿ ವಸುಂಧರೆಯ ಮಡಿಲಲ್ಲಿ ನಿಗಿನಿಗಿ ಜ್ವಾಲಾಮುಖಿ!
ಬೆಂಗಳೂರು, ನವೆಂಬರ್ 26 : ಸರಿಯಾಗಿ 7 ವರ್ಷಗಳ ಹಿಂದೆ ಇದೇ ದಿನಗಳಲ್ಲಿ ಮುಂಬೈ ಮೇಲೆ ದಾಳಿ ಮಾಡಿದ ಉಗ್ರರ ಮೇಲೆ ಮುಗಿಬಿದ್ದು ಹುತಾತ್ಮರಾದ ವೀರಯೋಧರಿಗೆ ಹೆಮ್ಮೆಯ, ಭಾವುಕತೆಯ ಸೆಲ್ಯೂಟ್. ತದನಂತರ ಇಂತಹ ಭೀಕರ ದಾಳಿಗಳಾಗಿಲ್ಲ. ಆದರೆ, ಇಂದಿನ ದಿನಗಳಲ್ಲಿ ನಾವು ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಕೇಳಿಕೊಳ್ಳಲೇಬೇಕಾಗಿದೆ.
ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಭಾರತ ಸಾಕಷ್ಟು ಶ್ರಮ ವಹಿಸಿದೆ ಅನ್ನುವಷ್ಟರಲ್ಲೇ, ಮುಂಬೈ ದಾಳಿಯ ಮಾದರಿಯಲ್ಲಿ ಪ್ಯಾರಿಸ್ ಮೇಲೆ ಹತ್ಯಾಕಾಂಡ ಸಂಭವಿಸಿರುವುದು, ಉಗ್ರವಾದ ಕುರಿತು ನಮ್ಮ ನಿಲುವನ್ನು ಮತ್ತೆ ಪರಾಮರ್ಶಿಸಿಕೊಳ್ಳುವಂಥ ಸಂದರ್ಭ ತಂದೊದಗಿಸಿದೆ. ಡೇಂಜರಸ್ ಐಎಸ್ಐಎಸ್ ನಿಂದಾಗಿ ವಿಶ್ವವಿಂದು ಥರಥರ ಅನ್ನುತ್ತಿದೆ. [26/11 ದಾಳಿ ಪಕ್ಕಕ್ಕಿಟ್ಟು ತಾಜ್ ನಲ್ಲಿ ಚಾ ಕುಡಿಯೋಣ ಬನ್ನಿ]

ಪ್ಯಾರಿಸ್ ದಾಳಿ ಕಲಿಸಿದ ಪಾಠವೇನು?
ಪ್ಯಾರಿಸ್ ದಾಳಿಯ ನಂತರ ಯಾವ ವಿಷಯ ವಿದಿತವಾಗಿದೆಯೆಂದರೆ, ವಿಶ್ವದಲ್ಲಿನ ಯಾವುದೇ ನಗರದ ಮೇಲೆ ಇದೇ ರೀತಿಯ ದಾಳಿ ನಡೆಯಬಹುದು. ನೂರಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಅದು ಬೇಕಾಬಿಟ್ಟಿ ನಡೆಸಿದ ದಾಳಿಯಲ್ಲ. ಅತ್ಯಂತ ಕರಾರುವಾಕ್ಕಾಗಿ ಮತ್ತು ವ್ಯವಸ್ಥಿತವಾಗಿ ರೂಪಿಸಿದಂಥ ಡೆಡ್ಲಿ ದಾಳಿ. ಐಸಿಸ್ ನಿರ್ನಾಮವಾಗದಿದ್ದರೆ ಶತ್ರು ದೇಶಕ್ಕೆ ಉಳಿಗಾಲವಿಲ್ಲ.
ಮುಂಬೈ ಮೇಲೆ ದಾಳಿ ನಡೆಸಿದ ಲಷ್ಕರ್-ಇ-ತಯ್ಬಾ ಕಡಿಮೆ ಶಕ್ತಿಶಾಲಿ ಸಂಘಟನೆಯೇನಲ್ಲ. ಜಗತ್ತಿನಾದ್ಯಂತ ತನ್ನ ಬಾಹುಗಳನ್ನು ಈಗಾಗಲೆ ಪಸರಿಸಿಕೊಳ್ಳುತ್ತಿದೆ. ಈ ಕನಸು ನನಸು ಮಾಡಿಕೊಳ್ಳಲು ಸಾಜಿದ್ ಮಿರ್ ನನ್ನು ನೇಮಿಸಿತ್ತು. ಆದರೆ, 2008ರ ಮುಂಬೈ ದಾಳಿಯ ನಂತರ ತುಸು ಮೆತ್ತಗಾಯಿತು. [ಉಗ್ರ ಕಸಬ್ ಹಿಡಿದ ಓಂಬಳೆ ಸಾಹಸ ಸ್ಮರಣೀಯ]
ಆದರೆ, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ಲಷ್ಕರ್ ಹಿಮ್ಮೆಟ್ಟುವಂತೆ ಮಾಡಲು ತಯಾರಿಲ್ಲ. ಭಾರತದ ಮೇಲೆ ದಾಳಿ ನಡೆಸಲು ಲಷ್ಕರನ್ನು ಐಸಿಸ್ ಪುಸಲಾಯಿಸುತ್ತಲೇ ಇದೆ. ಕಾಶ್ಮೀರಕ್ಕಾಗಿ ಲಷ್ಕರನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತಲೇ ಇದೆ ಮತ್ತು ಅಫಘಾನಿಸ್ತಾನದಲ್ಲಿ ತಾಲಿಬಾನ್ಗೂ ಬೆಂಬಲಿಸುತ್ತಿದೆ. ಅಂದುಕೊಂಡಿದ್ದಿಕ್ಕಿಂತ ಐಸಿಸ್ ಇಂದು ಬಲಶಾಲಿಯಾಗಿದೆ. [ಅಜ್ಮಲ್ ಕಸಬ್ ಗಿಂತ ಮೊದಲು ಗಲ್ಲಿಗೇರಿದ್ದು ಯಾರು?]
ಉಗ್ರ ಸಂಘಟನೆಗಳೆಲ್ಲ ಒಟ್ಟಾಗುವವೆ?
ಈ ಎಲ್ಲ ಉಗ್ರ ಸಂಘಟನೆಗಳೆಲ್ಲ ಒಟ್ಟುಗೂಡಿ ಜಗತ್ತಿನ ನಿದ್ದೆಯನ್ನು ಮತ್ತಷ್ಟು ಕೆಡಿಸಲಿವೆ ಎಂಬ ಮಾತು ಚಾಲ್ತಿಯಲ್ಲಿದೆ. ಪಾಕ್ ಗುಪ್ತಚರ ಇಲಾಖೆಯ ಹಿಡಿತದಲ್ಲಿರುವ ಲಷ್ಕರ್ ಮತ್ತು ಐಸಿಸ್ ಒಟ್ಟಾಗುವ ಸೂಚನೆಗಳು ಸದ್ಯಕ್ಕೆ ಕಾಣಿಸದಿದ್ದರೂ, ಐಎಸ್ಐಎಸ್ ನಡೆಸಿರುವ ಎಲ್ಲ ದಾಳಿಗಳನ್ನು ಲಷ್ಕರ್ ಸಮರ್ಥಿಸಿಕೊಂಡಿರುವುದು ಚಿಂತನೀಯ ವಿಷಯವಾಗಿದೆ.
ಆದರೆ, ಯೆಮನ್, ಅಫಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಪ್ರಬಲವಾಗಿರುವ ಅಲ್ ಖೈದಾದಿಂದ ಸಿಡಿದಿದ್ದ ಐಎಸ್ಐಎಸ್ ಮತ್ತೆ ಅಲ್ ಖೈದಾ ಜೊತೆ ಕೈಜೋಡಿಸುವ ಸೂಚನೆಗಳು ದಟ್ಟವಾಗಿ ಕಾಣುತ್ತಿವೆ. ಹಲವಾರು ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ತೊಡೆ ತಟ್ಟಿರುವುದರಿಂದ ಬಲ ವರ್ಧಿಸಿಕೊಳ್ಳಲು ಅಲ್ ಖೈದಾದೊಂದಿಗೆ ಐಎಸ್ಐಎಸ್ ಕೈಮಿಲಾಯಿಸುವುದನ್ನು ತಳ್ಳಿಹಾಕುವಂತಿಲ್ಲ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications