"ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಸೀದಿ ಇದ್ದಿದ್ದೇ ಸುಳ್ಳು!"
ಭೋಪಾಲ್. ಮಾರ್ಚ್ 19: "ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಮಸೀದಿ ಇರಲೇ ಇಲ್ಲ, ಕರಸೇವಕರು ಕೆಡವಿದ್ದು ಮಂದಿರವನ್ನ, ಮಸೀದಿಯನ್ನಲ್ಲ" ಎಂದು ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
1992 ರಲ್ಲಿ ಕರಸೇವಕರು ಕೆಡವಿದ್ದು, ದೇವಾಲಯವನ್ನು. ಆ ಜಾಗದಲ್ಲಿ ಮಸೀದಿ ಇರಲೇ ಇಲ್ಲ ಎನ್ನುವ ಮೂಲಕ ಶ್ರೀಗಳು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾನು ಶಂಕರಾಚಾರ್ಯ. ಸನಾತನ ಧರ್ಮವನ್ನು ಕಾಪಾಡುವುದೇ ನನ್ನ ಗುರಿ ಎಂದಿರುವ ಅವರು, ಕೋರ್ಟು ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುತ್ತಿದ್ದಂತೆಯೇ ರಾಮ ಮಂದಿರವನ್ನು ಮತ್ತೆ ಕಟ್ಟಲಾಗುವುದು ಎಂದರು.

ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲೊಂದಾದ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ.












Click it and Unblock the Notifications