ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣಗಿರಿಯಲ್ಲಿ ಭೀಕರ ಅಪಘಾತ, 10 ಜನ ಸಾವು
ಕೃಷ್ಣಗಿರಿ(ತಮಿಳುನಾಡು), ಜುಲೈ 24: ಕೃಷ್ಣಗಿರಿ ತಾಲೂಕಿನ ಸೂಳಗಿರಿ ಬಳಿ ಭಾನುವಾರ ಭೀಕರ ಅಪಘಾತ ಸಂಭವಿಸಿದೆ. ಕೃಷ್ಣಗಿರಿಯಿಂದ ಹೊಸೂರಿಗೆ ತೆರಳುತ್ತಿದ ಖಾಸಗಿ ಬಸ್ ಹಾಗೂ ಕಂಟೈನರ್ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, 10 ಮಂದಿ ಸಾವನ್ನಪ್ಪಿದ್ದರೆ 33ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.
ಅತಿ ವೇಗವಾಗಿ ಚಲಿಸುತ್ತಿದ ಕಂಟೈನರ್ ಟ್ರಕ್ ವೊಂದು ರಸ್ತೆ ವಿಭಜಕ ದಾಟಿ ಎದುರುಗಡೆ ಬರುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ.
ಬೆಂಗಳೂರು- ಹೊಸೂರು ಹೆದ್ದಾರಿಯ ಸೂಳಗಿರಿ ಬಳಿ ಸಂಭಸಿದ ಈ ಭೀಕರ ಅಪಘಾತದಿಂದ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಘಟನಾ
ಸ್ಥಳಕ್ಕೆ
10ಕ್ಕೂ
ಅಧಿಕ
ಆಂಬ್ಯುಲೆನ್ಸ್
ವಾಹನಗಳು
ಬಂದಿದ್ದು,
ಗಾಯಗೊಂಡವರನ್ನು
ಕೃಷ್ಣಗಿರಿಯ
ಆಸ್ಪತ್ರೆಗಳಿಗೆ
ಸೇರಿಸಿ
ಚಿಕಿತ್ಸೆ
ನೀಡಲಾಗುತ್ತಿದೆ.
ಸುಮಾರು ಒಂದು ತಿಂಗಳ ಹಿಂದೆ ಇಲ್ಲೇ ಸಮೀಪದಲ್ಲಿ ಸರಣಿ ಅಪಘಾತ ಸಂಭವಿಸಿ 17 ಜನ ಮೃತಪಟ್ಟಿದ್ದರು.
ಭಾನುವಾರದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಖಾಸಗಿ ಬಸ್ ನಲ್ಲಿ 63ಜನ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
Comments
krishnagiri hosur road accident accident death tamil nadu ಕೃಷ್ಣಗಿರಿ ಹೊಸೂರು ರಸ್ತೆ ಅಪಘಾತ ಅಪಘಾತ ಸಾವು ತಮಿಳುನಾಡು
English summary
A gruesome road accident occurred near Hossur, Krishnagiri district, killing 7 on the spot and gravely injuring 30 more. A private transport bus carrying passengers travelling from Sulagiri had an head on collision with a container truck travelling from Hosur
Story first published: Sunday, July 24, 2016, 18:35 [IST]