ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗಷ್ಟೇ ಹಣದ ಜತೆಗೆ ಮಾಲೀಕರನ್ನು ಗುರುತಿಸಲಾಗಿದೆ: ಜೇಟ್ಲಿ

|
Google Oneindia Kannada News

"ಈಗಿನ್ನೂ ಹಣವನ್ನು ಅದರ ಮಾಲೀಕರ ಜತೆಗೆ ಗುರುತಿಸಲಾಗಿದೆ" ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ. ಶೇ 99ರಷ್ಟು ಅಮಾನ್ಯವಾದ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬಂದಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿ ಬಂದ ನಂತರ ಅವರ ಪ್ರತಿಕ್ರಿಯೆ ಬಂದಿದೆ.

ಅಪನಗದೀಕರಣಕ್ಕೆ 'ಶಿಫಾರಸು' ಮಾಡಿದ ಆರ್ ಬಿಐಗೆ ನಾಚಿಕೆ ಆಗಬೇಕು: ಚಿದಂಬರಂಅಪನಗದೀಕರಣಕ್ಕೆ 'ಶಿಫಾರಸು' ಮಾಡಿದ ಆರ್ ಬಿಐಗೆ ನಾಚಿಕೆ ಆಗಬೇಕು: ಚಿದಂಬರಂ

"ನೋಟು ನಿಷೇಧದ ಮೂಲಕ ಕಪ್ಪು ಹಣವನ್ನು ಗುರುತಿಸಿ, ಹೇಗೆ ವ್ಯವಸ್ಥೆಯೊಳಗೆ ಅದನ್ನು ತರಬೇಕು ಎಂಬುದರ ಬಗ್ಗೆ ಸರಿಯಾದ ಅರಿವು ಇಲ್ಲದ ಜನರು ಮಾತನಾಡುತ್ತಾರೆ" ಎಂದು ವಿಪಕ್ಷಗಳ ಟೀಕೆಗೆ ಅವರು ಉತ್ತರಿಸಿದ್ದಾರೆ.

Arun Jaitley

ಅಪನಗದೀಕರನದ ಉದ್ದೇಶವೇ ಆರ್ಥಿಕ ವ್ಯವಸ್ಥೆಯಲ್ಲಿ ನಗದು ಪ್ರಮಾಣ ಕಡಿಮೆ ಮಾಡುವುದು, ಡಿಜಿಟಲ್ ವ್ಯವಹಾರಗಳನ್ನು ಹೆಚ್ಚಿಸುವುದು, ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚು ಮಾಡುವುದು ಮತ್ತು ಕಪ್ಪು ಹಣದ ವಿರುದ್ಧ ಹೋರಾಡುವುದು ಎಂದು ಜೇಟ್ಲಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Recommended Video

Arun Jaitley is the new Defence Minister | Oneindia Kannada

ಅಪನಗದೀಕರಣ ನಂತರ ಶೇ 99ರಷ್ಟು ಹಣ ಬ್ಯಾಂಕ್ ಗೆ ಜಮೆ: ಆರ್ ಬಿಐಅಪನಗದೀಕರಣ ನಂತರ ಶೇ 99ರಷ್ಟು ಹಣ ಬ್ಯಾಂಕ್ ಗೆ ಜಮೆ: ಆರ್ ಬಿಐ

ಅಪನಗದೀಕರಣದ ನಂತರ ನಗದು ಹರಿವು ಕಡಿಮೆಯಾಯಿತು. ಛತ್ತೀಸಗಡ ಹಾಗೂ ಜಮ್ಮು-ಕಾಶ್ಮೀರದಲ್ಲಿ ಉಗ್ರರು ಮತ್ತು ಪ್ರತ್ಯೇಕತಾ ಚಟುವಟಿಕೆಗಳು ಕಡಿಮೆ ಆಗಿರುವುದೇ ಇದಕ್ಕೆ ಸಾಕ್ಷಿ ಎಂದು ಜೇಟ್ಲಿ ಸಮರ್ಥನೆ ನೀಡಿದ್ದಾರೆ.

"ಕಪ್ಪು ಹಣದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಜನ ನೋಟು ನಿಷೇಧದ ಉದ್ದೇಶವನ್ನು ಅರ್ಥ ಮಾಡಿಕೊಳ್ಳಲಾರರು. ಬ್ಯಾಂಕ್ ನಲ್ಲಿ ಹಣ ಜಮೆ ಮಾಡಿದ ಮಾತ್ರಕ್ಕೆ ಅವು ಕಾನೂನುಬದ್ಧ ಆಗಿಬಿಡಲ್ಲ" ಎಂದು ಅವರು ಹೇಳಿದ್ದಾರೆ.

English summary
"Money has now been identified with its owner," said Finance Minister Arun Jaitley on 99% of demonetised currency coming back into banking system, a finding that was made by RBI in a report earlier today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X