ನಿಮ್ಮನ್ನು ಬೆರಗುಗೊಳಿಸುವ ಮಂಗಳನ 3ಡಿ ಚಿತ್ರಗಳು
ಬೆಂಗಳೂರು, ಆಗಸ್ಟ್, 18: ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತಕ್ಕೆ ಹೊಸ ಕೀರ್ತಿ ತಂದುಕೊಟ್ಟ ಮಂಗಳಯಾನ ಮತ್ತಷ್ಟು ಚಿತ್ರಗಳನ್ನು ಸೆರೆಹಿಡಿದು ಕಳಿಸಿದೆ. ಭಾರತೀಯ ಬಾಹ್ಯಾಕಾಶದ ವಿಜ್ಞಾನಿಗಳು ಇದರ ಮೇಲೆ ನಿರಂತರ ಸಂಶೋಧನೆ ಶುರುಹಚ್ಚಿಕೊಂಡಿದ್ದಾರೆ.
ಮಂಗಳಯಾನದ ಯಶಸ್ಸು ಭಾರತಕ್ಕೆ ಹೊಸ ಕೀರ್ತಿ ತಂದುಕೊಟ್ಟಿತ್ತು. ಮಂಗಳ ಶೋಧಕ ಉಪಗ್ರಹ ಮಂಗಳನ ಭೂ ವೈಶಿಷ್ಟ್ಯಗಳ ಬಗೆಗೂ ಚಿತ್ರ ರವಾನಿಸಿತ್ತು. ಅಲ್ಲದೇ ಧೂಳು ಮಿಶ್ರಿತ ವಾತಾವರಣದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು, ಮಂಗಳನ ಮೇಲಿನ ಸೂರ್ಯಾಸ್ತವನ್ನು ಸೆರೆ ಹಿಡಿದು ಕಳಿಸಿತ್ತು.[ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ಹೇಗಿರುತ್ತದೆ?] 5 ಸಾವಿರ ಕಿಲೋಮೀಟರ್ ದೂರದಿಂದ ಚಿತ್ರಗಳನ್ನು ತೆಗೆದ ಚಿತ್ರಗಳನ್ನು ಇಸ್ರೋ ತನ್ನ ವೆಬ್ ತಾಣದಲ್ಲಿನ ಬಿಡುಗಡೆ ಮಾಡಿದ್ದು ಮಂಗಳನ ಅಂಗಳದ ಬಗ್ಗೆ ನಮಗಿದ್ದ ತಿಳಿವಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.(ಚಿತ್ರಗಳು: ಇಸ್ರೋ)

ಮಂಗಳನ ಅಂಗಳದ ಕಣಿವೆಗಳು
5000 ಕಿಲೋಮೀಟರ್ ಎತ್ತರದಿಂದ ಮಂಗಳನ ಮೇಲಿನ ಕಣಿವೆಯ ಚಿತ್ರ ತೆಗೆದ ಮಂಗಳಯಾನ. ಹಿಂದೆ ತೆಗೆದು ಕಳುಹಿಸಿದ ಚಿತ್ರಗಳಿಗಿಂತ ಇದು ಭಿನ್ನವಾಗಿದ್ದು ಯಾವ ಬಗೆಯ ಬದಲಾವಣೆ ನಡೆಯುತ್ತಿದೆ ಎಂಬುದನ್ನು ಆಳವಾಗಿ ಅಧ್ಯಯನ ನಡೆಸಲು ನೆರವಾಗುತ್ತದೆ.

ಸ್ವಾತಂತ್ರ್ಯ ದಿನವೇ ಬಂದ ಚಿತ್ರಗಳು
ಇಸ್ರೋ ಸ್ವಾತಂತ್ರ್ಯ ದಿನವೇ ಎಲ್ಲ ಚಿತ್ರಗಳನ್ನು ಬಿಡುಗಡೆ ಮಾಡಿ ದೇಶದ ನಾಗರಿಕರಿಗೆ ಕೊಡುಗೆ ನೀಡಿದೆ. 1857 ಕಿಲೋ ಮೀಟರ್ ಎತ್ತರದಿಂದ ಮಂಗಳನ ಮೇಲ್ಮೈ ನೋಡಿ.

ಮಂಗಳನ ಮೇಲ್ಮೈ ನೋಡಿ
ಮಂಗಳನ ಮೇಲ್ಮೈ ಮೇಲಿನ ಬದಲಾವಣೆಗಳನ್ನು ಹತ್ತಿರದಿಂದ ನೋಡುವ ಅವಕಾಶ ಕಲ್ಪಿಸಿಕೊಟ್ಟ ಮಂಗಳಯಾನ. ಅತೀ ಕಡಿಮೆ ವೆಚ್ಚದಲ್ಲಿ ಮಂಗಳನ ಅಂಗಳಕ್ಕೆ ಉಪಗ್ರಹ ಕಳಿಸಿದ ದಾಖಲೆಯನ್ನು ಭಾರತ ಮಾಡಿತ್ತು.

ಮೇ ತಿಂಗಳಲ್ಲೇ ತೆಗೆದ ಚಿತ್ರ
ಮಂಗಳಯಾನದ ಕಲರ್ಸ್ ಕ್ಯಾಮರಾ ಚಿತ್ರಗಳನ್ನು ಕಳೆದ ಮೇ ತಿಂಗಳಿನಲ್ಲೇ ಸರೆ ಹಿಡಿದಿತ್ತು. ಮೇಲ್ಮೈ ಆಳವನ್ನು ಅಳತೆ ಮಾಡಲು ಈ ಚಿತ್ರ ನೆರವು ನೀಡುತ್ತದೆ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications