ಪ್ಯಾಡ್ ವಿತರಣೆ: ಬಿಜೆಪಿ, ಕಾಂಗ್ರೆಸ್ ನಡುವೆ ಪೈಪೋಟಿ
ಶಿಲ್ಲಾಂಗ್, ಫೆಬ್ರವರಿ 21: ನಟ ಅಕ್ಷಯ್ ಕುಮಾರ್ ಅಭಿನಯದ 'ಪ್ಯಾಡ್ ಮ್ಯಾನ್' ಚಿತ್ರದ ಪ್ರಭಾವ, ವಿಧಾನಸಭೆ ಚುನಾವಣೆ ಮೇಲಾಗುತ್ತಿದೆ. ಮೇಘಾಲಯದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರರಿದ್ದು, ಮಹಿಳೆಯರಿಗೆ ಪ್ಯಾಡ್(ನ್ಯಾಪ್ ಕಿನ್) ವಿತರಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿ ನಡೆಸಿರುವ ಸುದ್ದಿ ಬಂದಿದೆ.
ಫೆಬ್ರವರಿ 27ರಂದು ಮೇಘಾಲಯದಲ್ಲಿ ಮತದಾನ ನಡೆಯಲಿದೆ. ಇಲ್ಲಿನ ಚುನಾವಣೆಯಲ್ಲಿ ವೈವಿಧ್ಯಮಯ ಪ್ರಚಾರ ಹಾಗೂ ಮತದಾರರ ಓಲೈಕೆ ವಿಧಾನವನ್ನು ಕಾಣಬಹುದಾಗಿದೆ. ಪ್ರಧಾನಿ ಮೋದಿ ಅವರೇ ಸಂಗೀತದ ಮೂಲಕ ಯುವ ಜನರನ್ನು ಸೆಳೆಯಲು ಕರೆ ನೀಡಿದ್ದಾರೆ.
ಈಗ ಅರುಣಾಚಲಂ ಮುರುಗನಾಥಮ್ ಅವರ ಜೀವನ ಆಧಾರಿತ ಚಿತ್ರ ಪ್ಯಾಡ್ ಮ್ಯಾನ್ ನಿಂದ ಸ್ಫೂರ್ತಿ ಪಡೆದ ಪಕ್ಷಗಳು, ಮಹಿಳೆಯರ ಪರ ನಿಂತಿವೆ.

ಕೇಂದ್ರ ಸರ್ಕಾರವು ನ್ಯಾಪ್ ಕಿನ್ ಮೇಲೆ ಜಿ ಎಸ್ ಟಿ ಹಾಕಿರುವುದನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಮುಖಂಡರು, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಉಚಿತವಾಗಿ ನ್ಯಾಪ್ ಕೀನ್ ಪಡೆಯಿರಿ ಎಂದು ಆಮಿಷ ಒಡ್ಡುತ್ತಿದ್ದಾರೆ.
ಇದಲ್ಲದೆ, ಕ್ರೈಸ್ತರನ್ನೇ ಹೆಚ್ಚಾಗಿ ಹೊಂದಿರುವ ಮೇಘಾಲಯದಲ್ಲಿ ಈ ಬಾರಿ ಜೇರುಸಲೇಮ್ ಗೆ ಯಾತ್ರೆ ಕಳಿಸುವ ಆಶ್ವಾಸನೆ ನೀಡಲಾಗಿದೆ. 50 ಮಂದಿ ಹಿರಿಯ ನಾಗರಿಕರಿಗೆ ಸಬ್ಸಿಡಿ ದರದಲ್ಲಿ ಜೇರುಸಲೇಮ್ ಯಾತ್ರೆ ಮಾಡಿಸಲು ಬಿಜೆಪಿ ಮುಂದಾಗಿದೆ.
ಮೇಘಾಲಯದಲ್ಲಿ ಖಾಸಿ, ಗರೋ ಹಾಗೂ ಜೈನ್ತಿಯಾ ಬುಡಕಟ್ಟು ಜನಾಂಗದ ಮಹಿಳೆಯರನ್ನು ಗುರಿಯನ್ನಾಗಿಸಿಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಪ್ರಚಾರ ಕಾರ್ಯ ನಡೆಸುತ್ತಿವೆ. ಮೇಘಾಲಯದಲ್ಲಿ 9.29 ಲಕ್ಷ ಮಹಿಳಾ ಮತದಾರರಿದ್ದರೆ, 9.12 ಪುರುಷ ಮತದಾರರಿದ್ದಾರೆ.
ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ತಂತ್ರ ಇಲ್ಲಿ ನಡೆಯುವುದಿಲ್ಲ. ಇಲ್ಲಿನ ಗ್ರಾಮೀಣ ಹಾಗೂ ಬುಡಕಟ್ಟು ಮಹಿಳೆಯರಿಗೆ ನ್ಯಾಪ್ ಕೀನ್ ಬಳಕೆ ಬಗ್ಗೆ ಅರಿವು ಮೂಡಿಸುವಷ್ಟು ಸಮಯ ಈಗ ಇಲ್ಲ ಎಂದು ಮಹಿಳಾ ಸಂಘಟನೆಯ ಮುಖ್ಯಸ್ಥರಾದ ಆಗ್ನೆಸ್ ಖಾರ್ಸಿಂಗ್ ಹೇಳಿದ್ದಾರೆ.
2013ರಲ್ಲಿ 60 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ 29 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದಿತ್ತು. ಈ ಬಾರಿ ಮತದಾನ ಫೆಬ್ರವರಿ 27ರಂದು ನಡೆಯಲಿದ್ದು, ಮಾರ್ಚ್ 03ರಂದು ಫಲಿತಾಂಶ ಹೊರಬರಲಿದೆ.
-
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications