ಅಮೆರಿಕ ಚುನಾವಣೆ ಹೈಜಾಕ್ ಮಾಡಿದ ಮೋದಿ ಸ್ಟ್ರೋಕ್
ಇದು ಮೋದಿಯವರ ಮಾಸ್ಟರ್ ಸ್ಟ್ರೋಕ್ ಅಲ್ಲದೆ ಮತ್ತೇನು? ಜನಸಾಮಾನ್ಯರಿರಲಿ ಅವರನ್ನು ಸದಾ ಟೀಕಿಸುವ ರಾಜಕಾರಣಿಗಳು ಕೂಡ ಕಕ್ಕಾಬಿಕ್ಕಿಯಾದರು, ಕೆಲವರು ಬಾಯಿ ಬಿಡಲು ಹಿಂಜರಿದರು.
ಬೆಂಗಳೂರು, ನವೆಂಬರ್ 09 : ಮಂಗಳವಾರ ಇಡೀ ಜಗತ್ತು ಅಮೆರಿಕದಲ್ಲಿ ಯಾರು ಯಾರಿಗೆ ವೋಟು ಹಾಕುತ್ತಾರೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕುಳಿತಿದ್ದರೆ, ಅದೇ ಸಮಯದಲ್ಲಿ ಇಡೀ ಜಗತ್ತಿನ ಗಮನವನ್ನು ತನ್ನೆಡೆ ಸೆಳೆದಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಟರ್ ಸ್ಟ್ರೋಕ್!
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರಾ, ಹಿಲರಿ ಕ್ಲಿಂಟನ್ ಗೆಲ್ಲುತ್ತಾರಾ ಎಂದು ಚರ್ಚೆ ನಡೆಯುತ್ತಿದ್ದರೆ, ಆ ಚರ್ಚೆಯನ್ನು ಮೀರಿ ಗಾಂಧೀಜಿ ಚಿತ್ರವಿರುವ ಭಾರತದ ನೋಟುಗಳ ಬಗ್ಗೆ ಬಿಟ್ಟುಬಿಡದಂತೆ ಚರ್ಚೆಯಾಗುವಂತೆ ಮಾಡಿದ್ದು ನರೇಂದ್ರ ಮೋದಿ ಅವರು ಬೋಲ್ಡ್ ನಡೆ.
ನರೇಂದ್ರ ಮೋದಿ ಅವರ ಭಾಷಣ ಶುರುವಾಗುತ್ತಿದ್ದಂತೆ ಭಾರತದ ಭದ್ರತಾ ವ್ಯವಸ್ಥೆಯ ಬಗ್ಗೆ ಅಥವಾ ಕಪ್ಪು ಹಣದ ಬಗ್ಗೆ ಹೇಳಿಕೆ ನೀಡಬಹುದು ಎಂದು ಪತ್ರಕರ್ತರು ಊಹಿಸಿದ್ದರು. ಆದರೆ, ಆದದ್ದೇನು? ಮಂಗಳವಾರ ರಾತ್ರಿಯಿಂದಲೇ 500 ಮತ್ತು 1000 ರು. ನೋಟುಗಳನ್ನು ನಿಷೇಧಿಸುವುದಾಗಿ ಹೇಳಿಕೆ ನೀಡಿದ್ದು, ಜನರಿಗೆ ಮಾತ್ರವಲ್ಲ ಪತ್ರಕರ್ತರಿಗೂ ಶಾಕ್ ನೀಡಿತ್ತು. [ಚಾಯ್ ವಾಲಾ ಪ್ರಧಾನಮಂತ್ರಿಯಾದರೆ ಹೀಗೇ ಆಗೋದು!]

ಈ ಘೋಷಣೆ ಇದ್ದಕ್ಕಿದ್ದಂತೆ ಸುದ್ದಿ ಬಿತ್ತರಿಸುವ ಪ್ರಿಯಾರಿಟಿಯನ್ನೇ ಅದಲುಬದಲು ಮಾಡಿತು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಕವರ್ ಮಾಡುತ್ತಿದ್ದವರು, ಅದನ್ನು ಅಲ್ಲೇ ಬಿಟ್ಟು, ರುಪಾಯಿ ಕಡೆಗೆ ತಿರುಗಿದರು. ಚುನಾವಣೆಯನ್ನು ಅಲ್ಲೇ ಬಿಟ್ಟು, ಮೋದಿ ಕ್ರಮದಿಂದ ಭಾರತದ ಜನತೆಯ ಮೇಲೆ ಆಗುವ ಪರಿಣಾಮಗಳೇನು, ಯಾರು ಏನು ಮಾಡಬೇಕು ಎಂಬಿತ್ಯಾದಿ ಸುದ್ದಿಗಳು ಬಿತ್ತರವಾಗತೊಡಗಿದವು.
ಸಾರ್ವಜನಿಕರು ಕೂಡ ಟಿವಿ ಆಫ್ ಮಾಡಿ, ಸೀರಿಯಲ್ಲನ್ನು ಅಲ್ಲೇ ಬಿಟ್ಟು, ಊಟವನ್ನು ಅರ್ಧಕ್ಕೇ ನಿಲ್ಲಿಸಿ ಎಟಿಎಂಕಡೆಗೆ ಕಾಲು ಹಾಕಿದರು. ಸರದಿಯಲ್ಲಿ ನಿಂತವರಲ್ಲಿಯೂ, ತಮ್ಮಲ್ಲಿರುವ ಹಣವನ್ನು ಬದಲಿಸಿಕೊಳ್ಳುವುದು ಹೇಗೆ, ಎಟಿಎಂನಲ್ಲಿ ಹಣವೇ ಸಿಗದಿದ್ದರೆ ಏನು ಗತಿ, 500 ಮತ್ತು 1000 ರು. ನೋಟು ಸ್ವೀಕರಿಸದಿದ್ದರೆ ಏನು ಮಾಡುವುದು ಇತ್ಯಾದಿ ಇತ್ಯಾದಿ ಮಾತುಕತೆ. [ಕಪ್ಪು ಹಣ ಮಾಲೀಕರು ರಂಗೋಲಿ ಅಡಿ ತೂರಬಹುದು, ಎಚ್ಚರ!]
ಇದು ಮೋದಿಯವರ ಮಾಸ್ಟರ್ ಸ್ಟ್ರೋಕ್ ಅಲ್ಲದೆ ಮತ್ತೇನು? ಜನಸಾಮಾನ್ಯರಿರಲಿ ಅವರನ್ನು ಸದಾ ಟೀಕಿಸುವ ರಾಜಕಾರಣಿಗಳು ಕೂಡ ಕಕ್ಕಾಬಿಕ್ಕಿಯಾದರು, ಕೆಲವರು ಬಾಯಿ ಬಿಡಲು ಹಿಂಜರಿದರು. ಇಡೀ ವಿಶ್ವವೇ ಕಣ್ಣಿಟ್ಟಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಮೋದಿ ಒಂದೇ ನಡೆಯಲ್ಲಿ ಹೈಜಾಕ್ ಮಾಡಿದ್ದು ಸಣ್ಣ ಸಂಗತಿಯೇನಲ್ಲ. [ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ]
-
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ












Click it and Unblock the Notifications