ಅಮೆರಿಕ ಚುನಾವಣೆ ಹೈಜಾಕ್ ಮಾಡಿದ ಮೋದಿ ಸ್ಟ್ರೋಕ್
ಇದು ಮೋದಿಯವರ ಮಾಸ್ಟರ್ ಸ್ಟ್ರೋಕ್ ಅಲ್ಲದೆ ಮತ್ತೇನು? ಜನಸಾಮಾನ್ಯರಿರಲಿ ಅವರನ್ನು ಸದಾ ಟೀಕಿಸುವ ರಾಜಕಾರಣಿಗಳು ಕೂಡ ಕಕ್ಕಾಬಿಕ್ಕಿಯಾದರು, ಕೆಲವರು ಬಾಯಿ ಬಿಡಲು ಹಿಂಜರಿದರು.
ಬೆಂಗಳೂರು, ನವೆಂಬರ್ 09 : ಮಂಗಳವಾರ ಇಡೀ ಜಗತ್ತು ಅಮೆರಿಕದಲ್ಲಿ ಯಾರು ಯಾರಿಗೆ ವೋಟು ಹಾಕುತ್ತಾರೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕುಳಿತಿದ್ದರೆ, ಅದೇ ಸಮಯದಲ್ಲಿ ಇಡೀ ಜಗತ್ತಿನ ಗಮನವನ್ನು ತನ್ನೆಡೆ ಸೆಳೆದಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಟರ್ ಸ್ಟ್ರೋಕ್!
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರಾ, ಹಿಲರಿ ಕ್ಲಿಂಟನ್ ಗೆಲ್ಲುತ್ತಾರಾ ಎಂದು ಚರ್ಚೆ ನಡೆಯುತ್ತಿದ್ದರೆ, ಆ ಚರ್ಚೆಯನ್ನು ಮೀರಿ ಗಾಂಧೀಜಿ ಚಿತ್ರವಿರುವ ಭಾರತದ ನೋಟುಗಳ ಬಗ್ಗೆ ಬಿಟ್ಟುಬಿಡದಂತೆ ಚರ್ಚೆಯಾಗುವಂತೆ ಮಾಡಿದ್ದು ನರೇಂದ್ರ ಮೋದಿ ಅವರು ಬೋಲ್ಡ್ ನಡೆ.
ನರೇಂದ್ರ ಮೋದಿ ಅವರ ಭಾಷಣ ಶುರುವಾಗುತ್ತಿದ್ದಂತೆ ಭಾರತದ ಭದ್ರತಾ ವ್ಯವಸ್ಥೆಯ ಬಗ್ಗೆ ಅಥವಾ ಕಪ್ಪು ಹಣದ ಬಗ್ಗೆ ಹೇಳಿಕೆ ನೀಡಬಹುದು ಎಂದು ಪತ್ರಕರ್ತರು ಊಹಿಸಿದ್ದರು. ಆದರೆ, ಆದದ್ದೇನು? ಮಂಗಳವಾರ ರಾತ್ರಿಯಿಂದಲೇ 500 ಮತ್ತು 1000 ರು. ನೋಟುಗಳನ್ನು ನಿಷೇಧಿಸುವುದಾಗಿ ಹೇಳಿಕೆ ನೀಡಿದ್ದು, ಜನರಿಗೆ ಮಾತ್ರವಲ್ಲ ಪತ್ರಕರ್ತರಿಗೂ ಶಾಕ್ ನೀಡಿತ್ತು. [ಚಾಯ್ ವಾಲಾ ಪ್ರಧಾನಮಂತ್ರಿಯಾದರೆ ಹೀಗೇ ಆಗೋದು!]

ಈ ಘೋಷಣೆ ಇದ್ದಕ್ಕಿದ್ದಂತೆ ಸುದ್ದಿ ಬಿತ್ತರಿಸುವ ಪ್ರಿಯಾರಿಟಿಯನ್ನೇ ಅದಲುಬದಲು ಮಾಡಿತು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಕವರ್ ಮಾಡುತ್ತಿದ್ದವರು, ಅದನ್ನು ಅಲ್ಲೇ ಬಿಟ್ಟು, ರುಪಾಯಿ ಕಡೆಗೆ ತಿರುಗಿದರು. ಚುನಾವಣೆಯನ್ನು ಅಲ್ಲೇ ಬಿಟ್ಟು, ಮೋದಿ ಕ್ರಮದಿಂದ ಭಾರತದ ಜನತೆಯ ಮೇಲೆ ಆಗುವ ಪರಿಣಾಮಗಳೇನು, ಯಾರು ಏನು ಮಾಡಬೇಕು ಎಂಬಿತ್ಯಾದಿ ಸುದ್ದಿಗಳು ಬಿತ್ತರವಾಗತೊಡಗಿದವು.
ಸಾರ್ವಜನಿಕರು ಕೂಡ ಟಿವಿ ಆಫ್ ಮಾಡಿ, ಸೀರಿಯಲ್ಲನ್ನು ಅಲ್ಲೇ ಬಿಟ್ಟು, ಊಟವನ್ನು ಅರ್ಧಕ್ಕೇ ನಿಲ್ಲಿಸಿ ಎಟಿಎಂಕಡೆಗೆ ಕಾಲು ಹಾಕಿದರು. ಸರದಿಯಲ್ಲಿ ನಿಂತವರಲ್ಲಿಯೂ, ತಮ್ಮಲ್ಲಿರುವ ಹಣವನ್ನು ಬದಲಿಸಿಕೊಳ್ಳುವುದು ಹೇಗೆ, ಎಟಿಎಂನಲ್ಲಿ ಹಣವೇ ಸಿಗದಿದ್ದರೆ ಏನು ಗತಿ, 500 ಮತ್ತು 1000 ರು. ನೋಟು ಸ್ವೀಕರಿಸದಿದ್ದರೆ ಏನು ಮಾಡುವುದು ಇತ್ಯಾದಿ ಇತ್ಯಾದಿ ಮಾತುಕತೆ. [ಕಪ್ಪು ಹಣ ಮಾಲೀಕರು ರಂಗೋಲಿ ಅಡಿ ತೂರಬಹುದು, ಎಚ್ಚರ!]
ಇದು ಮೋದಿಯವರ ಮಾಸ್ಟರ್ ಸ್ಟ್ರೋಕ್ ಅಲ್ಲದೆ ಮತ್ತೇನು? ಜನಸಾಮಾನ್ಯರಿರಲಿ ಅವರನ್ನು ಸದಾ ಟೀಕಿಸುವ ರಾಜಕಾರಣಿಗಳು ಕೂಡ ಕಕ್ಕಾಬಿಕ್ಕಿಯಾದರು, ಕೆಲವರು ಬಾಯಿ ಬಿಡಲು ಹಿಂಜರಿದರು. ಇಡೀ ವಿಶ್ವವೇ ಕಣ್ಣಿಟ್ಟಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಮೋದಿ ಒಂದೇ ನಡೆಯಲ್ಲಿ ಹೈಜಾಕ್ ಮಾಡಿದ್ದು ಸಣ್ಣ ಸಂಗತಿಯೇನಲ್ಲ. [ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ]
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications