'ಯುಎಸ್ಎ ಖಾತೆಯಲ್ಲಿ ಭಾರತದ ಕೋಟ್ಯಂತರ ದುಡ್ಡಿದೆ'
ನವದೆಹಲಿ, ಮಾ. 06: ಅಮೆರಿಕದ ಪೆಂಟಗನ್ ನಿಯಂತ್ರಣದ ಬ್ಯಾಂಕ್ ಖಾತೆಯಲ್ಲಿ ಭಾರತಕ್ಕೆ ಸೇರಿದ ಕೋಟ್ಯಂತರ ಮೊತ್ತವಿದೆ. ಆದರೆ, ನಾವು ಹೊಸ ಶಸ್ತ್ರಾಸ್ತ್ರ ಖರೀದಿಗಾಗಿ ಮತ್ತೆ ಮತ್ತೆ ಹಣ ನೀಡುತ್ತಿದ್ದೇವೆ ಎಂದು ರಕ್ಷಣಾ ಖಾತೆ ಸಚಿವ ಮನೋಹರ್ ಪಾರಿಕ್ಕಾರ್ ಅವರು ಹೇಳಿದ್ದಾರೆ.
ರಕ್ಷಣಾ ಸಚಿವಾಲಯ(MoD) ಹಣವನ್ನು ಹೇಗೆ ನಿರ್ವಹಿಸುತ್ತಿದೆ ಎಂಬ ಬಗೆಗಿನ ಚಿತ್ರಣವೊಂದನ್ನು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಬಹಿರಂಗಪಡಿಸಿದ್ದಾರೆ. ಈ ಮೊದಲೇ ಅಮೆರಿಕದ ಪೆಂಟಾ ಗನ್ಗೆ ಪಾವತಿಸಲಾದ 300 ಕೋಟಿ ಡಾಲರ್ ಅಲ್ಲೇ ಕೊಳೆಯುತ್ತಿದೆ. ಹೊಸ ಖರೀದಿಗೆ ಮತ್ತೆ ಹಣ ನೀಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದೇಶಿ ಸೇನಾ ವ್ಯಾಪಾರ ಯೋಜನೆ(FMS) ಯಡಿ ಶಸ್ತ್ರಾಸ್ತ್ರಗಳ ಖರೀದಿಗೆ ಪಾವತಿ ಮಾಡಿದ್ದ 300 ಕೋಟಿ ಡಾಲರ್ (3 ಬಿಲಿಯನ್ ಡಾಲರ್) ಮೊತ್ತ ಇನ್ನೂ ಪೆಂಟಾಗನ್ ಖಾತೆಯಲ್ಲೇ ಇದೆ. ಬೋಯಿಂಗ್ ಹಾಗೂ ಲಾಕ್ಹೀಡ್ ಮಾರ್ಟಿನ್ನಂಥ ಸಂಸ್ಥೆಗಳಿಗೆ ಪಾವತಿಸಬೇಕಾದ ಹಣ ಇದಾಗಿದೆ ಎಂದು ಮನೋಹರ್ ವಿವರಿಸಿದರು.
ಅಸಮರ್ಪಕ ನಿರ್ವಹಣೆಯಿಂದ, ಖಾತೆಯ ಬಗ್ಗೆ ಸೂಕ್ತ ಗಮನ ನೀಡದಿರುವುದರಿಂದ 300 ಕೋಟಿ ಡಾಲರ್ ಹಣ ಅಲ್ಲಿ ರಾಶಿ ಬಿದ್ದಿದೆ. ಇದಕ್ಕೆ ಯಾವ ಬಡ್ಡಿಯೂ ಬರುತ್ತಿಲ್ಲ. ಕೇವಲ ಅವರ ಖಾತೆಯಲ್ಲಿ ಬಿದ್ದಿದೆ ಎಂದು ಪಾರಿಕ್ಕರ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಇದನ್ನು ಗಮನಿಸಿ ಹಣವನ್ನು ವಾಪಸ್ ಪಡೆದು ಹಣಕಾಸು ಸಚಿವಾಲಯಕ್ಕೆ ನೀಡಲಾಗಿದೆ. ಇದೀಗ 300 ಕೋಟಿ ಡಾಲರ್ ನಿಂದ ಈ ಪ್ರಮಾಣ 170 ರಿಂದ 180 ಕೋಟಿ ಡಾಲರ್ಗೆ ಇಳಿದಿದೆ. ಕಳೆದ ವರ್ಷ 6,000 ಕೋಟಿ ಡಾಲರ್ ಪಾವತಿಸಿದ್ದು, ಸುಮಾರು 800 ಕೋಟಿ ಡಾಲರ್ ಉಳಿಸಿದ್ದೇವೆ ಎಂದು ಸಮರ್ಥಿಸಿಕೊಂಡರು. ಇದೀಗ ಕಟ್ಟು ನಿಟ್ಟಾಗಿ, ಹಣಪಾವತಿ ವಿಧಾನದ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿಸಿದರು.
ಮುಂಬರುವ ವರ್ಷಗಳಲ್ಲಿ ಸುಮಾರು 1 ಲಕ್ಷ ಕೋಟಿ ರು ಮೌಲ್ಯದ ಹೊಸ ಖರೀದಿ ವ್ಯವಹಾರವನ್ನು ರಕ್ಷಣಾ ಇಲಾಖೆ ಮಾಡಲಿದೆ. ರಫೆಲ್ ಸಂಸ್ಥೆ ಜತೆ 63,000 ಕೋಟಿ ರು ಪ್ರಮುಖವಾದ ಒಪ್ಪಂದವಾಗಲಿದೆ ಎಂದರು.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications