ಮಹಾರಾಷ್ಟ್ರದ ದೇವಸ್ಥಾನದೊಳಗೆ ಶಸ್ತ್ರಸಜ್ಜಿತ ‘ಭಯೋತ್ಪಾದಕ’ನಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ!
ವ್ಯಕ್ತಿಯೊಬ್ಬ ಸಶಸ್ತ್ರ 'ಭಯೋತ್ಪಾದಕ'ನಿಗೆ ಕಪಾಳಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯ ದೇವ್ಪುರ ಪ್ರದೇಶದ ಶ್ರೀ ಸ್ವಾಮಿನಾರಾಯಣ ದೇವಸ್ಥಾನದೊಳಗೆ ನಡೆದಿದೆ. ಮುಖವಾಡದ 'ಭಯೋತ್ಪಾದಕ'ನಿಗೆ ಜೋರಾಗಿ ಕಪಾಳಮೋಕ್ಷ ಮಾಡುವ ಮೂಲಕ ವ್ಯಕ್ತಿ ಅನುಕರಣೀಯ ಧೈರ್ಯವನ್ನು ತೋರಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏಕಾಏಕಿ ಸ್ವಾಮಿನಾರಾಯಣ ದೇವಸ್ಥಾನದೊಳಗೆ ನುಗ್ಗಿದ ಮುಖವಾಡದ 'ಭಯೋತ್ಪಾದಕ'ರು ವ್ಯಕ್ತಿಯೊಬ್ಬನಿಗೆ ರೈಫಲ್ ತೋರಿಸಿ ಬೆದರಿಸಿದರು. ಇಬ್ಬರು ಭಯೋತ್ಪಾದಕರು ರೈಫಲ್ನೊಂದಿಗೆ ಶಸ್ತ್ರಸಜ್ಜಿತನಾಗಿದ್ದರು. ರೈಫಲ್ ತೋರಿಸಿದ ತಕ್ಷಣ ವ್ಯಕ್ತಿ ಮಂಡಿಯೂರಿ ಕುಳಿತಿದ್ದಾನೆ. ಸ್ಥಳದಲ್ಲಿರುವವರು ಗಾಬರಿಗೊಂಡು ಆ ಸ್ಥಳದಿಂದ ಕೊಂಚ ದೂರಕ್ಕೆ ಓಡಿದ್ದಾರೆ.

ಕೊಂಚ ದೂರದಿಂದ ಘಟನೆಯನ್ನು ವೀಕ್ಷಿಸಿದ್ದಾರೆ. ಆದರೆ ಕೆಲವು ಪುರುಷರು ಹತ್ತಿರಕ್ಕೆ ಹೋಗಿ ಘಟನೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಗುಂಪಿನಿಂದ ಬಂದ ವ್ಯಕ್ತಿಯೊಬ್ಬ ರೈಫಲ್ನೊಂದಿಗೆ ನಿಂತಿದ್ದ ಭಯೋತ್ಪಾದಕನಿಗೆ ಧೈರ್ಯದಿಂದ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಕೋಪಗೊಂಡ ವ್ಯಕ್ತಿಯನ್ನು ಭಯೋತ್ಪಾದಕರಿಂದ ಕೊಂಚ ದೂರ ಕರೆದುಕೊಂಡು ಹೋಗಲಾಯಿತು. ಆದರೆ ಈ ವಿಡಿಯೋ ಹಿಂದಿನ ಸತ್ಯ ಬೇರೆನೇ ಆಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ
ಈ ದೃಶ್ಯ ಮೇಲ್ನೋಟಕ್ಕೆ ಸ್ಪಷ್ಟವಾಗಿ "ಭಯೋತ್ಪಾದಕ ದಾಳಿ" ಮತ್ತು "ಭಕ್ತರನ್ನು ಒತ್ತೆಯಾಳುಗಳನ್ನಾಗಿ ಮಾಡುವಂತೆ" ಗೋಚರಿಸಿದರೂ ಇದು ಪೊಲೀಸರು ನಡೆಸಿದ ಅಣಕು ಡ್ರಿಲ್ನ ಭಾಗವಾಗಿತ್ತು. ಭಯೋತ್ಪಾದಕನೊಂದು ಭಾವಿಸಿ ಪೊಲೀಸ್ ಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು 35 ವರ್ಷದ ಪ್ರಶಾಂತ್ ಕುಲಕರ್ಣಿ ಎಂದು ಗುರುತಿಸಲಾಗಿದೆ.
महाराष्ट्र के धुले में एक मंदिर में चल रही थी पुलिस की मॉकड्रिल.
— Vivek Gupta (@imvivekgupta) August 8, 2023
मॉकड्रिल देख वहा पर मौजूद छोटे बच्चे डर की वजह से रोने लगे.
इतने में बच्चो के परिवार में से एक आदमी ने मॉक ड्रिल के दौरान ही पुलिस को तप्पड़ जड़ दिया..#Maharashtra pic.twitter.com/hmjQIc3p30
"ಭಯೋತ್ಪಾದಕರು" ಹಠಾತ್ ಆಗಮನದಿಂದ ಭಕ್ತರು ಭಯಭೀತರಾಗಿದ್ದರು ಮತ್ತು ಪ್ರಶಾಂತ್ ಕುಲಕರ್ಣಿ ಅವರ ಸ್ವಂತ ಮಗಳು ಸೇರಿದಂತೆ ಕೆಲವು ಮಕ್ಕಳು ಅಳಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ಇದು ಅವನಿಗೆ ಕೋಪ ತರಿಸಿದೆ. ತಕ್ಷಣ ಅವನು "ಭಯೋತ್ಪಾದಕ"ರ ಕಡೆಗೆ ಓಡಿಹೋದನು. ಅವರ ಮೇಲೆ ಕೂಗಾಡಿದನು. ನಂತರ ಅವರಿಗೆ ಬಲವಾಗಿ ಹೊಡೆದನು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ವೀಡಿಯೊಗೆ ಹಲವಾರು ಕಾಮೆಂಟ್ಗಳು ಬಂದಿವೆ. ಕೆಲವನ್ನು ಹಂಚಿಕೊಳ್ಳಲಾಗಿದೆ.
'ಇದು ನಿಜವಾದ ಒಳ್ಳೆಯ ಕೆಲಸ, ವ್ಯಕ್ತಿಯ ಧೈರ್ಯಕ್ಕೆ ಮೆಚ್ಚಬೇಕು' ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
'ರೈಫಲ್ನೊಂದಿಗೆ ಶಸ್ತ್ರಸಜ್ಜಿತನಾದವನ ಮೇಲೆ ಕೈ ಮಾಡುವುದು ಗುಂಡಿಗೆ ಬೇಕು' ಮತ್ತೊಬ್ಬರ ಕಾಮೆಂಟ್
'ಇದು ನಿಜವಾದ ಭಯೋತ್ಪಾದಕ ದಾಳಿ ಆಗಿದ್ದರೆ, ವ್ಯಕ್ತಿಯ ಪ್ರತಿಕ್ರಿಯೆ ಎಲ್ಲರಿಗೂ ಪಾಠವಾಗುತ್ತಿತ್ತು' ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
'ಸಾರ್ವಜನಿಕವಾಗಿ ಇಂತಹ ಅಣಕು ಡ್ರಿಲ್ ಮಾಡುವಾಗ ಜಾಗರೂಕರಾಗಿರಬೇಕು' ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
'ಇದು ಪೊಲೀಸರ ಅಣಕು ಡ್ರಿಲ್ ಆದರೂ ಸಾರ್ವಜನಿಕರು ನಿಜವೆಂದು ಭಾವಿಸಿ ಭಯಭೀತರಾಗಿದ್ದಾರೆ, ಇದರಲ್ಲಿ ಪುಟ್ಟ ಮಕ್ಕಳೂ ಗಾಬರಿಯಾಗಿದ್ದಾರೆ'
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ












Click it and Unblock the Notifications