ಮಹಾರಾಷ್ಟ್ರ, ಹರಿಯಾಣ ಫಲಿತಾಂಶ: ಎಕ್ಸಿಟ್ ಪೋಲ್ ಧೂಳೀಪಟ
ಮತದಾನ ಮಾಡಿ ಹೊರಬರುವ ಮತದಾರನ ಚಿತ್ತ, ಯಾವ ಪಕ್ಷದತ್ತ ಎನ್ನುವ ಅಂಶವನ್ನು ಇಟ್ಟುಕೊಂಡು ನಡೆಸಲಾಗುವ ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ) ಇತ್ತೀಚಿನ ದಿನಗಳಲ್ಲಿ, ಫಲಿತಾಂಶಕ್ಕೆ ಹತ್ತಿರವಾದ ಸಮೀಕ್ಷೆ ನೀಡುವಲ್ಲಿ ವಿಫಲವಾಗುತ್ತಿದೆಯಾ?
ಮಹಾರಾಷ್ಟ್ರ ಮತ್ತು ಹರಿಯಾಣದ ಅಸೆಂಬ್ಲಿ ಚುನಾವಣೆಯ ಬಗ್ಗೆ ವಿವಿಧ ವಾಹಿನಿಗಳು ಜಂಟಿಯಾಗಿ ನಡೆಸಿದ್ದ ಸಮೀಕ್ಷೆ ಮತ್ತು ಚುನಾವಣಾ ಫಲಿತಾಂಶವನ್ನು ಒಂದಕ್ಕೊಂದು ತಾಳೆ ಹಾಕಿದರೆ, ಬಹುತೇಕ ಎಲ್ಲಾ ವಾಹಿನಿಗಳು, ಕರಾರುವಕ್ಕಾದ ರಿಸಲ್ಟ್ ನೀಡುವಲ್ಲಿ ವಿಫಲವಾಗಿದೆ.
ಎರಡೂ ರಾಜ್ಯಗಳೂ ಬಿಜೆಪಿಗೆ ಸುಲಭದ ತುತ್ತು ಎಂದಿದ್ದ ಸಮೀಕ್ಷಾ ಫಲಿತಾಂಶ ಉಲ್ಟಾ ಹೊಡೆದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಬೆಂಬಲವಿಲ್ಲದೇ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿತ್ತು.
ಇನ್ನು, ಹರಿಯಾಣದಲ್ಲಂತೂ, ಕಾಂಗ್ರೆಸ್ ಡಬಲ್ ಡಿಜಿಟ್ ಕ್ರಾಸ್ ಮಾಡುವುದು ಕಷ್ಟ ಎಂದು ಹೇಳಲಾಗಿತ್ತು. ಇಲ್ಲೂ, ಮತಗಟ್ಟೆ ಸಮೀಕ್ಷೆ ತಲೆಕೆಳಗಾಗಿದೆ. ಹಾಗಿದ್ದರೆ, ಸಮೀಕ್ಷೆ ಹೇಳಿದ್ದೇನು, ನೈಜ ಫಲಿತಾಂಶ ಬಂದಿದ್ದೇನು? ಒಂದು ನೋಟ..

ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ
ಮಹಾರಾಷ್ಟ್ರ ಚುನಾವಣಾ ಫಲಿತಾಂಶ
ಒಟ್ಟು ಸ್ಥಾನಗಳು: 288
ಬಿಜೆಪಿ: 105
ಶಿವಸೇನೆ: 56
ಕಾಂಗ್ರೆಸ್: 44
ಎನ್ಸಿಪಿ: 54
ಇತರರು: 29

ಹರ್ಯಾಣ ಅಸೆಂಬ್ಲಿ ಚುನಾವಣೆ
ಹರ್ಯಾಣ ಅಸೆಂಬ್ಲಿ ಚುನಾವಣೆ
ಒಟ್ಟು ಸ್ಥಾನಗಳು: 90
ಬಿಜೆಪಿ: 40
ಕಾಂಗ್ರೆಸ್: 31
ಜೆಜೆಪಿ: 10
ಇತರರು: 09

ಮತಗಟ್ಟೆ ಸಮೀಕ್ಷೆ - ಮಹಾರಾಷ್ಟ್ರ - 1
ಮತಗಟ್ಟೆ ಸಮೀಕ್ಷೆ - ಮಹಾರಾಷ್ಟ್ರ
ಇಂಡಿಯಾ ಟುಡೇ-ಏಕ್ಸಿಸ್ - ಮೈ ಇಂಡಿಯಾ: ಬಿಜೆಪಿ ಮೈತ್ರಿಕೂಟ 194+, ಕಾಂಗ್ರೆಸ್ ಮೈತ್ರಿಕೂಟ 72-90
ಟೈಮ್ಸ್ ನೌ: ಬಿಜೆಪಿ ಮೈತ್ರಿಕೂಟ 230+, ಕಾಂಗ್ರೆಸ್ ಮೈತ್ರಿಕೂಟ 48+
ರಿಪಬ್ಲಿಕ್ ಟಿವಿ - ಜನ್ ಕೀ ಬಾತ್: ಬಿಜೆಪಿ ಮೈತ್ರಿಕೂಟ 223+, ಕಾಂಗ್ರೆಸ್ ಮೈತ್ರಿಕೂಟ 54+

ಮತಗಟ್ಟೆ ಸಮೀಕ್ಷೆ - ಮಹಾರಾಷ್ಟ್ರ - 2
ಮತಗಟ್ಟೆ ಸಮೀಕ್ಷೆ - ಮಹಾರಾಷ್ಟ್ರ - 2
ಎಬಿಪಿ - ಸಿವೋಟರ್ : ಬಿಜೆಪಿ ಮೈತ್ರಿಕೂಟ 204+, ಕಾಂಗ್ರೆಸ್ ಮೈತ್ರಿಕೂಟ 69, ಇತರರು 15
ನ್ಯೂಸ್ ಎಕ್ಸ್ - ಪೋಲ್ ಸ್ಟಾರ್: ಬಿಜೆಪಿ ಮೈತ್ರಿಕೂಟ 200+, ಕಾಂಗ್ರೆಸ್ ಮೈತ್ರಿಕೂಟ 80+, ಇತರರು 6-10
ಟಿವಿ 9 - ಸಿಸಿರೋ: ಬಿಜೆಪಿ ಮೈತ್ರಿಕೂಟ 197+, ಕಾಂಗ್ರೆಸ್ ಮೈತ್ರಿಕೂಟ 75+, ಇತರರು 16

ಮತಗಟ್ಟೆ ಸಮೀಕ್ಷೆ - ಹರಿಯಾಣ
ಮತಗಟ್ಟೆ ಸಮೀಕ್ಷೆ - ಹರಿಯಾಣ
ನ್ಯೂಸ್ ಎಕ್ಸ್, ಏಕ್ಸಿಸ್ ಮೈ ಇಂಡಿಯಾ: ಬಿಜೆಪಿ 77, ಕಾಂಗ್ರೆಸ್ 11, ಇತರರು 02
ಎಬಿಪಿ - ಸಿವೋಟರ್ : ಬಿಜೆಪಿ ಮೈತ್ರಿಕೂಟ 204+, ಕಾಂಗ್ರೆಸ್ ಮೈತ್ರಿಕೂಟ 69, ಇತರರು 15
ನ್ಯೂಸ್ 18: ಬಿಜೆಪಿ 75, ಕಾಂಗ್ರೆಸ್ 10, ಇತರರು 5
ರಿಪಬ್ಲಿಕ್ ಟಿವಿ - ಜನ್ ಕೀ ಬಾತ್: ಬಿಜೆಪಿ 57+, ಕಾಂಗ್ರೆಸ್ 17+, ಇತರರು 16
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications