ಮಹಾರಾಷ್ಟ್ರ ಮಳೆ: ರಾಯಗಡ ಮತ್ತು ರತ್ನಗಿರಿಯಲ್ಲಿ 2 ದಿನಗಳ ಕಾಲ ಆರೆಂಜ್ ಅಲರ್ಟ್
ಮುಂಬೈ ಜುಲೈ 1: ಮುಂಬೈನ ಪ್ರಾದೇಶಿಕ ಹವಾಮಾನ ಕೇಂದ್ರ ಮಹಾರಾಷ್ಟ್ರದ ರಾಯಗಡ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಮುಂಬರುವ ಎರಡು ದಿನಗಳವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಇಂದು (ಜುಲೈ 1) ಮತ್ತು ರತ್ನಗಿರಿಯಲ್ಲಿ ನಾಳೆ (ಜುಲೈ 2) ಎರಡು ದಿನಗಳ ಕಾಲ ರಾಯಗಡದಲ್ಲಿ ಆರೆಂಜ್ ಅಲರ್ಟ್ ಇದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ. ಹವಾಮಾನ ಇಲಾಖೆ ಪ್ರಕಾರ ಎರಡೂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಮುಂಬೈನ ಪ್ರತ್ಯೇಕ ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ನಾಳೆಯೂ ಮುಂಬೈನಲ್ಲಿ ಮಳೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಪಶ್ಚಿಮ ಕರಾವಳಿ, ಮುಂಬೈ, ಮಧ್ಯಪ್ರದೇಶ ಮತ್ತು ಪಕ್ಕದ ಪ್ರದೇಶಗಳಲ್ಲಿ ಚಂಡಮಾರುತ ಉಂಟಾಗುವ ಸಾಧ್ಯತೆ ಇದೆ. IMD ಯ ಸಾಂತಾಕ್ರೂಜ್ ವೀಕ್ಷಣಾಲಯವು ಕಳೆದ 24 ಗಂಟೆಗಳಲ್ಲಿ 41 ಮಿಮೀ ಮಳೆಯನ್ನು ದಾಖಲಿಸಿದೆ. ಕೊಲಾಬಾ ವೀಕ್ಷಣಾಲಯದಲ್ಲಿ 33 ಮಿಮೀ ಮಳೆ ದಾಖಲಾಗಿದೆ.
ಹವಾಮಾನ ವರದಿಯ ಪ್ರಕಾರ, ನಗರದಲ್ಲಿ ಮುಂದಿನ 36 ಗಂಟೆಗಳ ಕಾಲ ಮಧ್ಯಂತರ ಮಳೆಯಾಗಲಿದ್ದು, ನಂತರ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ. ಮುಂಬೈ ಮತ್ತು ಪಾಲ್ಘರ್, ಥಾಣೆ ಮತ್ತು ರಾಯಗಡ ಸೇರಿದಂತೆ ಮಹಾರಾಷ್ಟ್ರದ ಇತರ ಪ್ರಮುಖ ನಗರಗಳಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ.

ದೆಹಲಿಯಲ್ಲೂ ಮುಂಗಾರು
ಇತ್ತ ದೆಹಲಿಯಲ್ಲೂ ಮುಂಗಾರು ಅಪ್ಪಳಿಸಿದೆ. ದೆಹಲಿಯಲ್ಲಿ ಮಾನ್ಸೂನ್ ಆರಂಭವಾಗಿದ್ದು, ಗುರುವಾರ ಬೆಳಗ್ಗೆ ಭಾರಿ ಮಳೆ ಮತ್ತು ನಿರಂತರ ತುಂತುರು ಮಳೆಯಾಗಿದೆ. ಮಳೆ ಸುರಿದ ದೆಹಲಿಯ ಭಾಗಗಳಲ್ಲಿ ಕೈಲಾಶ್ ಪೂರ್ವ, ಬುರಾರಿ, ಶಹದಾರ, ಪಟ್ಪರ್ಗಂಜ್, ಐಟಿಒ ಕ್ರಾಸಿಂಗ್, ಇಂಡಿಯಾ ಗೇಟ್, ಬಾರಾಪುಲ್ಲಾ, ರಿಂಗ್ ರೋಡ್, ದೆಹಲಿ-ನೋಯ್ಡಾ ಬಾರ್ಡರ್ ಮತ್ತು ದೆಹಲಿ-ಗುರ್ಗಾಂವ್ ರಸ್ತೆಗಳು ಸೇರಿವೆ. ಇದರಿಂದ ದೆಹಲಿ ತಾಪಮಾನ ಕಡಿಮೆಯಾಗಿದೆ. 27.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂಗಾರು ಮೊದಲ 10 ದಿನಗಳಲ್ಲಿ ಉತ್ತಮ ಮಳೆಯಾಗಲಿದ್ದು, ದೆಹಲಿಯಲ್ಲಿ ಮಳೆ ಕೊರತೆ ನೀಗಲಿದೆ ಎಂದು ಹವಾಮಾನ ತಜ್ಞರು ಸೂಚಿಸಿದ್ದಾರೆ. ಜೂನ್ 1 ರಿಂದ ನಗರದಲ್ಲಿ ಕೇವಲ 24.5 ಮಿಮೀ ಮಳೆಯಾಗಿದೆ, ಇದು ಜೂನ್ 16-20 ರ ಅವಧಿಯಲ್ಲಿ ಸಾಮಾನ್ಯ 66.7 ಮಿಮೀ ಮಳೆಯಾಗಿದೆ.
ಕರ್ನಾಟಕದಲ್ಲಿ ಮಳೆ ಮುನ್ಸೂಚನೆ
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಜುಲೈ 5ರವರೆಗೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಒಟ್ಟು ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಜುಲೈ 5ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮುಂದಿನ 5 ದಿನ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ.












Click it and Unblock the Notifications