ಮಹಾರಾಷ್ಟ್ರ, ಕರ್ನಾಟಕದಲ್ಲಿ ಅತಿ ಹೆಚ್ಚು ತಾಪಮಾನ, ನೀರಿಗೆ ಹಾಹಾಕಾರ
ನವದೆಹಲಿ, ಮೇ 21: ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಕೂಡ ತಾಪಮಾನದಲ್ಲಿ ಮಾತ್ರ ಕೊಂಚವೂ ಕಡಿಮೆಯಾಗುತ್ತಿಲ್ಲ.
ಎಲ್ಲೆಡೆ ಬಿಸಿಗಾಳಿ ಬೆಳಗ್ಗೆ 10 ಗಂಟೆಯಿಂದ ಸೂರ್ಯನ ಕಿರಣಗಳು ತೀಕ್ಷ್ಣವಾಗುತ್ತವೆ.ಸಂಜೆ 6 ಗಂಟೆಯವರೆಗೂ ವಿಪರೀತ ಸೆಕೆ ಇರುತ್ತದೆ. ಅದಾದ ಬಳಿಕ ವಾತಾವರಣ ಸ್ವಲ್ಪ ಕೂಲ್ ಆಗುತ್ತದೆ.
ದೆಹಲಿ, ಮುಂಬೈ, ಮಧ್ಯಪ್ರದೇಶದಲ್ಲಿ ಮುಂದಿನ 24 ಗಂಟೆಯೊಳಗಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ, ಕೇರಳಕ್ಕೆ ಜೂನ್ ಎರಡನೇ ವಾರದಲ್ಲಿ ಮುಂಗಾರು ಪ್ರವೇಶಿಸಲಿದೆ. ಮಹಾರಾಷ್ಟ್ರದ ಬ್ರಹ್ಮಪುರಿಯಲ್ಲಿ ಅತಿ ಹೆಚ್ಚು ಅಂದರೆ 45.9 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಮಧ್ಯಪ್ರದೇಶ, ಛತ್ತೀಸ್ಗಢ, ತೆಲಂಗಾಣದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ.

ಬ್ರಹ್ಮಪುರಿ-ಮಹಾರಾಷ್ಟ್ರ-45.9 ಡಿಗ್ರಿ ಸೆಲ್ಸಿಯಸ್
ಚಂದ್ರಾಪುರ-ಮಹಾರಾಷ್ಟ್ರ-45.8 ಡಿಗ್ರಿ ಸೆಲ್ಸಿಯಸ್
ವರ್ದಾ-ಮಹಾರಾಷ್ಟ್ರ-45.5 ಡಿಗ್ರಿ ಸೆಲ್ಸಿಯಸ್
ಆದಿಲಾಬಾದ್-ತೆಲಂಗಾಣ-45 ಡಿಗ್ರಿ ಸೆಲ್ಸಿಯಸ್
ರಾಮಗುಂಡಮ್-ತೆಲಂಗಾಣ-45 ಡಿಗ್ರಿ ಸೆಲ್ಸಿಯಸ್
ಅಕೋಲಾ-ಮಹಾರಾಷ್ಟ್ರ-44.6 ಡಿಗ್ರಿ ಸೆಲ್ಸಿಯಸ್
ಖರಗಾವ್-ಮಧ್ಯಪ್ರದೇಶ-44.6 ಡಿಗ್ರಿ ಸೆಲ್ಸಿಯಸ್
ನಿಜಾಮಾಬಾದ್-ತೆಲಂಗಾಣ-44.6 ಡಿಗ್ರಿ ಸೆಲ್ಸಿಯಸ್
ಕಲಬುರಗಿ-ಕರ್ನಾಟಕ- 44.6 ಡಿಗ್ರಿ ಸೆಲ್ಸಿಯಸ್
ದುರ್ಗ-ಛತ್ತೀಸ್ಗಢ-44.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.











Click it and Unblock the Notifications