Mahakumbh Mela 2025: ಮಹಾ ಕುಂಭಮೇಳ ಈ 5 ಕಾರಣಕ್ಕೆ ವಿಶೇಷ, ಮಿಸ್ ಮಾಡಲೇಬೇಡಿ
Mahakumbh Mela 2025: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಬರೋಬ್ಬರಿ 144 ವರ್ಷಗಳ ನಂತರ ಮಹಾಕುಂಭ ಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಕೋಟ್ಯಾಂತರ ಜನ ಭಾವಗವಹಿಸಿದ್ದಾರೆ. ಜೀವಮಾನದಲ್ಲಿ ಒಮ್ಮೆ ಮಾತ್ರ ನೋಡಬಹುದಾದ ಅದ್ಭುತ ಹಾಗೂ ಮನೋಹರ ದೃಶ್ಯವಿದು. ನೀವು ಜೀವಮಾನದಲ್ಲಿ ಒಮ್ಮೆ ಮಾತ್ರ ನೋಡಬಹುದಾದ ದೃಶ್ಯವಿದು. ಹಾಗಾದರೆ ಮಹಾ ಕುಂಭಮೇಳದಲ್ಲಿ ನೀವು ನೋಡಬಹುದಾದ ಹಾಗೂ ಮಾಡಬಹುದಾದ ಪ್ರಮುಖ ವಿಷಯಗಳೇನು. ಈ ಮಹಾ ಕುಂಭಮೇಳ ಯಾವ ಕಾರಣಕ್ಕೆ ವಿಶೇಷವಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ದೇಶದಲ್ಲಿನ ಹಿಂದೂಗಳಿಗೆ ಈಗ ಹಬ್ಬದ ಸಮಯ ಅಂತಲೇ ಹೇಳಬಹುದು. ನಾಲ್ಕು ಗ್ರಹಗಳು ಸೇರುವ ವಿಶೇಷ ಸಂದರ್ಭ ಇದಾಗಿದೆ ಎನ್ನಲಾಗುತ್ತಿದೆ. ಕೋಟ್ಯಾಂತರ ಜನ ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಪ್ರಯಾಗದಲ್ಲಿ ಸೇರುತ್ತಿದ್ದಾರೆ. ಈ ಮಹಾ ಕುಂಭಮೇಳವನ್ನು ನೀವು ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕು ಎನ್ನುವುದಕ್ಕೆ ಹಲವು ಕಾರಣಗಳಿವೆ. ಇನ್ನು ಈ ಮಹಾಕುಂಭ ಮೇಳದಲ್ಲಿ 40 ಕೋಟಿಗೂ ಹೆಚ್ಚು ಜನ ಭಾಗಹಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಉತ್ತರ ಭಾರತದಲ್ಲಿ ಈಗ ಮೈಕೊರೆಯುವ ಚಳಿ ಇದೆ. ಮುಂದಿನ ದಿನಗಳಲ್ಲಿ ಚಳಿ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈ ಮೈಕೊರೆಯುವ ಚಳಿಯಲ್ಲೂ ಜನ ಸಾಗರವೇ ಪ್ರಯಾಗದಲ್ಲಿ ಸೇರಿದೆ. ಈ ಸಂದರ್ಭದಲ್ಲಿ ನೀವು ಮಹಾ ಕುಂಭಮೇಳದಲ್ಲಿ ಯಾಕೆ ಭಾಗವಹಿಸಬೇಕು ಎನ್ನುವುದಕ್ಕೆ ಪ್ರಮುಖ ಡೀಟೆಲ್ಸ್ ಇಲ್ಲಿದೆ.

ಕುಂಭಮೇಳದಲ್ಲಿ ವಿಶ್ವದಾದ್ಯಂತ ಜನ ಭಾಗವಹಿಸುತ್ತಿದ್ದಾರೆ. ಯಾಕೆಂದರೆ ನಾವು ಜನ್ಮದಲ್ಲಿ ಒಮ್ಮೆ ಮಾತ್ರ ಈ ಮಹಾ ಮೇಳವನ್ನು ಕಣ್ತುಂಬಿಕೊಳ್ಳುವುದಕ್ಕೆ ಸಾಧ್ಯವಿದೆ. ಈ ಮಹಾಕುಂಭ ಮೇಳದಲ್ಲಿ ನೀವು ಮಾಡಬಹುದಾದ ಪ್ರಮುಖ ವಿಷಯಗಳ ವಿವರ ಇಲ್ಲಿದೆ.
ಪವಿತ್ರ ಸ್ನಾನ: ಮಹಾಕುಂಭ ಮೇಳದ ಕೇಂದ್ರಬಿಂದುವೆಂದರೆ ಪವಿತ್ರ ಸ್ನಾನ ಅಥವಾ ಅಮೃತ ಸ್ನಾನ. ಉತ್ತರ ಪ್ರದೇಶದ ಪ್ರಯಾಗ್ನಲ್ಲಿ 144 ವರ್ಷಗಳಿಗೆ ಒಮ್ಮೆ ನಡೆಯುವ ಈ ಮೇಳದ ವಿಶೇಷವೆಂದರೆ. ಪ್ರಯಾಗರಾಜ್ನಲ್ಲಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಒಂದಾಗಿದೆ. ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ವಿಶೇಷವಾಗಿದೆ. ಸಣ್ಣ ದೋಣಿಯ ಮೂಲಕ ಹಿಂದೂ ತೀರ್ಥಯಾತ್ರೆಗಳನ್ನು ಇಲ್ಲಿನ ತ್ರಿವೇಣಿ ಸಂಗಮಕ್ಕೆ ಕರೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಇದೆ. ಪುರೋಹಿತರು ಸಹ ಇಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಇಲ್ಲಿ ತ್ರಿವೇಣಿ ಸಂಗಮ ಎನ್ನುವುದು ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಮಾಗಮವಾಗಿದೆ. ಈ ಸಂಗಮದಲ್ಲಿ ನೀವು ಸ್ನಾನ ಮಾಡುವುದರಿಂದ ನಿಮ್ಮ ಪುನರ್ಜನ್ಮಗಳ ಪಾಪ ಕಳೆಯುತ್ತದೆ ಎನ್ನುವ ನಂಬಿಕೆ ಇದೆ.
ನಾಗಾ ಸಾಧುಗಳನ್ನು ಭೇಟಿ ಮಾಡಿ: ಈ ಕುಂಭ ಮೇಳದಲ್ಲಿ ಸಾವಿರಾರು ಜನ ಸಾಧು - ಸಂತರು ಭಾಗವಹಿಸುತ್ತಾರೆ. ಸಾವಿರಾರು ಜನ ಸಾಧುಗಳನ್ನು ನೀವು ಇಲ್ಲಿ ನೋಡಬಹುದು. ಆದರೆ ಸಾಧುಗಳನ್ನು ನೋಡುವ ಹಾಗೂ ಅವರೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ. ಸಾಧುಗಳು ಕಾಣಿಸಿಕೊಳ್ಳುವುದು ತುಂಬಾ ಕಡಿಮೆ. ಆದರೆ ನೀವು ಇಲ್ಲಿ ಸಾವಿರಾರು ಜನ ಸಾಧುಗಳನ್ನು ಇಲ್ಲಿ ನೋಡಬಹುದು.

ವಿಶೇಷ ಕಾರ್ಯಕ್ರಮ: ಮಹಾ ಕುಂಭಮೇಳದ ಭಾಗದಲ್ಲಿ ಹಲವು ವಿಶೇಷ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳನ್ನು ನೋಡುವುದೇ ವಿಶೇಷವಾಗಿದೆ. ಕೋಟ್ಯಾಂತರ ಜನ ಭಕ್ತಾಧಿಗಳು ಮಹಾಕುಂಭ ಮೇಳದಲ್ಲಿ ಭಾಗವಹಿಸುತ್ತಿದ್ದು. ಹಲವು ಧಾರ್ಮಿಕ ಪೂಜೆಗಳು ನಡೆಯುತ್ತಿವೆ. ಇದನ್ನು ನೋಡುವುದು ವಿಶೇಷವಾಗಿದೆ.
ವಾರಣಾಸಿಗೆ ಹೋಗಬಹುದು: ಇನ್ನು ಪ್ರಯಾಗ್ ರಾಜ್ನಿಂದ ಕೆಲವೇ ಕಿ.ಮೀ ದೂರದಲ್ಲಿ ವಾರಣಾಸಿ ಇದೆ. ಕಾಶಿ - ವಾರಣಾಸಿಗೆ ಒಮ್ಮೆಯಾದರೂ ಹೋಗಬೇಕು ಎನ್ನುವುದು ಕೋಟ್ಯಾಂತರ ಹಿಂದೂ ಭಕ್ತರ ಕನಸಾಗಿದೆ. ಉತ್ತರ ಪ್ರದೇಶದ ಈ ಭಾಗದಿಂದ ನೀವು ಕಾಶಿ ಹಾಗೂ ವಾರಣಾಸಿಗೆ ನೀವು ಭೇಟಿ ನೀಡಬಹುದಾಗಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications