Get Updates
Get notified of breaking news, exclusive insights, and must-see stories!

UP Lok Sabha Election 2024: ಯುಪಿ ರಾಜಕೀಯ ಭವಿಷ್ಯ: ಯೋಗಿಗೆ ಸಮಸ್ಯೆ ಸೃಷ್ಟಿಸುತ್ತಾರಾ ಅಖಿಲೇಶ್?

ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿ ಕೇವಲ 33 ಸ್ಥಾನಗಳನ್ನು ಪಡೆದುಕೊಂಡು ತೃಪ್ತಿಪಟ್ಟುಕೊಂಡಿತು. ಹೀಗಾಗಿ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಬಿಜೆಪಿಗೆ ಸಮಸ್ಯೆ ಸೃಷ್ಟಿಸುತ್ತಾ ಎನ್ನುವ ಅನುಮಾನ ಶರುವಾಗಿದೆ. ಈ ಬಗ್ಗೆ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ.

2014 ಉತ್ತರಪ್ರದೇಶದ ಲೋಕಸಭೆ ಚುನಾವಣೆಯಲ್ಲಿ 71 ಸ್ಥಾನಗಳನ್ನು ಮತ್ತು 2019ರಲ್ಲಿ 62 ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಸತತ ಎರಡು ಬಾರಿ ತನ್ನದೇ ಆದ ಬಹುಮತವನ್ನು ಪಡೆದುಕೊಂಡು ಕಮಾಲ್ ಮಾಡಿದ್ದ ಕಮಲ ಈಗ ಬಾಡಿದೆ. ಈ ಬಾರಿ ಕೇವಲ 33 ಸ್ಥಾನಗಳನ್ನು ಪಡೆದುಕೊಂಡು ಹತಾಶವಾಗಿದೆ.

Lok Sabha Election 2024 Will Akhilesh create a problem for Yogi UP political future

ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ (ಎಸ್‌ಪಿ)ದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ರಾಜ್ಯದಲ್ಲಿ 6 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ದಶಕದ ನಂತರ ಈ ಹಿಂದಿ ಬೆಲ್ಟ್ ರಾಜ್ಯದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ.

ಈ ವರ್ಷ ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಐತಿಹಾಸಿಕ ಮತ್ತು ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆದು ಕೇವಲ 3 ತಿಂಗಳ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರತಿಸ್ಪರ್ಧಿಗಳಾದ ಎಸ್‌ಪಿ-ಕಾಂಗ್ರೆಸ್‌ಗಿಂತ ಹಿಂದುಳಿದಿರುವುದು ಕೇಂದ್ರ ನಾಯಕತ್ವಕ್ಕೆ ಕಳವಳಕಾರಿಯಾಗಿದೆ. ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ದೊಡ್ಡ ಹೊಡೆತವಾಗಿದೆ.

Lok Sabha Election 2024 Will Akhilesh create a problem for Yogi UP political future

ಜ್ಯೋತಿಷ್ಯದ ಪ್ರಕಾರ ತುಲಾರಾಶಿಯಲ್ಲಿ ಜನಿಸಿದ ಅಖಿಲೇಶ್ ಯಾದವ್ ಅವರ ಜಾತಕದಲ್ಲಿ ಗುರುವಿನ ಮಹಾದಶಾ ಹಾಗೂ ಸೂರ್ಯನ ಅಂತರದಶ ನಡೆಯುತ್ತಿದ್ದು ಈ ದೊಡ್ಡ ರಾಜಕೀಯ ಯಶಸ್ಸನ್ನು ನೀಡಿದೆ. ಈ ಅದ್ಭುತ ಗೆಲುವಿನೊಂದಿಗೆ ಅಖಿಲೇಶ್ ಅವರು ರಾಜ್ಯದಲ್ಲಿ ಜಾತಿ ಗಣತಿಗೆ ಒತ್ತಾಯಿಸಿ ಮತ್ತು ಒಬಿಸಿಗಳ ಮೀಸಲಾತಿಯನ್ನು 27% ರಿಂದ ಹೆಚ್ಚಿಸುವ ಮೂಲಕ ಯೋಗಿ ಸರ್ಕಾರಕ್ಕೆ ಬಹಳ ಕಷ್ಟಕರವಾದ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಹಾಗಾದರೆ ಎಸ್‌ಪಿ ಜಾತಕದಲ್ಲಿ ಏನಿದೆ?

ಜಾತಕದಲ್ಲಿ ಅಡಗಿದೆ ಸಮಾಜವಾದಿ ಪಕ್ಷದ ಗೆಲುವಿನ ಗುಟ್ಟು

ಜ್ಯೋತಿಷ್ಯದಲ್ಲಿ ಶನಿಯು ಹಿಂದುಳಿದ ವರ್ಗಗಳು ಮತ್ತು ರೈತರ ಗ್ರಹ ಎಂದು ಹೇಳಲಾಗುತ್ತದೆ. ರಾಹು ಮುಸ್ಲಿಂ ವರ್ಗವನ್ನು ಪ್ರತಿನಿಧಿಸುತ್ತದೆ. 4 ಅಕ್ಟೋಬರ್ 1992 ರಂದು ಮಧ್ಯಾಹ್ನ 12 ಗಂಟೆಯ ನಂತರ ಲಕ್ನೋದಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದಾಗ, ಶನಿಯು ತನ್ನದೇ ಆದ ಮಕರ ರಾಶಿಯಲ್ಲಿದ್ದನು.

ಸಮಾಜವಾದಿ ಪಕ್ಷದ ಜಾತಕದಲ್ಲಿ ಶನಿ ಮತ್ತು ರಾಹುವಿನ ಈ ಮಂಗಳಕರ ಸ್ಥಾನ, ಮೊದಲು ಈ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರನ್ನು ಉತ್ತರ ಪ್ರದೇಶದ ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿತು. ಅವರಿಗೆ ಕೇಂದ್ರದಲ್ಲಿ ರಕ್ಷಣಾ ಮಂತ್ರಿಯಂತಹ ದೊಡ್ಡ ಹುದ್ದೆಯನ್ನು ನೀಡಿತು.

Lok Sabha Election 2024 Will Akhilesh create a problem for Yogi UP political future

ನಂತರ 2012 ರಿಂದ 2017 ರವರೆಗೆ ಅಖಿಲೇಶ್ ಯಾದವ್ ಪೂರ್ಣ ಬಹುಮತದೊಂದಿಗೆ ಸಮಾಜವಾದಿ ಪಕ್ಷದ ಸರ್ಕಾರದ ಮುಖ್ಯಸ್ಥರಾಗಿದ್ದರು. 2017 ಮತ್ತು 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಂಪರ್ ಸೀಟು ಪಡೆದು ಸೋಲಿನ ಗಾಯ ವಾಸಿಯಾದಂತಾಯಿತು.

ಆದರೆ ಸಮಾಜವಾದಿ ಪಕ್ಷದ ಧನು ರಾಶಿಯ ಜಾತಕದಲ್ಲಿ ಸದ್ಯ ರಾಹುವಿನ ಮಹಾದಶದಲ್ಲಿ ಶನಿಯ ಅಂತರ ದಶ ನಡೆಯುತ್ತಿದೆ. ರಾಹುದಲ್ಲಿ ಶನಿಯ ಈ ಬಲವಾದ ಸ್ಥಿತಿಯು ಸೆಪ್ಟೆಂಬರ್ 2025ರವರೆಗೆ ಇರುತ್ತದೆ. ಸದ್ಯ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಶನಿ 33 ಅಂಕಗಳನ್ನು ಪಡೆದ ಬಿಜೆಪಿ ಮೇಲೆ ಒತ್ತಡ ಹೇರಲು ಎಸ್‌ಪಿ ಪಕ್ಷಕ್ಕೆ ಹೆಚ್ಚಿನ ನೆರವು ನೀಡಲಿದೆ.

ಅಖಿಲೇಶ್ ಯೋಗಿ ಕುರ್ಚಿ ಅಲುಗಾಡಿಸಬಹುದು

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಲಭ್ಯವಿರುವ ಜಾತಕ ಅವರ ಅಧಿಕೃತ ಜನ್ಮ ವಿವರಗಳಿಗಿಂತ ಭಿನ್ನವಾಗಿದೆ. 24 ಅಕ್ಟೋಬರ್ 1972 ರಂದು ಬೆಳಿಗ್ಗೆ ಇಟಾವಾದಲ್ಲಿ ಜನಿಸಿದ ಅಖಿಲೇಶ್ ಯಾದವ್ ಅವರ ಜಾತಕವು ತುಲಾ ಲಗ್ನವಾಗಿದೆ.

ಪ್ರಸ್ತುತ, ಗುರುಗ್ರಹದಲ್ಲಿ ಸೂರ್ಯನ ವಿಂಶೋತ್ತರಿ ದಶಾ ಜೂನ್ 7, 2024 ರವರೆಗೆ ತುಲಾ ಲಗ್ನ ಜಾತಕದಲ್ಲಿದೆ. ಮಹಾದಶಾ ನಾಥ ಗುರು ಅಖಿಲೇಶ್ ಯಾದವ್ ಅವರ ಜಾತಕದಲ್ಲಿ, ರಾಹು ಬಲದ ಮೂರನೇ ಮನೆಯಲ್ಲಿದ್ದು, ಅವರ ಜಾತಕದಲ್ಲಿ ಅಂತರ ದಶಾ ನಾಥ ಸೂರ್ಯನು ತುಲಾ ರಾಶಿಯಲ್ಲಿದ್ದು ಲಗ್ನೇಶ ಶುಕ್ರನೊಂದಿಗೆ ಉತ್ತಮ ರಾಶಿ ಪರಿವರ್ತನ ಯೋಗದಲ್ಲಿ ತೊಡಗಿಸಿಕೊಂಡಿದ್ದಾನೆ.

ಮುಂಬರುವ ಗುರುದಲ್ಲಿ, ಚಂದ್ರನ ವಿಂಶೋತ್ತರಿ ದಶವು 7 ಜೂನ್ 2024 ರಿಂದ 7 ಅಕ್ಟೋಬರ್ 2025 ರವರೆಗೆ ಇರುತ್ತದೆ. ಹೀಗಾಗಿ ಅಖಿಲೇಶ್ ಅವರು ಜಾತಿ ಗಣತಿಗೆ ಒತ್ತಾಯಿಸಿ ಮತ್ತು ರಾಜ್ಯದಲ್ಲಿ OBC ಗಳ ಮೀಸಲಾತಿಯನ್ನು ಹೆಚ್ಚಿಸುವ ಚಳವಳಿಯನ್ನು ಸಹ ಪ್ರಾರಂಭಿಸಬಹುದು.

ಅಖಿಲೇಶ್ ಯಾದವ್ ಅವರ ಜನ್ಮ ಕುಂಡಲಿಯಲ್ಲಿ ಚಂದ್ರನು ಏಳನೇ ಮನೆಯಲ್ಲಿದ್ದು, ನಾಲ್ಕು ಗ್ರಹಗಳಾದ ಸೂರ್ಯ, ಬುಧ, ಮಂಗಳ ಮತ್ತು ಗುರುಗಳ ಅಂಶವನ್ನು ಹೊಂದುವ ಮೂಲಕ ರಾಜಯೋಗವನ್ನು ಸೃಷ್ಟಿಸುತ್ತಾನೆ. ಇದು ಅವರ ಖ್ಯಾತಿಯನ್ನು ರಾಜ್ಯದಲ್ಲಿ ಬಹಳ ಮುಂದಕ್ಕೆ ಕೊಂಡೊಯ್ಯುತ್ತದೆ.

ಕೇಂದ್ರದ ಜತೆ ಯೋಗಿ ಆದಿತ್ಯನಾಥ್ ಸಂಘರ್ಷ

ಯೋಗಿ ಆದಿತ್ಯನಾಥ್ ಅವರು ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ 5 ಜೂನ್ 1972 ರಂದು ಬೆಳಿಗ್ಗೆ 10:54 ಕ್ಕೆ ಜನಿಸಿದರು. ಅವರ ರಾಶಿ ಕುಂಭ. ಹತ್ತನೇ ಮನೆಯಿಂದ (ಕರ್ಮ ಸ್ಥಳ) ಶನಿಯು ಕೇಮದ್ರುಮ್ನ ಚಂದ್ರನ ಮೇಲೆ ಏಳನೇ ಮನೆಯಲ್ಲಿನ ದೃಷ್ಟಿ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸಿಯನ್ನಾಗಿ ಮಾಡಿತು.

ಕೇತುವಿನ ಬುಧದ ವಿಂಷೋತ್ತರಿ ದಶಾದಲ್ಲಿರುವ ಯೋಗಿ ಆದಿತ್ಯನಾಥ್ ಅವರು ವರ್ಷದ ಆರಂಭದಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಮತ್ತು ನಂತರ ರಾಜ್ಯದ 80 ಲೋಕಸಭಾ ಸ್ಥಾನಗಳಲ್ಲಿ ತಮ್ಮ ಪಕ್ಷವನ್ನು ಯಶಸ್ವಿಗೊಳಿಸುವಲ್ಲಿ ದೊಡ್ಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿದ್ದರು. ಆದರೆ ಅವನ ಜಾತಕದ ಹನ್ನೆರಡನೇ ಮನೆಯಲ್ಲಿ ಕೇತು ಇರುವುದರಿಂದ ಮತ್ತು ಅವರ ಮೇಲೆ ಶನಿಯ ಅಂಶದಿಂದಾಗಿ, ಚುನಾವಣಾ ಫಲಿತಾಂಶಗಳು ಅತ್ಯಂತ ಪ್ರತಿಕೂಲವಾಗಿವೆ.

ಪೂರ್ವ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ವಿಶೇಷ ಪ್ರಭಾವ ಹೊಂದಿದ್ದಾರೆ ಎಂದು ಪರಿಗಣಿಸಲಾಗಿತ್ತು. ಆದರೆ ಸಮಾಜವಾದಿ ಪಕ್ಷ ಹೆಚ್ಚು ಸ್ಥಾನ ಗಳಿಸುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದೆ. ಪೂರ್ವ ಉತ್ತರ ಪ್ರದೇಶದಲ್ಲಿ ಬಿಜೆಪಿ ಕೇವಲ 13 ಸ್ಥಾನಗಳನ್ನು ಪಡೆದಿದ್ದರೆ ಮತ್ತು ಅಯೋಧ್ಯೆಯ ಫೈಜಾಬಾದ್ ಕ್ಷೇತ್ರದಲ್ಲಿ ಸೋಲು ಮರೆಯಲಾಗದ ಹೊಡೆತವನ್ನು ನೀಡಿದೆ.

ಸದ್ಯ ಕುಂಭ ರಾಶಿಯ ಯೋಗಿ ಆದಿತ್ಯನಾಥ್ ಅವರು ಶನಿಯ ಸಾಡೇ ಸತಿ ಮತ್ತು ಕೇತು-ಬುಧರು ಸಂಕಷ್ಟದ ಕಾಲವನ್ನು ಎದುರಿಸುತ್ತಿದ್ದು, ಇನ್ನು ಕೆಲವೇ ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರ ರಾಜಕಾರಣಕ್ಕೆ ಸೇರುವಂತೆ ಒತ್ತಡ ಹೇರಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+