ಗಣರಾಜ್ಯೋತ್ಸವ : ಸಿಮಿ, ಲಷ್ಕರ್ ದಾಳಿ ಸಾಧ್ಯತೆ
ನವದೆಹಲಿ, ಡಿ. 5 : ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿ ಹೊರವಲಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಯೋತ್ಪಾದಕ ಸಂಘಟನೆಗಳು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿವೆ. ಈ ಎಚ್ಚರಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಸ್ಟೂಡೆಂಟ್
ಇಸ್ಲಾಮಿಕ್
ಮೂವ್ಮೆಂಟ್
ಆಫ್
ಇಂಡಿಯಾ
(ಸಿಮಿ)
ಮತ್ತು
ಲಷ್ಕರ್-ಎ-ತೋಯ್ಬಾ
ಸಂಘಟನೆಗಳು
ಜನವರಿ
26ರ
ಗಣರಾಜ್ಯೋತ್ಸವದ
ಸಂದರ್ಭದಲ್ಲಿ
ದಾಳಿ
ನಡೆಸಬಹದು
ಎಂದು
ಇಲಾಖೆ
ಪೊಲೀಸರಿಗೆ
ಮಾಹಿತಿ
ರವಾನಿಸಿದೆ.
[ಗಣರಾಜ್ಯೋತ್ಸವಕ್ಕೆ
ಒಬಾಮಾ
ಬರ್ತಾರೆ]
ಅದರಲ್ಲೂ ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿರುವುದರಿಂದ, ದೆಹಲಿ ಪೊಲೀಸರು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಣಿಸಿದ್ದಾರೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ಭಾರತ ಮತ್ತು ಅಮೆರಿಕಾದ ಸಂಸ್ಥೆಗಳು ಭದ್ರತೆ ಉಸ್ತುವಾರಿ ನೋಡಿಕೊಳ್ಳಲಿವೆ.
ಸಿಮಿ ಮತ್ತು ಲಷ್ಕರ್ ಸಂಘಟನೆಗಳು ಅಮೆರಿಕದ ವಿರೋಧಿಯಾಗಿದ್ದು, ಇರಾಕ್, ಅಫ್ಘಾನಿಸ್ತಾನದ ವಿಚಾರದಲ್ಲಿ ಅಮೆರಿಕ ಮಧ್ಯಪ್ರವೇಶಿಸುವುದನ್ನು ಮೊದಲಿನಿಂದಲೂ ವಿರೋಧಿಸುತ್ತಿದೆ. ಇಂತಹ ವಿಚಾರದಲ್ಲಿ ಮಧ್ಯಪ್ರವೇಶಿಸಬೇಡಿ ಎನ್ನುವ ಸಂದೇಶ ನೀಡಲು ದಾಳಿಗಳನ್ನು ನಡೆಸಿವೆ.
ಗುಪ್ತಚರ ಇಲಾಖೆ ಮೂಲಗಳ ಪ್ರಕಾರ ದೆಹಲಿಗೆ ಮಾತ್ರ ಮುನ್ನೆಚ್ಚರಿಕೆ ನೀಡಲಾಗಿಲ್ಲ. ದೆಹಲಿ ಅಕ್ಕ-ಪಕ್ಕದ ರಾಜ್ಯಗಳಿಗೂ ಸಂದೇಶ ರವಾನಿಸಲಾಗಿದೆ. ಅಮೆರಿಕ ಅಧ್ಯಕ್ಷರು ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಕ್ಕ-ಪಕ್ಕದ ರಾಜ್ಯಗಳಲ್ಲಿ ದಾಳಿ ನಡೆದರೂ ಅದು ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಲಿದೆ.
ದೇಶದ ರಕ್ಷಣಾ ಪಡೆಗಳಿಗೆ ಸಿಮಿ ಸಂಘಟನೆಯೇ ಸವಾಲಾಗಿದೆ. ಅದರಲ್ಲೂ ಮಧ್ಯಪ್ರದೇಶದ ಜೈಲಿನಿಂದ ತಪ್ಪಿಸಿಕೊಂಡ ಐವರು ಸಿಮಿಯ ಸದಸ್ಯರು ಚೆನ್ನೈ ರೈಲ್ವೆ ನಿಲ್ದಾಣ ಸ್ಫೋಟ ಸೇರಿದಂತೆ ಹಲವಾರು ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬ ಶಂಕೆ ಇದೆ.
ಗಣರಾಜ್ಯೋತ್ಸಕ್ಕೆ ವಿದೇಶಿ ಗಣ್ಯರು ಆಗಮಿಸುವುರಿಂದ ದಾಳಿ ಮಾಡಬಹುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಐಎಸ್ಐ ಮತ್ತು ಲಷ್ಕರ್ ಸಂಘಟನೆಗಳು ದೆಹಲಿ ಮತ್ತು ಪಂಜಾಬ್ ರಾಜ್ಯಗಳನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆಯೂ ಇದೆ.