Tirupati: ತಿರುಮಲದಲ್ಲಿ ಚಿರತೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ
ತಿರುಮಲ ಬೆಟ್ಟವನ್ನು ಹತ್ತುವ ಮಾರ್ಗದಲ್ಲಿ ಬಾಲಕಿಯನ್ನು ಹೊತ್ತೊಯ್ದು ಕೊಂದಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದರಿಂದ ಬೆಟ್ಟವನ್ನು ಹತ್ತುವ ಭಕ್ತರ ಆತಂಕ ದೂರವಾಗಿದೆ.
The Forest Department Captures Leopard Responsible for Fatally Attacking 6-Year-Old Girl on Tirumala Pedestrian Route. #Tirumala #tirumalanews #Tirupati #leopards #leopardattack pic.twitter.com/MJmqEgSvlZ
— Naveen Navi (@IamNavinaveen) August 14, 2023
ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್ಒ) ನಾಗೇಶ್ವರ ರಾವ್ ಮಾಹಿತಿ ನೀಡಿದ್ದು, ತಿರುಮಲ ದೇವಸ್ಥಾನಕ್ಕೆ ಚಾರಣ ಮಾಡುವ ಮಾರ್ಗಮಧ್ಯದಲ್ಲಿರುವ ನರಸಿಂಹ ಸ್ವಾಮಿ ದೇವಸ್ಥಾನದ ಸಮೀಪ ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗುತ್ತಿದ್ದ ಬಾಲಕಿ ಲಕ್ಷಿತಾರನ್ನು ಚಿರತೆ ಹೊತ್ತೊಯ್ದಿತ್ತು. ನಂತರ ಮರುದಿನ ಬೆಳಗ್ಗೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು, ಬಾಲಕಿಯ ದೇಹದ ಕೆಲವು ಭಾಗಗಳನ್ನು ಚಿರತೆ ತಿಂದುಹಾಕಿತ್ತು.

ಈ ದುರ್ಘಟನೆಯ ನಂತರ, ಇಲಾಖೆಯು ಅಲಿಪಿರಿ ಕಾಲುದಾರಿಯಲ್ಲಿ ಮೂರು ವಿಭಿನ್ನ ಸ್ಥಳಗಳಲ್ಲಿ ಬೋನ್ಗಳನ್ನು ಇಟ್ಟಿತ್ತು ಅದಾದ ನಂತರ ಎರಡು ದಿನಗಳಲ್ಲೇ ಚಿರತೆ ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದಾರೆ.
ವಿಧಿವಿಜ್ಞಾನ ಪರೀಕ್ಷೆ
ಬಾಲಕಿಯನ್ನು ಕೊಂದಿದ್ದು ಇದೇ ಚಿರತೆಯೇ ಅಥವಾ ಇಲ್ಲವೇ ಎಂಬುದು ತಕ್ಷಣಕ್ಕೆ ತಿಳಿದಿಲ್ಲ ಮತ್ತು ಅವರು ಹೇಳಿದ್ದಲ್ಲದೇ, ಸೆರೆಹಿಡಿದ ಮೃಗದ ಮೇಲೆ ವಿಧಿವಿಜ್ಞಾನ ಪರೀಕ್ಷೆಗಳನ್ನು ನಡೆಸಲಾಗುವುದು ಮತ್ತು ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಸತ್ತವರ ಮರಣೋತ್ತರ ಪರೀಕ್ಷೆಯ ವರದಿಯೊಂದಿಗೆ ಹೊಂದಿಸಲಾಗುವುದು ಎಂದು ಹೇಳಿದರು.
ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮರೆಡ್ಡಿ ಸುದ್ದಿ ತಿಳಿಯುತ್ತಿದ್ದಂತೆಯೇ ಮುಂಜಾನೆ ಸ್ಥಳಕ್ಕೆ ಧಾವಿಸಿದರು, ಏಳನೇ ಮೈಲಿನಲ್ಲಿ ಪಾದಚಾರಿ ಮಾರ್ಗದ 60 ಅಡಿ ಎತ್ತರದ ಆಂಜನೇಯ ಸ್ವಾಮಿ ವಿಗ್ರಹದ ಬಳಿ ಕಾಲುದಾರಿಯಲ್ಲಿ ಕಾಡು ಪ್ರಾಣಿಗಳ ಚಲನೆಯ ಮೇಲೆನಿಗಾ ಇರಿಸಲು ದಿನದ 24 ಗಂಟೆ ನಿಗಾ ಘಟಕ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಇದರ ಜೊತೆಗೆ ಟ್ರೆಕ್ಕಿಂಗ್ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ನಿರ್ವಹಣೆಯು ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ಸಹ ಅಳವಡಿಸಿಕೊಳ್ಳುತ್ತದೆ.
ಮಕ್ಕಳ ಸುರಕ್ಷೆತೆಗೆ ಟ್ಯಾಗ್ ಅಳವಡಿಕೆ
ಬಾಲಕಿಯನ್ನು ಚಿರತೆ ಕೊಂದುಹಾಕಿದ ಬಳಿಕ ಪೊಲೀಸ್ ಇಲಾಖೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ತಿರುಮಲ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಮಕ್ಕಳ ಕೈಗೆ ಟ್ಯಾಗ್ ಹಾಕಲು ಪೊಲೀಸರು ಮುಂದಾಗಿದ್ದಾರೆ.
7ನೇ ಮೈಲಿನಲ್ಲಿರುವ ಪೊಲೀಸ್ ಔಟ್ಪೋಸ್ಟ್ನಲ್ಲಿರುವ ಮಕ್ಕಳಿಗೆ ಟ್ಯಾಗ್ ಹಾಕಲಾಗುತ್ತದೆ. ಇದರಲ್ಲಿ ಮಗುವಿನ ಹೆಸರು, ಅವರ ಪೋಷಕರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಯ ಮಾಹಿತಿ ಇರಲಿದೆ. ಬೆಟ್ಟ ಹತ್ತುವ ಸಂದರ್ಭದಲ್ಲಿ ಮಕ್ಕಳು ತಪ್ಪಿಸಿಕೊಂಡರೆ ಪೋಷಕರನ್ನು ಪತ್ತೆಹಚ್ಚಲು, ಪೋಷಕರ ಜೊತೆ ಸೇರಿಸಲು ಇದು ಸಹಾಯ ಮಾಡಲಿದೆ.
ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ತೆರಳುವವರು ಹೆಚ್ಚಿನ ಜಾಗ್ರತೆ ವಹಿಸುವಂತೆ ಪೊಲೀಸರು ಮತ್ತು ಟಿಟಿಡಿ ಮನವಿ ಮಾಡಿದೆ. ಇಬ್ಬರು ಮೂವರು ಬೆಟ್ಟ ಹತ್ತುವ ಬದಲು ಗುಂಪು ಗುಂಪಾಗಿ ಬೆಟ್ಟ ಹತ್ತಲು ಸಲಹೆ ನೀಡಲಾಗಿದೆ. ಅಲ್ಲದೆ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಕೇಳಲಾಗಿದೆ.












Click it and Unblock the Notifications