ಕೋರೆಗಾಂವ್ ಭೀಮಾ ಆಚರಣೆ: ಕರ್ಣಿ ಸೇನೆ ಆಕ್ಷೇಪಕ್ಕೆ ದಲಿತ ಸಮುದಾಯ, ಕಾಂಗ್ರೆಸ್ನಿಂದ ತರಾಟೆ
ನವದೆಹಲಿ, ಡಿ. 30: ಜನವರಿ 1 ರಂದು ಕೋರೆಗಾಂವ್ ಭೀಮಾ ಕದನದ 205 ನೇ ವಾರ್ಷಿಕೋತ್ಸವಕ್ಕೆ ಕರ್ಣಿ ಸೇನೆ ಆಕ್ಷೇಪ ವ್ಯಕ್ತಪಡಿಸಿದೆ. ಇದಕ್ಕೆ ದಲಿತ ಸಮುದಾಯ ಮತ್ತು ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಮಹಾರಾಷ್ಟ್ರ ಕರ್ಣಿ ಸೇನೆಯ ಮುಖ್ಯಸ್ಥ ಅಜಯ್ ಸೆಂಗಾರ್ ಅವರು 'ಶೌರ್ಯ ದಿನ' ಆಚರಣೆಯನ್ನು ನಿಷೇಧಿಸಬೇಕು ಮತ್ತು "ಕೋರೆಗಾಂವ್ ಭೀಮಾ ಸ್ಮಾರಕವನ್ನು ಕೆಡವಬೇಕು" ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ದಲಿತ ಸಮುದಾಯ ಮತ್ತು ಕಾಂಗ್ರೆಸ್ನಿಂದ ತೀವ್ರ ಪ್ರತಿಕ್ರಿಯೆ ಬಂದಿದೆ.
ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿರುವ ಕರ್ಣಿ ಸೇನೆಯ ಮುಖ್ಯಸ್ಥ ಅಜಯ್ ಸೆಂಗಾರ್, ಸ್ಮಾರಕವು ಮರಾಠರ ವಿರುದ್ಧ ಬ್ರಿಟಿಷರ ವಿಜಯವನ್ನು ಆಚರಿಸಿದೆ. ಆದ್ದರಿಂದ ಅದನ್ನು ಮೌಲ್ಯೀಕರಿಸುವುದು ವಿಶ್ವಾಸಘಾತುಕ ಎಂದು ಆರೋಪಿಸಿದ್ದಾರೆ.

"ಪ್ರತಿ ವರ್ಷ ಜನವರಿ 1 ರಂದು ಆಚರಿಸಲಾಗುವ ಶೌರ್ಯ ದಿವಸ್ನಂದು ಭೀಮಾ ಕೋರೆಗಾಂವ್ನಲ್ಲಿರುವ ವಿಜಯ ಸ್ತಂಭವನ್ನು ಮುರಿಯುವುದಾಗಿ ಕರ್ಣಿ ಸೇನೆ ಎಚ್ಚರಿಸುತ್ತಿದೆ. ಮಹಾರಾಷ್ಟ್ರ ಶಾಂತಿಯುತ ರಾಜ್ಯವಾಗಿದ್ದು, ಕೆಲವು ಸಂಘಟನೆಗಳ ಈ ರೀತಿಯ ಬೆದರಿಕೆ ಮತ್ತು ಪ್ರಚೋದನೆ ಒಳ್ಳೆಯದಲ್ಲ. ಸಂಘಟನೆ ಭೀಮ ಭಕ್ತರನ್ನು ಪ್ರಚೋದಿಸಿ ಸಮಾಜದಲ್ಲಿ ಬಿರುಕು ಮೂಡಿಸಲು ಯತ್ನಿಸುತ್ತಿದೆ. ಅವರು ಏನಾದರೂ ಮಾಡಲು ಪ್ರಯತ್ನಿಸಿದರೆ, ಅವರಿಗೆ ತಕ್ಕ ಉತ್ತರ ಸಿಗುತ್ತದೆ" ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ನಿತಿನ್ ರಾವುತ್ ಹೇಳಿದ್ದಾರೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಖಾರತ್ ಬಣ) ಸಚಿನ್ ಖಾರತ್ ಕೂಡ ಕರ್ಣಿ ಸೇನೆಯ ಮುಖ್ಯಸ್ಥ ಅಜಯ್ ಸೆಂಗಾರ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಅವರು ಯಾವಾಗಲೂ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಅವರ ಬೇಡಿಕೆಗಳು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ. ಅವರಿಗೆ ಇತಿಹಾಸದ ಜ್ಞಾನವಿಲ್ಲ ಎಂದು ತೋರಿಸುತ್ತದೆ. ಇಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಈ ವ್ಯಕ್ತಿಯನ್ನು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಬೇಕು' ಎಂದು ಸಚಿನ್ ಖಾರತ್ ಹೇಳಿದ್ದಾರೆ.
ಐತಿಹಾಸಿಕ ದಾಖಲೆಗಳ ಪ್ರಕಾರ, ಜನವರಿ 1, 1818 ರಂದು ಕೋರೆಗಾಂವ್ ಭೀಮಾದಲ್ಲಿ ಪೇಶ್ವೆಗಳ ವಿರುದ್ಧ ಹೋರಾಡಿದ ಸೈನಿಕರ ನೆನಪಿಗಾಗಿ 1821 ರಲ್ಲಿ ಬ್ರಿಟಿಷ್ ಸರ್ಕಾರವು 'ಜಯಸ್ತಂಭ'ವನ್ನು ನಿರ್ಮಿಸಿತು.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ












Click it and Unblock the Notifications