ಡಿಎಂಕೆ ಕೌನ್ಸಿಲರ್ನಿಂದ ಹತ್ಯೆ: ಸಹೋದರನ ಸಾವಿಗೆ ನ್ಯಾಯಕ್ಕಾಗಿ ಸೇನಾ ಯೋಧ ಪಟ್ಟು!
ಡಿಎಂಕೆ ಕೌನ್ಸಿಲರ್ ಮತ್ತು ಅವರ ಬೆಂಬಲಿಗರು ಬುಧವಾರ ಹೊಡೆದು ತನ್ನ ಸಹೋದರನನ್ನು ಕೊಂದಿದ್ದಾರೆಂದು ಆರೋಪಿಸಿ ಸೇನೆ ಯೋಧ ಪ್ರಭಾಕರ್ ಆರೋಪಿಸಿದ್ದಾರೆ.
ಚೆನ್ನೈ ಫೆಬ್ರವರಿ 16: ತಮಿಳುನಾಡಿನ ಕೃಷ್ಣಗಿರಿಯಲ್ಲಿ ಬಟ್ಟೆ ಒಗೆಯುವ ವಿವಾದಕ್ಕೆ ಭಾರತೀಯ ಸೇನೆಯ ಯೋಧ ಪ್ರಭು ಅವರನ್ನು ಡಿಎಂಕೆ ಕೌನ್ಸಿಲರ್ ಮತ್ತು ಅವರ ಬೆಂಬಲಿಗರು ಬುಧವಾರ ಹೊಡೆದು ಕೊಂದಿದ್ದಾರೆ. ಇದೀಗ ಪ್ರಭು ಅವರ ಸಹೋದರ ಪ್ರಭಾಕರ್ ಅವರು ಆರ್ಮಿ ಜವಾನ್ ಆಗಿದ್ದು, ತಮ್ಮ ಸಹೋದರನಿಗೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ತನ್ನ ಸಹೋದರನನ್ನು ಕೊಂದವರಿಗೆ ಶಿಕ್ಷೆಯಾಗುವವರೆಗೂ ತಾನು ಫೋರ್ಸ್ಗೆ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ.
"ನನ್ನ ಸಹೋದರನನ್ನು ಕೊಂದವರಿಗೆ ಶಿಕ್ಷೆಯಾಗುವವರೆಗೂ ನಾನು (ಡ್ಯೂಟಿಗೆ ಸೇರಲು) ಕೆಲಸಕ್ಕೆ ಹೋಗುವುದಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ನಾನು 13 ವರ್ಷಗಳ ಕಾಲ ಫೋರ್ಸ್ನಲ್ಲಿ ಕೆಲಸ ಮಾಡಿದ್ದೇನೆ ಮತ್ತು ಒಂದು ತಿಂಗಳು ಮನೆಗೆ ಬಂದಿದ್ದೇನೆ. ಅವರು (ಡಿಎಂಕೆ ಕೌನ್ಸಿಲರ್ ಚಿನ್ನಸಾಮಿ) ನನಗೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೀರಿ ಆದರೆ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ'' ಎಂದು ಹೇಳಿದರು. ಅವರು ನೇರವಾಗಿ ನನಗೆ ಈ ಮಾತನ್ನು ಹೇಳಿದ್ದಾರೆ. ನನ್ನ ಸಹೋದರ ಈಗ ಸತ್ತಿದ್ದಾನೆ, ಅವನಿಗೆ ಇಬ್ಬರು ಮಕ್ಕಳಿದ್ದಾರೆ. ಅವನಿಗೆ ನ್ಯಾಯ ಬೇಕು "ಎಂದು ಪ್ರಭಾಕರ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ನ್ಯಾಯಕ್ಕಾಗಿ ಆಗ್ರಹ
"ನನ್ನ ಪತಿ ಕೆಳಗೆ ಬಿದ್ದ. ನನ್ನ ಪತಿ ನೀರು ಕೂಡ ಕುಡಿಯಲಿಲ್ಲ. ನಾವು ಅವರನ್ನು ಕಾವೇರಿಪಟ್ಟಿನಂನ ಆಸ್ಪತ್ರೆಗೆ ದಾಖಲಿಸಿದೆವು. ನನ್ನ ಪತಿ ಗಂಭೀರವಾಗಿದ್ದರು'' ಎಂದು ಕೃಷ್ಣಗಿರಿಯಲ್ಲಿ ಡಿಎಂಕೆ ಕೌನ್ಸಿಲರ್ನಿಂದ ಹತ್ಯೆಗೀಡಾದ ಸೇನಾ ಸಿಬ್ಬಂದಿಯ ಪತ್ನಿ ಹೇಳಿದರು.
ಭೀಕರತೆಯನ್ನು ವಿವರಿಸಿದ ಸೇನಾ ಯೋಧನ ಸಹೋದರ, ಡಿಎಂಕೆ ಕೌನ್ಸಿಲರ್ ಚಿನ್ನಸಾಮಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕೌನ್ಸಿಲರ್ ಚಿನ್ನಸಾಮಿ ವಿರುದ್ಧ ಆರೋಪ
"ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾವು ಬಟ್ಟೆಯೊಂದಿಗೆ ನೀರಿನ ಟ್ಯಾಂಕ್ ಬಳಿ ಹೋದೆವು. ಆಗಲೇ ಅಲ್ಲಿ ಜನರು ಬಟ್ಟೆ ಒಗೆಯುತ್ತಿದ್ದರು. ಆದರೆ ಅವರು (ಕೌನ್ಸಿಲರ್ ಚಿನ್ನಸಾಮಿ) ಅವರಿಗೆ ಏನನ್ನೂ ಹೇಳಲಿಲ್ಲ. ಅವನು ನೇರವಾಗಿ ನಮ್ಮ ಬಳಿಗೆ ಬಂದು ಬಟ್ಟೆಗಳನ್ನು ಅಲ್ಲಿಂದ ತೆಗೆಯಲು ಹೇಳಿದನು. ನಾನು ಸರಿ ಅಂದೆ. ನಂತರ, ನಾನು ನನ್ನ ತಾಯಿಯನ್ನು ಕೇಳಿದೆ, ಇತರರು ಸಹ ಇಲ್ಲಿ ಕಾರು ಮತ್ತು ಎಲ್ಲವನ್ನೂ ತೊಳೆಯುವಾಗ ನಮಗೆ ಬಟ್ಟೆ ಒಗೆಯಲು ಏನು ತೊಂದರೆ ಎಂದು. ಆಗ ಅವನು ನನ್ನನ್ನು ಬೈಯಲು ಪ್ರಾರಂಭಿಸಿದನು ಮತ್ತು ನನಗೆ ಹೊಡೆಯಲು ತನ್ನ ಚಪ್ಪಲಿಯನ್ನು ತೆಗೆದನು. ನೆರೆಹೊರೆಯವರು ಬಂದು ಸೌಹಾರ್ದಯುತವಾಗಿ ಸಮಸ್ಯೆಯನ್ನು ಪರಿಹರಿಸಿದರು, "ಎಂದು ಪ್ರಭಾಕರ್ ಹೇಳಿದರು.

ತಂದೆಯ ತಲೆಯ ಮೇಲೆ ಚಾಕುವಿನಿಂದ ಹಲ್ಲೆ
ಈ ಬಗ್ಗೆ ವಿವರಗಳನ್ನು ನೀಡುತ್ತಾ ಪ್ರಭಾಕರ್ ಅವರು ಸಂಜೆಯ ನಂತರ, ಅವರ ತಂದೆ ಮತ್ತು ಅವರ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರು. ಚಿನ್ನಸಾಮಿ ಅಲ್ಲಿಗೆ ಬಂದು ತನ್ನ ತಂದೆಯನ್ನು ಎಳೆಯಲು ಪ್ರಾರಂಭಿಸಿದನು. ಬಳಿಕ ಅವನು ತನ್ನ ಸಹೋದರನನ್ನು ಒಳಗೆ ಕರೆದುಕೊಂಡು ಹೋಗುವಂತೆ ಹೇಳಿದನು.
"ನಾವು ಒಳಗೆ ಹೋಗಲು ಪ್ರಯತ್ನಿಸಿದಾಗ, ಚಿನ್ನಸಾಮಿ ನನ್ನ ತಂದೆಯ ತಲೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದನು. ನನ್ನ ತಂದೆ ಕೆಳಗೆ ಬಿದ್ದು ರಕ್ತಸ್ರಾವವಾಗತೊಡಗಿತು. ನಾನು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಆರು ಜನರು ನನ್ನನ್ನು ಹಿಡಿದು ಕರೆದೊಯ್ದರು ಮತ್ತು ನನ್ನ ಸಹೋದರನ ತಲೆಯ ಹಿಂಭಾಗಕ್ಕೆ ಹೊಡೆದರು. ಅವನು ಪ್ರಜ್ಞಾಹೀನನಾಗಿ ಬಿದ್ದನು, ಆದರೆ ಅವರು ಅವನನ್ನು ಹೊಡೆಯುವುದನ್ನು ಮುಂದುವರೆಸಿದರು. ಆತನ ಹಣೆಯ ಮೇಲೂ ಚಾಕುವಿನಿಂದ ಗಾಯವಾಗಿದೆ'' ಎಂದು ಪ್ರಭಾಕರ್ ಹೇಳಿದರು.

ತನಿಖೆ ವಿಳಂಬದ ಆರೋಪ
ಇದರಲ್ಲಿ ಡಿಎಂಕೆ ಕೌನ್ಸಿಲರ್ ಭಾಗಿಯಾಗಿರುವುದರಿಂದ ಪೊಲೀಸರು ನಿಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಭಾಕರ್ ಆರೋಪಿಸಿದ್ದಾರೆ. ಆದರೆ, ಜಿಲ್ಲಾ ಎಸ್ಪಿ ಸರೋಜಕುಮಾರ್ ಠಾಕೂರ್ ಅವರು ಆರೋಪಗಳನ್ನು ತಳ್ಳಿಹಾಕಿದರು. ಪ್ರಭು ಅವರ ಸಾವಿಗೆ ಯಾವುದೇ ರಾಜಕೀಯ ಕೋನವಿಲ್ಲ ಮತ್ತು ಇದು ಹಲ್ಲೆ ಪ್ರಕರಣವಾಗಿದೆ ಎಂದು ಹೇಳಿದರು. ಪ್ರಭು ಮತ್ತು ಚಿನ್ನಸಾಮಿ ಸಂಬಂಧಿಕರಾಗಿದ್ದರು ಎಂದು ಠಾಕೂರ್ ಹೇಳಿದ್ದಾರೆ. ವದಂತಿ ಹಬ್ಬಿಸುವವರ ವಿರುದ್ಧ ಖಂಡಿತವಾಗಿಯೂ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಲು ಪೊಲೀಸರು ಎಲ್ಲ ನೆರವು ನೀಡಲಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications