ಕೇರಳ ಹಣಕಾಸು ಸಚಿವರನ್ನು ವಜಾಗೊಳಿಸುವಂತೆ ಸಿಎಂಗೆ ರಾಜ್ಯಪಾಲರ ಪತ್ರ
ತಿರುವನಂತಪುರಂ, ಅಕ್ಟೋಬರ್ 26: ಕೇರಳದ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನೀಡಿರುವ ದೇಶದ್ರೋಹಿ ಹೇಳಿಕೆಗೆ ಸಂಬಂಧಿಸಿದಂತೆ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಅನ್ನು ವಜಾಗೊಳಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಿಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪತ್ರ ಬರೆದಿದ್ದಾರೆ.
ಕಳೆದ ಬುಧವಾರ ತಿರುವನಂತಪುರಂನ ಕ್ಯಾಂಪಸ್ನಲ್ಲಿ ಬಾಲಗೋಪಾಲ್, "ಪ್ರಾದೇಶಿಕತೆ ಮತ್ತು ಪ್ರಾಂತೀಯತೆಯ ಬೆಂಕಿಯನ್ನು ಹೊತ್ತಿಸಲು ಮತ್ತು ಭಾರತದ ಏಕತೆಗೆ ಧಕ್ಕೆ ಉಂಟು ಮಾಡುವಂತೆ," ಭಾಷಣ ಮಾಡಿದ್ದಾರೆ ಎಂದು ರಾಜ್ಯಪಾಲರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
ಕೇರಳದ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಈ ಸಮಾರಂಭದಲ್ಲಿ "ಉತ್ತರ ಪ್ರದೇಶದಂತಹ ಸ್ಥಳಗಳಿಂದ ಬರುವವರಿಗೆ ಕೇರಳದ ವಿಶ್ವವಿದ್ಯಾನಿಲಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು," ಎಂದು ಹೇಳಿದರು. ದೇಶದ ಇತರ ಭಾಗಗಳಲ್ಲಿ ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ದಬ್ಬಾಳಿಕೆ ಅನ್ನು ನೆನಪಿಸಿಕೊಂಡರು.

ವಿವಿಧ ರಾಜ್ಯಗಳು ಉನ್ನತ ಶಿಕ್ಷಣದ ವಿವಿಧ ವ್ಯವಸ್ಥೆ ಹೊಂದಿವೆ:
"ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಹೇಳಿಕೆಗಳು ಕೇರಳ ಮತ್ತು ಭಾರತೀಯ ಒಕ್ಕೂಟದ ಇತರ ರಾಜ್ಯಗಳ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತವೆ. ಭಾರತದ ವಿವಿಧ ರಾಜ್ಯಗಳು ಉನ್ನತ ಶಿಕ್ಷಣದ ವಿವಿಧ ವ್ಯವಸ್ಥೆಗಳನ್ನು ಹೊಂದಿವೆ ಎಂಬ ತಪ್ಪು ಅಭಿಪ್ರಾಯವನ್ನು ಮೂಡಿಸಲು ಪ್ರಯತ್ನಿಸುತ್ತದೆ," ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಉಲ್ಲೇಖಿಸಿದ್ದಾರೆ.
ಕೆಎನ್ ಬಾಲಗೋಪಾಲ್ ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ:
"ಶಿಕ್ಷಣ ಸಚಿವರು ಮತ್ತು ಕಾನೂನು ಸಚಿವರಂತಹ ಇತರರು ನನ್ನ ಮೇಲೆ ದಾಳಿಯಲ್ಲಿ ತೊಡಗಿದ್ದರೂ, ಅವರು ವೈಯಕ್ತಿಕವಾಗಿ ನನಗೆ ನೋವುಂಟು ಮಾಡುವುದರಿಂದ ಅವರನ್ನು ನಿರ್ಲಕ್ಷಿಸಲು ನಾನು ಬಯಸುತ್ತೇನೆ. ಆದರೆ ಕೆಎನ್ ಬಾಲಗೋಪಾಲ್, ದೇಶದ್ರೋಹದ ಹೇಳಿಕೆಗಳನ್ನು ನಾನು ಗಮನಿಸದಿದ್ದರೆ ಅದು ನನ್ನ ಕಡೆಯಿಂದ ಗಂಭೀರ ಕರ್ತವ್ಯ ಲೋಪವಾಗುತ್ತದೆ," ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಮನವಿಯನ್ನು ತಕ್ಷಣವೇ ತಿರಸ್ಕರಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ರಾಜ್ಯಪಾಲರ ಪತ್ರವು ರಾಜಭವನದ ಹೊರಗೆ ರಾಜ್ಯದ ಆಡಳಿತಾರೂಢ ಎಡಪಕ್ಷಗಳ ವಿದ್ಯಾರ್ಥಿ ಘಟಕದ ಪ್ರತಿಭಟನಾ ಮೆರವಣಿಗೆ ಪ್ರೇರೇಪಣೆಯನ್ನು ನೀಡಿದೆ.












Click it and Unblock the Notifications