ಕೇರಳ ನೀಟ್ ಪರೀಕ್ಷೆಗೆ ಬ್ರಾ ತೆಗೆಯಲು ಸೂಚನೆ; ಪೋಷಕರ ಆಕ್ರೋಶ
ಕೊಲ್ಲಂ ಜುಲೈ 20: ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗುತ್ತಿದ್ದ ಬಾಲಕಿಯರ ಬ್ರಾ ತೆಗೆಯುವಂತೆ ಒತ್ತಾಯಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಮಹಿಳೆಯರು ಸೇರಿ ಐವರನ್ನು ಬಂಧಿಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಕೇರಳದ ಮಾರ್ ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಈ ಘಟನೆ ನಡೆದಿತ್ತು.
ಭದ್ರತಾ ತಪಾಸಣೆಯ ವೇಳೆ ವಿದ್ಯಾರ್ಥಿನಿಯರ ಬ್ರಾ ಸ್ಪರ್ಶಿಸಿ ಅದನ್ನು ಬಿಚ್ಚಲು ಹೇಳಿದ್ದರಿಂದ ಅವರು ಅವಮಾನಕ್ಕೆ ಒಳಗಾಗಿದ್ದಾರೆ ಎಂದು ಮೂರು ದೂರುಗಳು ಬಂದಿವೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬ್ರಾ ತೆಗೆಯುವಂತೆ ಹೇಳಿದ ಭದ್ರತಾ ತಪಾಸಣೆ ನಡೆಸಿದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದೆಂಥಾ ವ್ಯವಸ್ಥೆ: ನೀಟ್ ಪರೀಕ್ಷೆ ಬರೆಯಬೇಕಾದರೆ, ವಿದ್ಯಾರ್ಥಿನಿಯರು ಬ್ರಾ ಬಿಚ್ಚಿಡಬೇಕೇ!?
ಈ ಬಗ್ಗೆ ವಿದ್ಯಾರ್ಥಿಗಳು ವಿವರಣೆ ನೀಡಿದ್ದಾರೆ, "ನಮ್ಮ ಬ್ರಾ ತೆಗೆದು ಮೇಜಿನ ಮೇಲೆ ಇಡಲು ಅವರು ನಮ್ಮನ್ನು ಕೇಳಿದರು. ಎಲ್ಲಾ ಬ್ರಾಗಳನ್ನು ಒಟ್ಟಿಗೆ ಜೋಡಿಸಲಾಗಿತ್ತು. ನಾವು ಹಿಂತಿರುಗಿದಾಗ ನಮ್ಮದನ್ನು ಮರಳಿ ಪಡೆಯುತ್ತೇವೆಯೇ ಎಂದು ನಮಗೆ ತಿಳಿದಿರಲಿಲ್ಲ" ಎಂದು ಹೇಳಿದ್ದಾರೆ.
ಬ್ರಾ ತೆಗೆಯಲು ಸೂಚನೆ ನೀಡದ ದೂರು
"ನಾವು ಪರೀಕ್ಷೆಯನ್ನು ಬರೆಯುವಾಗ, ನಮ್ಮ ದೇಹ ಮುಚ್ಚಲು ಶಾಲು ಅಥವಾ ದುಪ್ಪಟ ಇಲ್ಲದ ಕಾರಣ ನಾವು ನಮ್ಮ ಕೂದಲನ್ನು ಮುಂದೆ ಹಾಕಿಕೊಂಡೆವು. ಪರೀಕ್ಷೆ ಮೇಳೆ ಹುಡುಗರು ಮತ್ತು ಹುಡುಗಿಯರು ಇದ್ದರು. ಇದು ನಿಜವಾಗಿಯೂ ಕಷ್ಟಕರ ಮತ್ತು ಅನಾನುಕೂಲದ ಪರಿಸ್ಥಿತಿಯಾಗಿತ್ತು" ಎಂದು ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ.
ತನಿಖೆಗೆ ವಿಶೇಷ ತಂಡ ರಚನೆ
ಆದರೆ ಈ ಆರೋಪಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಿರಾಕರಿಸಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸುವ ಸ್ವಾಯತ್ತ ಪರೀಕ್ಷಾ ಸಂಸ್ಥೆ, NTA NEET ಡ್ರೆಸ್ ಕೋಡ್ "ಆಪಾದಿತ ಯಾವುದೇ ಚಟುವಟಿಕೆಯನ್ನು ಅನುಮತಿಸುವುದಿಲ್ಲ" ಎಂದು ಹೇಳಿದೆ. ರಾಜ್ಯ ಸಚಿವರು ಕ್ರಮ ಕೈಗೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಿದ ಬಳಿಕ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.
ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯ
ಸೋಮವಾರ ವಿದ್ಯಾರ್ಥಿನಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಮಾರ್ ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ತನ್ನ ಮಗಳು ಬ್ರಾ ಇಲ್ಲದೆ ಮೂರು ಗಂಟೆಗಳ ಪರೀಕ್ಷೆಯನ್ನು ಬರೆಯುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.
"ಒಳಉಡುಪು ತೆಗೆಸಿ ಪರೀಕ್ಷೆ ಬರೆಸುವುದು ಎಂಥ ವ್ಯವಸ್ಥೆ?. ಯಾವ ನಿಯಮ ಇದು?. ಇದರಿಂದ ಅವರು ಮುಜುಗರಕ್ಕೆ ಒಳಗಾಗಿ ಪರೀಕ್ಷೆ ಬರೆಯುವುದಾದರೂ ಹೇಗೆ?'' ಎಂದು ಭದ್ರತಾ ಸಿಬ್ಬಂದಿಯ ವಿರುದ್ಧ ದೂರು ನೀಡಿದ್ದರು.
'ಗೌರವದ ಮೇಲಿನ ಬೆತ್ತಲೆ ಹಲ್ಲೆ'
ಮಂಗಳವಾರ ಕೇರಳದ ಉನ್ನತ ಶಿಕ್ಷಣ ಸಚಿವ ಆರ್. ಬಿಂದು ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು, ಘಟನೆಯನ್ನು "ವಿದ್ಯಾರ್ಥಿನಿಯರ ಘನತೆ ಮತ್ತು ಗೌರವದ ಮೇಲಿನ ಬೆತ್ತಲೆ ಹಲ್ಲೆ" ಎಂದು ಕರೆದಿದ್ದಾರೆ ಮತ್ತು ಕಠಿಣ ಕ್ರಮವನ್ನು ಕೋರಿದ್ದಾರೆ.
"ಈ ಅನಿರೀಕ್ಷಿತ ಘಟನೆಯ ಅವಮಾನ ಮತ್ತು ಆಘಾತವು ವಿದ್ಯಾರ್ಥಿಗಳ ನೈತಿಕತೆ ಮತ್ತು ಸ್ಥೈರ್ಯವನ್ನು ಪರಿಣಾಮ ಬೀರಿದೆ, ಅದರ ಪರಿಣಾಮವಾಗಿ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯು ಪರಿಣಾಮ ಬೀರಿತು" ಎಂದು ಬಿಂದು ಬರೆದಿದ್ದಾರೆ.
Recommended Video