ಸಲ್ಮಾನ್ ಜಾಮೀನು ಅರ್ಜಿ: ಬದಲಾಗದ ನ್ಯಾಯಾಧೀಶರು
ಬೆಂಗಳೂರು, ಏಪ್ರಿಲ್ 07: ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ಜೋಧಪುರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ವರ್ಗಾವಣೆಗೊಂಡಿದ್ದರೂ, ಸಲ್ಮಾನ್ ಅರ್ಜಿಯ ತೀರ್ಪು ಪ್ರಕಟಿಸಲಿದ್ದಾರೆ.
ನ್ಯಾಯಾಧೀಶರ ವರ್ಗಾವಣೆ ಕಾರಣ ಸಲ್ಮಾನ್ ಜಾಮೀನು ಅರ್ಜಿಯ ತೀರ್ಪು ಅತಂತ್ರಗೊಳ್ಳುವ ಸಾಧ್ಯತೆ ಇತ್ತು. ಆದರೆ, ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಅವರೇ ಸಲ್ಮಾನ್ ಖಾನ್ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಲಿದ್ದಾರೆ.
ತಾವು ವಿಚಾರಣೆ ನಡೆಸಿ ಬಾಕಿ ಉಳಿದಿರುವ ಇತರೆ ಪ್ರಕರಣಗಳನ್ನು ರವೀಂದ್ರ ಕುಮಾರ್ ಜೋಶಿ ಅವರು ಮುಂದುವರಿಸಲಿದ್ದಾರೆ.

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಜೋಧಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಸಲ್ಮಾನ್ ಅವರನ್ನು ನಟಿ ಪ್ರೀತಿ ಝಿಂಟಾ ಶುಕ್ರವಾರ ಭೇಟಿ ಮಾಡಿದ್ದರು.












Click it and Unblock the Notifications