ಪತ್ರಕರ್ತ ಚಂದಿರನ್ ಕೊಲೆ ಯತ್ನ ಮತ್ತು ಒಂದು ಮನುಷ್ಯತ್ವದ ಪಾಠ
ಮದುರೈನಲ್ಲಿ ಟಿವಿ ವರದಿಗಾರ ಚಂದಿರನ್ ಎಂಬುವರ ಮೇಲೆ ಮಾದಕವಸ್ತು ಜಾಲದ ಮೂವರು ಚಾಕುವಿನಿಂದ ದಾಳಿ ನಡೆಸಿ, ಕೊಲ್ಲಲು ಯತ್ನಿಸಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಜನರು ನೆರವಾದ ಬಗೆಯನ್ನು ತಿಳಿಯಿರಿ
ಮದುರೈ, ಮಾರ್ಚ್ 2: ಆ ಪತ್ರಕರ್ತರ ಹೆಸರು ಚಂದಿರನ್. ಮದುರೈನಲ್ಲಿ ಟಿವಿ ವರದಿಗಾರರು. ಮಾದಕವಸ್ತು ಜಾಲದಲ್ಲಿ ತೊಡಗಿಕೊಂಡ ಮೂವರು ಮುಲ್ಲೈ ನಗರದ ಮಾರುಕಟ್ಟೆ ಬಳಿ ಚಂದಿರನ್ ಅವರನ್ನು ಚಾಕುವಿನಿಂದ ತಿವಿದರು. ಆರೋಪಿಗಳಿಗೆ ಯಾಕಿಷ್ಟು ಕೋಪ ಅಂತ ನೋಡಿದರೆ, ಪತ್ರಕರ್ತ ಚಂದಿರನ್ ಮಾದಕವಸ್ತು ಜಾಲದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ಗುಮಾನಿ ಅವರದು.
ಬೆಳಗ್ಗೆ 7 ಗಂಟೆ ಸುಮಾರಿಗೆ ಹಾಲು ತರಲು ತೆರಳಿದ್ದವರ ಮೇಲೆ ಮೂವರು ಸೇರಿ ದಾಳಿ ನಡೆಸಿ, ಹಲವು ಬಾರಿ ಚಾಕುವಿನಿಂದ ತಿವಿದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಚಂದಿರನ್ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯಕ್ಕೆ ಅವರಿಗೆ ಮೀನಾಕ್ಷಿ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.[ಆತ ಸುಟ್ಟು ಕರಕಲಾಗುತ್ತಿದ್ದರೆ ಜನ ವಿಡಿಯೋ ತೆಗೆಯುತ್ತಿದ್ದರು!]

ಇದು ಅವರ ಮೇಲೆ ನಡೆದ ಮೊದಲ ದಾಳಿಯೇನಲ್ಲ. ನೆರೆಮನೆಯವರೊಬ್ಬರು ದೂರು ನೀಡಿದರೆ, ಆಗಲೂ ಚಂದಿರನ್ ಮೇಲೆ ಅನುಮಾನಗೊಂಡು ಈ ಪತ್ರಕರ್ತ ಹಾಗೂ ಅವರ ಕುಟುಂಬದ ಮೇಲೆ ದಾಳಿ ಮಾಡಲಾಗಿತ್ತು. ಚಂದಿರನ್ ಮನೆಯ ಏಸಿಗೆ ಬೆಂಕಿ ಹೊತ್ತಿಸಿ, ಅವರ ಮಗನ ಮೇಲೆ ಹಲ್ಲೆ ನಡೆಸಿದ್ದರು.
ಆ ನಂತರ ಚಂದಿರನ್ ಪೊಲೀಸರಿಗೆ ದೂರು ನೀಡಿದ್ದರು. ದಾಳಿಕೋರರನ್ನು ಬಂಧಿಸಿದರೂ ಎರಡೇ ದಿನದಲ್ಲಿ ಅವರು ಆಚೆ ಬಂದಿದ್ದರು. ಅದು ಹೇಗೆ ಬಂದರು ಎಂದು ಚಂದಿರನ್ ಅವರ ಮಗ ರತೀಶ್ ಅಚ್ಚರಿಪಡುತ್ತಾನೆ. ಆದರೆ ಸದ್ಯದ ಪರಿಸ್ಥಿತಿ ಬಗ್ಗೆ ಹೇಳಬೇಕು. ಗಾಯಾಳು ವರದಿಗಾರರ ಚಿಕಿತ್ಸೆಗೆ ನೆರವು ಬೇಕಾಗಿದೆ ಎಂದು ದ ನ್ಯೂಸ್ ಮಿನಟ್ ನ ಪ್ರಧಾನ ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದರು.
I have deleted my tweet with the crowd funding link. Lots and lots of good people contributed and we crossed our target of Rs 70,000
— Dhanya Rajendran (@dhanyarajendran) March 2, 2017
ಚಂದಿರನ್ ಚಿಕಿತ್ಸೆಗೆ ಎಪ್ಪತ್ತು ಸಾವಿರ ರುಪಾಯಿ ನೆರವು ಜನರಿಂದಲೇ ದೊರೆತಿದೆ. ಚಿಕಿತ್ಸೆಗೆ ಅಗತ್ಯ ಇದ್ದಷ್ಟು ಹಣದ ನೆರವು ಸಿಕ್ಕಿದೆ ಎಂದು ಧನ್ಯಾ ಮತ್ತೆ ಟ್ವೀಟ್ ಮಾಡಿದ್ದಾರೆ. ಇಷ್ಟೆಲ್ಲ ಏಕೆ ತಿಳಿಸಬೇಕಾಯಿತು ಅಂದರೆ, ಇಲ್ಲಿ ಕೋಪಗೊಂಡು ಚಾಕುವಿನಿಂದ ಕೊಲ್ಲುವ ಜನರು ಇರುವಂತೆಯೇ, ನೆರವು ಬೇಕು ಎಂದು ಕೈ ಚಾಚಿದಾಗ ತಮ್ಮಿಂದಾದ ಅನುಕೂಲ ಮಾಡುವವರೂ ಇದ್ದಾರೆ. ಇಂಥವರ ಸಂತತಿ ಸಾವಿರವಾಗಲಿ.[ಮೋರಿಯೇ ಅರಮನೆ, ಎಂಜಲೆಲೆಯೇ ಮೃಷ್ಟಾನ್ನ ಭೋಜನ!]
ಚಂದಿರನ್ ಹಾಗೂ ಇಂಥ ಪತ್ರಕರ್ತರ ಸ್ಥೈರ್ಯ ಉಳಿಯುವುದೇ ಸಂದಿಗ್ಧ ಸಂದರ್ಭದಲ್ಲಿ ಸಮಾಜವು ಹೇಗೆ ಸ್ಪಂದಿಸಿತು ಎಂಬುದರ ಮೇಲೆ. ಸಮಾಜ ತನ್ನ ಜವಾಬ್ದಾರಿ ನಿರ್ವಹಿಸಿದೆ. ಚಂದಿರನ್ ಅವರನ್ನು ಕೊಲ್ಲಲು ಯತ್ನಿಸಿದ ಸಮಾಜಘಾತುಕ ಶಕ್ತಿಗಳನ್ನು ಪೊಲೀಸರು ಬಂಧಿಸಲಿ, ಸರಿಯಾದ ಶಿಕ್ಷೆಯಾಗುವಂತೆ ಮಾಡಲಿ ಎಂಬುದಷ್ಟೇ ಸದ್ಯದ ಒತ್ತಾಯ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications