ಪತ್ರಕರ್ತ ಚಂದಿರನ್ ಕೊಲೆ ಯತ್ನ ಮತ್ತು ಒಂದು ಮನುಷ್ಯತ್ವದ ಪಾಠ
ಮದುರೈನಲ್ಲಿ ಟಿವಿ ವರದಿಗಾರ ಚಂದಿರನ್ ಎಂಬುವರ ಮೇಲೆ ಮಾದಕವಸ್ತು ಜಾಲದ ಮೂವರು ಚಾಕುವಿನಿಂದ ದಾಳಿ ನಡೆಸಿ, ಕೊಲ್ಲಲು ಯತ್ನಿಸಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಜನರು ನೆರವಾದ ಬಗೆಯನ್ನು ತಿಳಿಯಿರಿ
ಮದುರೈ, ಮಾರ್ಚ್ 2: ಆ ಪತ್ರಕರ್ತರ ಹೆಸರು ಚಂದಿರನ್. ಮದುರೈನಲ್ಲಿ ಟಿವಿ ವರದಿಗಾರರು. ಮಾದಕವಸ್ತು ಜಾಲದಲ್ಲಿ ತೊಡಗಿಕೊಂಡ ಮೂವರು ಮುಲ್ಲೈ ನಗರದ ಮಾರುಕಟ್ಟೆ ಬಳಿ ಚಂದಿರನ್ ಅವರನ್ನು ಚಾಕುವಿನಿಂದ ತಿವಿದರು. ಆರೋಪಿಗಳಿಗೆ ಯಾಕಿಷ್ಟು ಕೋಪ ಅಂತ ನೋಡಿದರೆ, ಪತ್ರಕರ್ತ ಚಂದಿರನ್ ಮಾದಕವಸ್ತು ಜಾಲದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ಗುಮಾನಿ ಅವರದು.
ಬೆಳಗ್ಗೆ 7 ಗಂಟೆ ಸುಮಾರಿಗೆ ಹಾಲು ತರಲು ತೆರಳಿದ್ದವರ ಮೇಲೆ ಮೂವರು ಸೇರಿ ದಾಳಿ ನಡೆಸಿ, ಹಲವು ಬಾರಿ ಚಾಕುವಿನಿಂದ ತಿವಿದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಚಂದಿರನ್ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯಕ್ಕೆ ಅವರಿಗೆ ಮೀನಾಕ್ಷಿ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.[ಆತ ಸುಟ್ಟು ಕರಕಲಾಗುತ್ತಿದ್ದರೆ ಜನ ವಿಡಿಯೋ ತೆಗೆಯುತ್ತಿದ್ದರು!]

ಇದು ಅವರ ಮೇಲೆ ನಡೆದ ಮೊದಲ ದಾಳಿಯೇನಲ್ಲ. ನೆರೆಮನೆಯವರೊಬ್ಬರು ದೂರು ನೀಡಿದರೆ, ಆಗಲೂ ಚಂದಿರನ್ ಮೇಲೆ ಅನುಮಾನಗೊಂಡು ಈ ಪತ್ರಕರ್ತ ಹಾಗೂ ಅವರ ಕುಟುಂಬದ ಮೇಲೆ ದಾಳಿ ಮಾಡಲಾಗಿತ್ತು. ಚಂದಿರನ್ ಮನೆಯ ಏಸಿಗೆ ಬೆಂಕಿ ಹೊತ್ತಿಸಿ, ಅವರ ಮಗನ ಮೇಲೆ ಹಲ್ಲೆ ನಡೆಸಿದ್ದರು.
ಆ ನಂತರ ಚಂದಿರನ್ ಪೊಲೀಸರಿಗೆ ದೂರು ನೀಡಿದ್ದರು. ದಾಳಿಕೋರರನ್ನು ಬಂಧಿಸಿದರೂ ಎರಡೇ ದಿನದಲ್ಲಿ ಅವರು ಆಚೆ ಬಂದಿದ್ದರು. ಅದು ಹೇಗೆ ಬಂದರು ಎಂದು ಚಂದಿರನ್ ಅವರ ಮಗ ರತೀಶ್ ಅಚ್ಚರಿಪಡುತ್ತಾನೆ. ಆದರೆ ಸದ್ಯದ ಪರಿಸ್ಥಿತಿ ಬಗ್ಗೆ ಹೇಳಬೇಕು. ಗಾಯಾಳು ವರದಿಗಾರರ ಚಿಕಿತ್ಸೆಗೆ ನೆರವು ಬೇಕಾಗಿದೆ ಎಂದು ದ ನ್ಯೂಸ್ ಮಿನಟ್ ನ ಪ್ರಧಾನ ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದರು.
I have deleted my tweet with the crowd funding link. Lots and lots of good people contributed and we crossed our target of Rs 70,000
— Dhanya Rajendran (@dhanyarajendran) March 2, 2017
ಚಂದಿರನ್ ಚಿಕಿತ್ಸೆಗೆ ಎಪ್ಪತ್ತು ಸಾವಿರ ರುಪಾಯಿ ನೆರವು ಜನರಿಂದಲೇ ದೊರೆತಿದೆ. ಚಿಕಿತ್ಸೆಗೆ ಅಗತ್ಯ ಇದ್ದಷ್ಟು ಹಣದ ನೆರವು ಸಿಕ್ಕಿದೆ ಎಂದು ಧನ್ಯಾ ಮತ್ತೆ ಟ್ವೀಟ್ ಮಾಡಿದ್ದಾರೆ. ಇಷ್ಟೆಲ್ಲ ಏಕೆ ತಿಳಿಸಬೇಕಾಯಿತು ಅಂದರೆ, ಇಲ್ಲಿ ಕೋಪಗೊಂಡು ಚಾಕುವಿನಿಂದ ಕೊಲ್ಲುವ ಜನರು ಇರುವಂತೆಯೇ, ನೆರವು ಬೇಕು ಎಂದು ಕೈ ಚಾಚಿದಾಗ ತಮ್ಮಿಂದಾದ ಅನುಕೂಲ ಮಾಡುವವರೂ ಇದ್ದಾರೆ. ಇಂಥವರ ಸಂತತಿ ಸಾವಿರವಾಗಲಿ.[ಮೋರಿಯೇ ಅರಮನೆ, ಎಂಜಲೆಲೆಯೇ ಮೃಷ್ಟಾನ್ನ ಭೋಜನ!]
ಚಂದಿರನ್ ಹಾಗೂ ಇಂಥ ಪತ್ರಕರ್ತರ ಸ್ಥೈರ್ಯ ಉಳಿಯುವುದೇ ಸಂದಿಗ್ಧ ಸಂದರ್ಭದಲ್ಲಿ ಸಮಾಜವು ಹೇಗೆ ಸ್ಪಂದಿಸಿತು ಎಂಬುದರ ಮೇಲೆ. ಸಮಾಜ ತನ್ನ ಜವಾಬ್ದಾರಿ ನಿರ್ವಹಿಸಿದೆ. ಚಂದಿರನ್ ಅವರನ್ನು ಕೊಲ್ಲಲು ಯತ್ನಿಸಿದ ಸಮಾಜಘಾತುಕ ಶಕ್ತಿಗಳನ್ನು ಪೊಲೀಸರು ಬಂಧಿಸಲಿ, ಸರಿಯಾದ ಶಿಕ್ಷೆಯಾಗುವಂತೆ ಮಾಡಲಿ ಎಂಬುದಷ್ಟೇ ಸದ್ಯದ ಒತ್ತಾಯ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications