'Jhooth bole kauwa kaate': ಆಮ್ ಆದ್ಮಿ ಸಂಸದರ ತಲೆಗೆ ಹೊಡೆದ ಕಾಗೆ!

ದೆಹಲಿ ಜುಲೈ 26: ಆಮ್ ಆದ್ಮಿ ಪಕ್ಷದ ಯುವ ಸಂಸದ ರಾಘವ್ ಚಾಧಾ ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಹೀಗಿರುವಾಗ ರಾಘವ್ ಚಾಧಾ ಅವರ ಮೇಲೆ ಕಾಗೆಯೊಂದು ದಾಳಿ ಮಾಡಿದೆ. ಈ ಅನಿರೀಕ್ಷಿತ ಹಾಗೂ ಆಶ್ಚರ್ಯಕರ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಬಿಜೆಪಿ ದಾಳಿಗೆ ಗುರಿಯಾಗಿದೆ.

ವೇಗವಾಗಿ ಹಾರಿ ಬಂದ ಕಾಗೆಯೊಂದು ಸಂಸದ ರಾಘವ್ ಚಾಧಾ ಅವರಿಗೆ ಗರಿಯಿಂದ ತಲೆಗೆ ಹೊಡೆದಿದೆ. ಈ ಘಟನೆ ಭಾರೀ ಸಂಚಲನ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹೇಳಿದರೆ ಕಾಗೆ ಕಚ್ಚುತ್ತದೇ? ಎಂಬ ಚರ್ಚೆ ಹುಟ್ಟಿಕೊಂಡಿದೆ.

Jhooth bole kauwa kaate: Crow hit the head of the Aam Aadmi MP!

ರಾಘವ್ ಸದಾ ಆಮ್ ಆದ್ಮಿ ಪಕ್ಷದ ಯುವ ನಾಯಕ. ಅವರು ರಾಜ್ಯಸಭಾ ಸಂಸದರಾಗಿದ್ದಾರೆ. ಸದ್ಯ ಅವರು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ರಾಘವ್ ಚಾಧಾ ಇಂದು ಸಂಸದೀಯ ಸಭೆಯಲ್ಲಿ ಭಾಗವಹಿಸಲು ಬಂದಿದ್ದರು. ಇದೇ ಸಂದರ್ಭದಲ್ಲಿ ಸೆಲ್ ಫೋನ್ ನಲ್ಲಿ ಮಾತನಾಡುತ್ತಾ ಕೈಯಲ್ಲಿ ಕೆಲವು ದಾಖಲೆಗಳನ್ನು ಹಿಡಿದುಕೊಂಡು ಸಭೆಯ ಹೊರಗೆ ನಡೆದಾಡುತ್ತಿದ್ದರು. ಆಗ ಕಾಗೆಯೊಂದು ಹಾರಿ ಬಂದು ಅವರ ತಲೆಗೆ ಗರಿಯಿಂದ ಹೊಡೆದಿದೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಎಗ್ಗಿಲ್ಲದೆ ಹರಿದಾಡುತ್ತಿವೆ.

ಇದನ್ನು ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಬೆಂಬಲಿಗರು, ಸುಳ್ಳು ಹೇಳಿದರೆ ಕಾಗೆ ನಿಮ್ಮ ಮೇಲೆ ದಾಳಿ ಮಾಡುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ. ಅಂದರೆ ಸುಳ್ಳು ಹೇಳಿದರೆ ಕಾಗೆ ದಾಳಿ ಮಾಡುತ್ತದೆ ಎಂಬ ಆಡುನುಡಿ ಇದೆ. ಈ ಹಿನ್ನೆಲೆಯಲ್ಲಿ ರಾಘವ್ ಚಾಧಾ ಸುಳ್ಳು ಹೇಳಿದ್ದಾರೆ. ಹಾಗಾಗಿಯೇ ಅವರ ಮೇಲೆ ಕಾಗೆ ದಾಳಿಯಾಗಿದೆ ಎಂದು ಬಿಜೆಪಿಯವರು ಪೋಸ್ಟ್ ಹಾಕುತ್ತಿದ್ದಾರೆ. ಈ ಫೋಟೋ ಇದೀಗ ಸಾಕಾಷ್ಟು ವೈರಲ್ ಆಗಿದೆ.

ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ವಿವರಣೆ ನೀಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ರಾಘವ್ ಚಾಧಾ ಅವರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಮುಂಗಾರು ಅಧಿವೇಶನದಿಂದ ಅಮಾನತುಗೊಳಿಸಲಾಗಿತ್ತು.

ರಾಘವ್ ಚಾಧಾ ಇದನ್ನು ತೀವ್ರವಾಗಿ ಖಂಡಿಸಿದರು. ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರ ಮುಂದೆ ಯುವ ಸಂಸದ ರಾಘವ ಸದಾ ಅವರು ಸಂಜಯ್ ಸಿಂಗ್ ಅಮಾನತು ಕ್ರಮವನ್ನು ಬಲವಾಗಿ ಖಂಡಿಸಿದರು. ಆಗ ಜಗದೀಪ್ ಧನಕರ್, ನೀವು ಯುವ ಸಂಸದರು. ಸಂಸತ್ತಿನಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ವರಿಷ್ಠರ ಸಲಹೆ ಬೇಕು' ಎಂದು ಟೀಕಿಸಿದರು.

ಬಿಜೆಪಿ ಟ್ವೀಟ್‌ನಲ್ಲಿ, "ನಾವು ಇಂದಿನವರೆಗೂ ಕೇಳಿದ್ದೆವು, ಇಂದು ನಾವು ನೋಡಿದ್ದೇವೆ, ಕಾಗೆಯು ಸುಳ್ಳುಗಾರನನ್ನು ಕಚ್ಚುತ್ತದೆ!" ಎಂದು ಬರೆದಿದೆ. ಈ ಪೋಸ್ಟ್ 4,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು ಸುಮಾರು 1,400 ರೀಟ್ವೀಟ್‌ಗಳನ್ನು ಗಳಿಸಿದೆ.

ಹಲವಾರು ಟ್ವಿಟ್ಟರ್ ಬಳಕೆದಾರರು ರಾಘವ್ ಚಾಧಾ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, "ಹೃದಯವು ತುಂಬಾ ಅಸಮಾಧಾನಗೊಂಡಿದೆ" ಎಂದು ಬರೆದಿದ್ದಾರೆ. ಇದು ಕೆಟ್ಟ ಶಕುನ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಹೇಳಿದ್ದಾರೆ.

ಬುಧವಾರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕಾಗಿ ವಿರೋಧ ಪಕ್ಷದ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (ಇಂಡಿಯಾ) ನೋಟಿಸ್ ಅನ್ನು ಅಂಗೀಕರಿಸಿದರು. ಆದಾಗ್ಯೂ, ಬಿಜೆಪಿ ಸರ್ಕಾರವು ಲೋಕಸಭೆಯಲ್ಲಿ ಕನಿಷ್ಠ 332 ಶಾಸಕರ ಬೆಂಬಲವನ್ನು ಹೊಂದಿದೆ ಮತ್ತು ಅವಿಶ್ವಾಸ ನಿರ್ಣಯದಿಂದ ಯಾವುದೇ ಆತಂಕವಿಲ್ಲ ಎಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+