ಜಯಾ ತೆರಿಗೆ ಸಲ್ಲಿಕೆ ಮಾಡಿದ್ದು ಅಕ್ರಮ ಆಸ್ತಿ ಪ್ರಕರಣ ಮುಚ್ಚಿಹಾಕಲೆ?
ನವದೆಹಲಿ, ಮಾರ್ಚ್, 10: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ ಖುಲಾಸೆ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 15 ಕ್ಕೆ ಮುಂದೂಡಿದೆ.
ಕರ್ನಾಟಕದ ಪರ ವಾದ ಮಂಡಿಸಿದ ದುಶ್ಯಂತ ದಾವೆ ತಮ್ಮ ವಾದವನ್ನು ಗುರುವಾರ ಮಧ್ಯಾಹ್ನ 4 ಗಂಟೆಗೆ ಅಂತ್ಯ ಮಾಡಿದರು. [ಹೈಕೋರ್ಟ್ ವಿಶ್ಲೇಷಣೆ ಗೇಲಿ ಮಾಡಿದ ರಾಜ್ಯ ಸರ್ಕಾರ]

ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಕೆ ಮಾಡಿದ್ದು ಹೈ ಕೋರ್ಟ್ ತೆಗೆದುಕೊಂಡ ತೀರ್ಮಾನಗಳ ಲೋಪಗಳನ್ನು ದಾವೆ ಒಂದೊಂದಾಗಿ ಬಿಚ್ಚಿಟ್ಟಿದ್ದರು.
ಕರ್ನಾಟಕ ಮಂಡಿಸಿದ ವಾದದ ಪ್ರಮುಖ ಅಂಶಗಳು
* ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಜಯಲಲಿತಾ ಆದಾಯ ತೆರಿಗೆ ಸಲ್ಲಿಕೆ ಮಾಡಿದ್ದು ಕೇವಲ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಮುಚ್ಚಿಹಾಕುವುದಕ್ಕೆ ಎಂಬ ಪ್ರಶ್ನೆ ಮೂಡುತ್ತದೆ.[ಜಯಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಟೈಮ್ ಲೈನ್]
* ನಾವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಲಿಖಿತವಾಗಿ ಸಲ್ಲಿಕೆ ಮಾಡಿದ್ದೇವೆ, ಹೈ ಕೋರ್ಟ್ ನೀಡಿದ ತೀರ್ಪಿನಲ್ಲಿರುವ ದೋಷಗಳನ್ನು ತೆರೆದಿಟ್ಟಿದ್ದೇವೆ.
* ದುಶ್ಯಂತ ದಾವೆ ನಂತರ ಬಿ ವಿ ಆಚಾರ್ಯ ರಾಜ್ಯದ ಪರವಾಗಿ ವಾದವನ್ನು ಮುಂದುವರಿಸಲಿದ್ದಾರೆ.
* ಜಯಲಲಿತಾ ಉಡುಗೊರೆ ಪಡೆದ ಕಂಪನಿಗಳು ಮತ್ತು ಗಿಫ್ಟ್ ಪಡೆದುಕೊಂಡಿದ್ದರ ಬಗ್ಗೆ ಆಚಾರ್ಯ ಬೆಳಕು ಚೆಲ್ಲಲಿದ್ದಾರೆ.
* ರಾಜ್ಯದ ಸಂಪೂರ್ಣ ವಾದವನ್ನು ಮಂಡಿಸಲು ಇನ್ನು ಮೂರು ದಿನ ಬೇಕು ಎಂದು ಆಚಾರ್ಯ ಕೇಳಿಕೊಳ್ಳಲಿದ್ದಾರೆ.
* ದುಶ್ಯಂತ ದಾವೆ ತಮ್ಮ ವಾದವನ್ನು ಮುಗಿಸಿದ್ದು ಮಂಡನೆ ಮಾಡಿದ್ದ ಎಲ್ಲ ವಿಚಾರಗಳಿಗೆ ಒಂದು ತಾರ್ಕಿಕ ಅಂತ್ಯ ಹೇಳಿದರು.
* ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 15 ಕ್ಕೆ ಮುಂದೂಡಿತು
* ರಾಜ್ಯ ಸರ್ಕಾರದ ಪರವಾಗಿ ಬಿ ವಿ ಆಚಾರ್ಯ ಮಾರ್ಚ್ 15 ರಂದು ವಾದ ಮಂಡನೆ ಮಾಡಲಿದ್ದಾರೆ.












Click it and Unblock the Notifications