ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರ: ಸೈನಿಕನಿಗೆ ಕಲ್ಲಿನಿಂದ ಹೊಡೆದು ಸಾಯಿಸಿದ ದುಷ್ಕರ್ಮಿ ಯುವಕರು

|
Google Oneindia Kannada News

ಶ್ರೀನಗರ, ಅಕ್ಟೋಬರ್ 26: ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರ ಗುಂಪಿನಿಂದ ಕಲ್ಲೇಟಿಗೆ ಒಳಗಾಗಿ ತೀವ್ರ ಗಾಯಗೊಂಡಿದ್ದ ಸೈನಿಕ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.

ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಸೈನಿಕ ಹುತಾತ್ಮ, ಇಬ್ಬರು ಉಗ್ರರ ಬಲಿಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಸೈನಿಕ ಹುತಾತ್ಮ, ಇಬ್ಬರು ಉಗ್ರರ ಬಲಿ

ಗುರುವಾರ ಗಡಿ ರಸ್ತೆ ಸಂಸ್ಥೆಗೆ (ಬಿಆರ್‌ಒ) ಭದ್ರತೆ ಒದಗಿಸುವ ಸಲುವಾಗಿ ನಿಯೋಜಿಸಲಾಗಿದ್ದ ತ್ವರಿತ ಪ್ರತಿಕ್ರಿಯಾ ತಂಡದಲ್ಲಿ ಸಿಪಾಯಿ ರಾಜೇಂದ್ರ ಸಿಂಗ್ ಕೂಡ ಸೇರಿದ್ದರು. ಸಂಜೆ ಆರು ಗಂಟೆ ಸುಮಾರಿಗೆ ಅನಂತ್‌ನಾಗ್ ಬೈಪಾಸ್‌ ಸಮೀಪ ಹಾದುಹೋಗುವಾಗ ಕಿಡಿಗೇಡಿ ಯುವಕರು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಒಳನುಸುಳುಕೋರರ ಶವ ತೆಗೆದುಕೊಂಡು ಹೋಗಲು ಪಾಕ್ ಸೇನೆಗೆ ಹೇಳಿದ ಭಾರತಒಳನುಸುಳುಕೋರರ ಶವ ತೆಗೆದುಕೊಂಡು ಹೋಗಲು ಪಾಕ್ ಸೇನೆಗೆ ಹೇಳಿದ ಭಾರತ

Jammu and Kashmir Army jawan rajendra singh injured in stone pelting dies

ಘಟನೆಯಲ್ಲಿ ರಾಜೇಂದ್ರ ಸಿಂಗ್ ಅವರ ತಲೆಗೆ ಕಲ್ಲು ಬಡಿದು ತೀವ್ರ ಗಾಯವಾಗಿತ್ತು. ಕೂಡಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಸೇನಾ ಶಿಬಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವಿಪರೀತ ರಕ್ತಸ್ರಾವ ಮತ್ತು ಆಳವಾದ ಗಾಯದಿಂದಾಗಿ ಅವರು ಶುಕ್ರವಾರ ಕೊನೆಯುಸಿರೆಳೆದರು.

ಪಾಕ್ ನ 'ಬ್ಯಾಟ್' ನುಸುಳುಕೋರರ ಜತೆಗೆ ಗುಂಡಿನ ಚಕಮಕಿ, ಮೂರು ಸೈನಿಕರು ಹುತಾತ್ಮ ಪಾಕ್ ನ 'ಬ್ಯಾಟ್' ನುಸುಳುಕೋರರ ಜತೆಗೆ ಗುಂಡಿನ ಚಕಮಕಿ, ಮೂರು ಸೈನಿಕರು ಹುತಾತ್ಮ

ಉತ್ತರಾಖಂಡದ ಬಡೇನಾ ಗ್ರಾಮದ ನಿವಾಸಿಯಾಗಿರುವ ರಾಜೇಂದ್ರ ಸಿಂಗ್, 2016ರಲ್ಲಿ ಸೇನೆ ಸೇರಿದ್ದರು.

ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಇಬ್ಬರು ಯೋಧರು ಕೂಡ ಶುಕ್ರವಾರ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.

English summary
Army Jawan Rajendra Singh who was injured after being hit by a stone by group of youth dies on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X