ಇನ್ಶಾ ಅಲ್ಲಾಹ್ ! ಜಲ್ಲಿಕಟ್ಟು ಹಿಂಸಾಚಾರದ ಹಿಂದಿನ ಅಸಲಿಯತ್ತು
ಜಲ್ಲಿಕಟ್ಟು ಹಿಂಸಾಚಾರದ ಹಿಂದೆ ದೇಶದ್ರೋಹಿ ಸಂಘಟನೆಗಳ ಕೈವಾಡ ಎನ್ನುವುದು ಚೆನ್ನೈ ಪೋಲಿಸರ ಹೇಳಿಕೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಹೋರಾಟದ ಮೂಲಕ ಏನಾದರೂ ಸಾಧಿಸಬಹುದು ಎನ್ನುವುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ತಮಿಳುನಾಡಿನ ಯುವ ಸಮುದಾಯದ ಜಲ್ಲಿಕಟ್ಟು ಹೋರಾಟ ಸೋಮವಾರ (ಜ 23) ವ್ಯವಸ್ಥಿತ ರೀತಿಯಲ್ಲಿ ಹಿಂಸಾಚಾರಕ್ಕೆ ತಿರುಗಿತು.
ಜಲ್ಲಿಕಟ್ಟು ಹೋರಾಟ ದಾರಿ ತಪ್ಪುತ್ತಿದೆ ಎನ್ನುವುದನ್ನು ಅರಿತೋ ಏನೋ, ಈ ಹೋರಾಟದ ರೂವಾರಿಯಾಗಿದ್ದ ತಮಿಳು ಸಂಗೀತ ನಿರ್ದೇಶಕ ಆದಿ, ಕಾರ್ತಿಕೇಯ ಶಿವಸೇನಾಪತಿ ಮತ್ತು ಆಯಿಯಾ, ಒಂದು ದಿನದ ಹಿಂದೆಯೇ ಈ ಹೋರಾಟದಿಂದ ಹಿಂದಕ್ಕೆ ಸರಿದಿದ್ದರು. (ಉಗ್ರರೂಪ ಪಡೆದುಕೊಂಡ ಜಲ್ಲಿಕಟ್ಟು ಪ್ರತಿಭಟನೆ)
#SaveJallikattu ಎನ್ನುವ ಹ್ಯಾಷ್ ಟ್ಯಾಗ್ ಮೂಲಕ ಸಾಮಾಜಿಕ ತಾಣದಲ್ಲಿ ಹೋರಾಟಕ್ಕೆ ಬನ್ನಿ ಎಂದು ಸಂಗೀತ ನಿರ್ದೇಶಕ ಆದಿ ನೀಡಿದ್ದ ಕರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು. ಅದರಲ್ಲೂ ಪ್ರಮುಖವಾಗಿ ಯುವ ಮತ್ತು ವಿದ್ಯಾರ್ಥಿ ಸಮುದಾಯ.
ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ ಎಂದು ದೇಶ ವಿರೋಧಿ ಸಂಘಟನೆಗಳು ಚಳುವಳಿಗೆ ಸಾಥ್ ನೀಡಿದರು. ಅಲ್ಲಿಗೆ, ಜಲ್ಲಿಕಟ್ಟು ನಡೆಯಬೇಕು ಎನ್ನುವ ಸದುದ್ದೇಶದಿಂದ ಆರಂಭವಾದ ಹೋರಾಟ ದಾರಿತಪ್ಪಿತು.
ರಾಷ್ಟ್ರಧ್ವಜಕ್ಕೆ ಅಗೌರವ, ತಮಿಳುನಾಡು ಪ್ರತ್ಯೇಕ ರಾಷ್ಟ್ರವಾಗಬೇಕು, ದೇಶ ವಿರೋಧಿ, ಪ್ರಧಾನಿ ಮೋದಿಯನ್ನು ಅತ್ಯಂತ ಕೆಟ್ಟ ಪದಗಳ ಮೂಲಕ ಸಂಭೋದಿಸುವ ಮೂಲಕ, ಜೊತೆಗೆ ಮುಸ್ಲಿಂ ಉಗ್ರರ ಪರವಾಗಿ ಘೋಷಣೆ ಕೂಗಲಾಗುತ್ತಿತ್ತು ಎನ್ನುವುದು ಚೆನ್ನೈ ಪೋಲಿಸರ ಆರೋಪ. ಇನ್ಶಾ ಅಲ್ಲಾಹ್ ! .. ಮೋದಿ ಮುರ್ದಾಬಾದ್.. ಮುಂದೆ ಓದಿ..

ದೇಶ ವಿರೋಧಿ ಘೋಷಣೆ
ಇನ್ಶಾ ಅಲ್ಲಾಹ್..ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ಥಾನ್ ಮುರ್ದಾಬಾದ್, ಒಸಾಮ ಬಿನ್ ಲಾಡೆನ್ ಜಿಂದಾಬಾದ್, ಮೋದಿ ಡೌನ್ ಡೌನ್, ತಮಿಳುನಾಡು ಭಾರತದಿಂದ ಪ್ರತ್ಯೇಕವಾಗಬೇಕು ಎನ್ನುವ ಭಿತ್ತಿಪತ್ರಗಳು ಚಳುವಳಿಯಲ್ಲಿ ಪ್ರದರ್ಶನಗೊಂಡವು ಎನ್ನುವುದು ಪೊಲೀಸರ ಆರೋಪ.
|
ಮೋದಿ ಟ್ವೀಟ್
ಅಸಲಿಗೆ ಜಲ್ಲಿಕಟ್ಟು ಹೋರಾಟ ಆರಂಭವಾದ ನಂತರ ತಮಿಳುನಾಡಿನ ಜನತೆಯ ಪರವಾಗಿ ನಿಂತವರು ಪ್ರಧಾನಿ ಮೋದಿ. ಈ ಸಾಂಪ್ರದಾಯಿಕ ಕ್ರೀಡೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಕ್ರಿಯಿಸುತ್ತಾ, ಜಲ್ಲಿಕಟ್ಟು ನಡೆಯಲು ಇರುವ ಎಲ್ಲಾ ಕಾನೂನು ತೊಡಕುಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು ಎಂದು ಮೋದಿ ಟ್ವೀಟ್ ಮೂಲಕ ಭರವಸೆ ನೀಡಿದ್ದರು. ಅಲ್ಲಿಗೆ ಜಲ್ಲಿಕಟ್ಟು ಹೋರಾಟಕ್ಕೆ ಮೊದಲ ಹಂತದ ಜಯಸಿಕ್ಕಿತ್ತು.

ಮೋದಿಗೆ ಧಿಕ್ಕಾರ
ಆದರೂ ಮೋದಿ ವಿರುದ್ದ ಧಿಕ್ಕಾರ ಮೊಳಗಿದ್ದು, ಒಳ್ಳೆಯ ಉದ್ದೇಶದಿಂದ ಹೋರಾಟ ಮಾಡುತ್ತಿದ್ದ ಯುವ ಸಮುದಾಯದಿಂದಲ್ಲ. ಬದಲಿಗೆ, ಹೋರಾಟ ದಿಕ್ಕು ತಪ್ಪಿಸಲೆಂದೇ ಬಂದಿದ್ದ ದೇಶದ್ರೋಹಿಗಳು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದ್ದೇ ಇಂತಹ ದುರಳರು ಎನ್ನುವುದು ಚೆನ್ನೈ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಅಭಿಪ್ರಾಯ.

ಪೊಲೀಸರ ಪ್ರಶ್ನೆ
ಜಲ್ಲಿಕಟ್ಟು ಸಂಬಂಧ ಸುಗ್ರೀವಾಜ್ಞೆ ಸರಕಾರ ಹೊರಡಿಸಿದ್ದರೂ, ಯಾಕಾಗಿ ಪ್ರತಿಭಟನೆ ನಡೆಸುತ್ತಿದ್ದೀರಾ ಎನ್ನುವುದಕ್ಕೆ ಹೋರಾಟಗಾರರಲ್ಲಿ ಉತ್ತರವಿರಲಿಲ್ಲ. ಹೋರಾಟ ಬೇರೆ ರೂಪ ತಾಳುವ ಸಾಧ್ಯತೆಯಿದೆ ಎನ್ನುವ ಗುಪ್ತಚರ ಇಲಾಖೆಯ ಎಚ್ಚರಿಕೆಯ ನಂತರ ನಾವು ಚಳುವಳಿ ನಿಲ್ಲಿಸಲು ಇಳಿಯಬೇಕಾಯಿತು ಎನ್ನುವುದು ಪೊಲೀಸರು ನೀಡುತ್ತಿರುವ ಸ್ಪಷ್ಟನೆ.

RFI, ಸಿಪಿಐ (ಎಂಎಲ್)
ಪ್ರತಿಭಟನೆಯಲ್ಲಿ ಎಡಪಂಥೀಯ ಉಗ್ರರು ಪಾಲ್ಗೊಂಡಿದ್ದಾರೆ. RFI (Revolutionery front of India) ಮತ್ತು ಸಿಪಿಐ (ಎಂಎಲ್) ಮುಂತಾದ ಉಗ್ರವಾದಿ ಎಡಪಂಥೀಯ ಸಂಘಟನೆಯ ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ಎನ್ನುವ ಹೆಸರಿನಲ್ಲಿ ಅಶಾಂತಿ ಹುಟ್ಟುಹಾಕಿದರು ಎನ್ನುವುದು ಚೆನ್ನೈ ಪೊಲೀಸರ ಹೇಳಿಕೆ.

ತಮಿಳು ಸಂಗೀತ ನಿರ್ದೇಶಕ ಆದಿ
ಜಲ್ಲಿಕಟ್ಟು ಬೆಂಬಲಕ್ಕಾಗಿ ಆರಂಭವಾದ ಚಳುವಳಿ ದಿಕ್ಕು ತಪ್ಪುತ್ತಿದೆ. ರಾಷ್ಟ್ರಧ್ವಜಕ್ಕೆ ಅಗೌರವ, ತಮಿಳುನಾಡು ಪ್ರತ್ಯೇಕ ದೇಶವಾಗಬೇಕು ಎನ್ನುವ ಘೋಷಣೆ, ಜೊತೆಗೆ ಮತೀಯ ದ್ವೇಷ ಹುಟ್ಟುಹಾಕುವ ಘಟನೆ ಚಳುವಳಿಯ ವೇಳೆ ನಡೆಯುತ್ತಿದೆ. ಇದರಿಂದ ಬೇಸರಗೊಂಡು ಚಳುವಳಿಯಿಂದ ಹಿಂದಕ್ಕೆ ಸರಿಯುತ್ತಿದ್ದೇನೆ - ತಮಿಳು ಸಂಗೀತ ನಿರ್ದೇಶಕ ಆದಿ.

ಸಿಪಿಎಂ
ಮೋದಿ ವಿರುದ್ದ ಎಲ್ಲಾ ಬಗೆಯ ಕೆಟ್ಟ ಭಾಷೆಯನ್ನು ಬಳಸಲಾಯಿತು, ಮೋದಿ ಪ್ರತಿಕೃತಿ ದಹಿಸುವ ಕೆಲಸಕ್ಕೆ ಹೋರಾಟಗಾರರು ಮುಂದಾದರು. ಮೋದಿ ಸರಕಾರದ ವಿರುದ್ದ ನಮಗೆ ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ, ಹೋರಾಟಗಾರರ ನಡುವಳಿಕೆಯನ್ನು ನಾವು ಬೆಂಬಲಿಸುವುದಿಲ್ಲ - ದಕ್ಷಿಣ ಚೆನ್ನೈ ಸಿಪಿಎಂ ಕಾರ್ಯದರ್ಶಿ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications