ಶಾಲಾ ನಿರ್ದೇಶಕಿ- ಪೋಷಕಿ ಜಟಾಜಟಿ ಜಂಗೀ ಕುಸ್ತಿ
ಜಲಂಧರ್, ಏ.24: ಇಬ್ಬರು ಮಹಿಳೆಯರ ನಡುವಿನ ಜಟಾಜಟಿ ವಿಡಿಯೋ ಯೂಟ್ಯೂಬ್ ನಲ್ಲಿ ಹಬ್ಬುತ್ತಿದೆ. ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಎಲ್ಲೆಡೆ ಚರ್ಚೆಗೊಳಗಾಗುತ್ತಿದೆ. ಶಾಲಾ ವಿದ್ಯಾರ್ಥಿ/ನಿಯರು ಶಾಲೆಗೆ ಮೊಬೈಲ್ ಫೋನ್ ತರುವುದು ಎಷ್ಟು ಸರಿ? ಎಂಬುದು ಚರ್ಚೆಗೊಳಲಾಗುತ್ತಿದೆ.
ಶಾಲೆಯಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಮೊಬೈಲ್ ಫೋನ್ ತಂದಿದ್ದ ವಿದ್ಯಾರ್ಥಿನಿ ಬಳಿ ಇದ್ದ ಮೊಬೈಲ್ ಫೋನ್ ನನ್ನು ಶಾಲಾ ಸಿಬ್ಬಂದಿ ಕಸಿದುಕೊಂಡಿದ್ದರು. ಇದನ್ನು ಪ್ರಶ್ನಿಸಲು ಬಂದ ವಿದ್ಯಾರ್ಥಿನಿ ಪೋಷಕಿ ಹಾಗೂ ಶಾಲಾ ನಿರ್ದೇಶಕಿ ನಡುವೆ ನಡೆದ ವಾಕ್ಸಮರ ಕೊನೆಗೆ ತಾರಕಕ್ಕೇರಿ ಇಬ್ಬರು ಜಡೆ ಹಿಡಿದು ಗೋಡೆಗೆ ಗುದ್ದಾಡಿದ ಘಟನೆ ನಡೆಯಿತು.

ಈ ಘಟನೆ ನಂತರ ಶಾಲಾ ಸಿಬ್ಬಂದಿ ಇಬ್ಬರನ್ನು ಬಿಡಿಸಲು ಹೆಣಗಾಟ ನಡೆಸಿದ್ದಾರೆ. ಕೊನೆಗೆ ವಿದ್ಯಾರ್ಥಿನಿ ತಾಯಿ ವಿರುದ್ಧ ಶಾಲಾ ಆಡಳಿತ ಮಂಡಳಿ ದೂರು ನೀಡಿದೆ. ಶಾಲಾ ನಿರ್ದೇಶಕಿಯನ್ನು ಹೊಡೆದ ವಿದ್ಯಾರ್ಥಿನಿಯ ತಾಯಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐ ಆರ್ ಹಾಕಿ, ತನಿಖೆ ಕೈಗೊಂಡಿದ್ದಾರೆ.
ಮೇಯರ್ ವರ್ಲ್ಡ್ ಸ್ಕೂಲ್ನ ನಿರ್ದೇಶಕಿ ಜ್ಯೋತಿ ನಾಗರಾಣಿ ಹಾಗೂವಿದ್ಯಾರ್ಥಿನಿ ತಾಯಿ ತರಣ್ಜಿತ್ ಕೌರ್ ಹುಂಡಾಲ್ ನಡುವೆ ನಡೆದ ಜಟಾಪಟಿ ಈಗ ಲೋಕ ಪ್ರಸಿದ್ಧಿಯಾಗಿದೆ.
ಪೊಲೀಸರು ಆಕೆ ವಿರುದ್ಧ ಐಪಿಸಿ ಸೆಕ್ಷನ್ 451 ಮತ್ತು 452 ಅನ್ವಯ ಪ್ರಕರಣ ದಾಖಲಿಸಿಕೊಂಡರೂ ಶಾಲಾ ಮಂಡಳಿ ಸದಸ್ಯರು ತೃಪ್ತರಾಗಿಲ್ಲ. ಕೊಲೆ ಯತ್ನದ ಕೇಸು ದಾಖಲಿಸುವಂತೆ ಆಗ್ರಹಿಸಿದ್ದಾರೆ. ಈಗ ಕಾನೂನು ಸಮರ ಆರಂಭವಾಗಿದ್ದು, ಈ ನಡುವೆ ವಿದ್ಯಾರ್ಥಿನಿ ಓದಿನ ಕಥೆ ಅಧೋಗತಿಯಾಗಿದೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications