ಕಣಿವೆ ರಾಜ್ಯದಲ್ಲಿ ಹಿಂಸಾಚಾರ: ರಾಜನಾಥ್ ಭೇಟಿಯಾಗಲಿರುವ ಮೆಹಬೂಬಾ
ನವದೆಹಲಿ, ಜುಲೈ 15: ರಾಜಧಾನಿ ದೆಹಲಿಗೆ ಭೇಟಿ ನೀಡಿರುವ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ, ಇಂದು ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಕಣಿವೆ ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆ ಮತ್ತು ಹಿಂಸಾಚಾರದ ಕುರಿತು ಚರ್ಚೆ ನಡೆಸಲಿದ್ದಾರೆ.
ಅಮರಾಥ್ ಯಾತ್ರಿಕರ ಮೇಲಾದ ಭಯೋತ್ಪಾದಕ ದಾಳಿಯಲ್ಲಿ 7 ಜನ ಮೃತರಾಗಿದ್ದು, ಸೈನಿಕರ ವೀರಮರಣ, ಕಾಶ್ಮೀರದಲ್ಲಿ ಡಿವೈಎಸ್ಪಿಯೊಬ್ಬರ ಹತ್ಯೆ, ಕಲ್ಲುತೂರಾಟದ ಘಟನೆಗಳು ಮುಂತಾದ ವಿಷಯಗಳ ಕುರಿತು ಇಬ್ಬರೂ ನಾಯಕರೂ ಚರ್ಚೆ ನಡೆಸಲಿದ್ದಾರೆ.

ಕಣಿವೆ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹಿಂಸಾಚಾರ ಕೇಂದ್ರ ಮತ್ತು ಕಾಶ್ಮೀರ ರಾಜ್ಯ ಸರ್ಕಾರಕ್ಕೂ ತಲೆನೋವಾಗಿದ್ದು, ಈ ಮಾತುಕತೆ ಮಹತ್ವದ್ದೆನ್ನಿಸಿದೆ.












Click it and Unblock the Notifications