ISRO: ಇಸ್ರೋಗೆ ವೈಫಲ್ಯಗಳು ಹೊಸದಲ್ಲ, ಕುಸಿದಾಗ ಬಲವಾಗಿ ನಿಂತಿದ್ದು ಇತಿಹಾಸ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಈ ವರ್ಷದ ಮೊದಲ ಉಪಗ್ರಹ ಉಡಾವಣೆಯು ಕೊನೆಯ ಕ್ಷಣಗಳಲ್ಲಿ ವಿಫಲವಾಗಿದೆ. ಇಂದಿನ ಪಿಎಸ್ಎಲ್ವಿ-ಸಿ62 ಮಿಷನ್ ವಿಫಲವಾಗಿರುವುದು ಸಹಜವಾಗಿಯೇ ನಿರಾಸೆ ಮೂಡಿಸಬಹುದು. ಆದರೆ ಇಸ್ರೋ ಇತಿಹಾಸವನ್ನು ಒಮ್ಮೆ ಹಿಂದಿರುಗಿ ನೋಡಿದರೆ, ವೈಫಲ್ಯವೇ ಅದರ ದೊಡ್ಡ ಶಕ್ತಿಯಾಗಿ ಪರಿವರ್ತನೆಯಾದ ಅನೇಕ ಕ್ಷಣಗಳು ಕಾಣಿಸುತ್ತವೆ. ಪ್ರತಿ ಬಾರಿ ಕುಸಿದಾಗಲೂ ಇನ್ನಷ್ಟು ಬಲವಾಗಿ ನಿಂತಿದೆ ಇಸ್ರೋ.
ಇಂದಿನ PSLV-C62 ಉಡಾವಣೆಯ ವೈಫಲ್ಯವನ್ನು ಕೂಡ ಇಸ್ರೋ ಅದೇ ಮನೋಭಾವದಿಂದಲೇ ಎದುರಿಸಲಿದೆ. ತಪ್ಪು ಕಂಡುಹಿಡಿಯಲಾಗುತ್ತದೆ, ಸರಿಪಡಿಸಲಾಗುತ್ತದೆ, ಮತ್ತೆ ಉಡಾವಣೆ ನಡೆಯುತ್ತದೆ. ವೈಫಲ್ಯಗಳು ಇಸ್ರೋಗೆ ಅಡ್ಡಿಯಾಗಿಲ್ಲ, ಅವೇ ಅದರ ಗುರುತು. ಇಂದಿನ ನಿರಾಸೆಯ ಹಿಂದೆಯೇ, ನಾಳೆಯ ಮತ್ತೊಂದು ಐತಿಹಾಸಿಕ ಸಾಧನೆಯ ತಯಾರಿ ಇದೆ. ಇಸ್ರೋ ಎಂದರೆ ವಿಫಲತೆಯನ್ನು ಜಯವಾಗಿ ರೂಪಿಸುವ ದೇಶದ ಆತ್ಮವಿಶ್ವಾಸ. ಇಸ್ರೋ ಯಾವಾಗಲೂ ಕುಸಿದ ನಂತರ ಇನ್ನಷ್ಟು ಎತ್ತರಕ್ಕೆ ಹಾರಿದೆ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ.

ವೈಫಲ್ಯಗಳಿಂದಲೇ ವಿಜೃಂಭಣೆಯ ಪಯಣ
ಇಸ್ರೋದ ಅಂತರಿಕ್ಷ ಪಯಣ ಆರಂಭವಾದ ದಿನಗಳಿಂದಲೇ ಯಶಸ್ಸು ಮತ್ತು ವೈಫಲ್ಯ ಎರಡೂ ಜೊತೆಯಾಗಿಯೇ ಬಂದಿವೆ. ಆದರೆ ಪ್ರತಿಯೊಂದು ವಿಫಲ ಉಡಾವಣೆಯ ನಂತರ ಇಸ್ರೋ ಹಿಂದೆ ಸರಿದಿಲ್ಲ. ಬದಲಾಗಿ ಇನ್ನಷ್ಟು ದೃಢವಾಗಿ ಮುಂದುವರೆದಿದೆ. ಇತಿಹಾಸದಲ್ಲಿ ಅನೇಕ ಬಾರಿ ವೈಫಲ್ಯಗಳನ್ನು ಎದುರಿಸಿ, ಅದರಿಂದಲೇ ಪಾಠ ಕಲಿತು ವಿಶ್ವದ ಮುಂದೆ ಸಾಧನೆ ಮೆರೆದ ಸಂಸ್ಥೆಯೇ ಇಸ್ರೋ.
* 1979ರಲ್ಲಿ ನಡೆದ SLV-3 ಉಡಾವಣೆ ವಿಫಲವಾದಾಗ, ಅದು ಭಾರತದ ಮೊದಲ ದೊಡ್ಡ ಅಂತರಿಕ್ಷ ಹಿನ್ನಡೆ ಎನ್ನಲಾಗಿತ್ತು. ಆದರೆ ಅದೇ ತಂಡ, ಅದೇ ವಿಜ್ಞಾನಿಗಳು ಕೇವಲ ಒಂದು ವರ್ಷದೊಳಗೆ ರೋಹಿಣಿ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿ, ಭಾರತವನ್ನು ಅಂತರಿಕ್ಷ ರಾಷ್ಟ್ರಗಳ ಪಟ್ಟಿಗೆ ಸೇರಿಸಿದರು. ಈ ಘಟನೆ ಇಸ್ರೋದ ಕಾರ್ಯಶೈಲಿಗೆ ದಿಕ್ಕು ತೋರಿಸಿದ ಮೊದಲ ಪಾಠವಾಗಿತ್ತು.

* 2010ರಲ್ಲಿ GSLV-D3 ಉಡಾವಣೆಯಲ್ಲಿ ಸ್ವದೇಶಿ ಕ್ರಯೋಜಿನಿಕ್ ಎಂಜಿನ್ ವೈಫಲ್ಯವು ಮತ್ತೊಮ್ಮೆ ಇಸ್ರೋದ ಸಾಮರ್ಥ್ಯಕ್ಕೆ ಪ್ರಶ್ನೆ ಎಸೆದಿತ್ತು. ಆದರೆ ಈ ಹಿನ್ನಡೆ, ಕ್ರಯೋಜಿನಿಕ್ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕಾರಣವಾಯಿತು. ಅದರ ಪರಿಣಾಮವಾಗಿ ಮುಂದಿನ ವರ್ಷಗಳಲ್ಲಿ GSLV ಉಡಾವಣೆಗಳು ಯಶಸ್ಸಿನ ಹಾದಿ ಹಿಡಿದವು.
* 2017ರಲ್ಲಿ ಅತ್ಯಂತ ವಿಶ್ವಾಸಾರ್ಹ ಉಡಾವಣೆ ಯಾನವೆಂದು ಹೆಸರು ಪಡೆದ PSLV ಕೂಡ ಒಂದು ಬಾರಿ ವಿಫಲವಾಯಿತು. ಈ ಘಟನೆ ಇಸ್ರೋದಿಗೆ ಎಚ್ಚರಿಕೆಯ ಘಂಟೆಯಂತಿತ್ತು. ದೋಷಗಳನ್ನು ಗಂಭೀರವಾಗಿ ವಿಶ್ಲೇಷಿಸಿ, ತಾಂತ್ರಿಕ ತಿದ್ದುಪಡಿಗಳನ್ನು ಮಾಡಿದ ಬಳಿಕ PSLV ಮತ್ತೆ ತನ್ನ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿತು. ನಂತರದ ವರ್ಷಗಳಲ್ಲಿ ಚಂದ್ರಯಾನ-2, ಅಡಿತ್ಯ-L1 ಸೇರಿದಂತೆ ಅನೇಕ ಮಹತ್ವದ ಮಿಷನ್ಗಳನ್ನು PSLV ಯಶಸ್ವಿಯಾಗಿ ಹೊತ್ತುಕೊಂಡು ಹಾರಿತು.

* ಚಂದ್ರಯಾನ-2 ಲ್ಯಾಂಡರ್ ಅಪಘಾತ: ಸೆಪ್ಟೆಂಬರ್ 2019ರಲ್ಲಿ, ಚಂದ್ರಯಾನ-2 ಮಿಷನ್ನ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲ್ಮೈಯಿಂದ ಕೇವಲ 2.1 ಕಿ.ಮೀ ಎತ್ತರದಲ್ಲಿ ಅದರ ಅಂತಿಮ ಲ್ಯಾಂಡಿಂಗ್ ಹಂತದಲ್ಲಿ ಅಪ್ಪಳಿಸಿತು. ಇದು ರಾಷ್ಟ್ರ ಮತ್ತು ಆಗಿನ ಇಸ್ರೋ ಮುಖ್ಯಸ್ಥ ಕೆ. ಶಿವನ್ ಅವರನ್ನು ಸಾರ್ವಜನಿಕವಾಗಿ ದುಃಖಿತರನ್ನಾಗಿ ಮಾಡಿತು.
* ಚಂದ್ರಯಾನ-3 ಯಶಸ್ಸು: ಆಗಸ್ಟ್ 2023ರಲ್ಲಿ ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-3 ಮಿಷನ್ನ ಪುನರಾಗಮನ ಯಶಸ್ವಿಯಾಯಿತು. ವಿಜ್ಞಾನಿಗಳು ಚಂದ್ರಯಾನ-2 ಅಪಘಾತದಿಂದ ಪ್ರತಿಯೊಂದು ಪಾಠವನ್ನು ಅನ್ವಯಿಸಿದರು, ಸಂಭಾವ್ಯ ವ್ಯತ್ಯಾಸಗಳಿಗೆ ಹೆಚ್ಚು ದೃಢವಾಗಿ ಹೊಸ ಲ್ಯಾಂಡರ್ ಅನ್ನು ವಿನ್ಯಾಸಗೊಳಿಸಿದರು. ಈ ಯಶಸ್ಸು ಭಾರತವನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ರಾಷ್ಟ್ರ ಮತ್ತು ಚಂದ್ರನ ಮೇಲೆ ಮೃದುವಾಗಿ ಇಳಿದ ನಾಲ್ಕನೇ ದೇಶವನ್ನಾಗಿ ಮಾಡಿತು.

* ಜನವರಿ 2025ರಲ್ಲಿ, GSLV ರಾಕೆಟ್ NVS-02 ಸಂಚರಣೆ ಉಪಗ್ರಹವನ್ನು ಅದರ ಆರಂಭಿಕ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದಾಗ, ಉಪಗ್ರಹದ ಆನ್ಬೋರ್ಡ್ ಪ್ರೊಪಲ್ಷನ್ ಸಿಸ್ಟಮ್ ವಿಫಲವಾಯಿತು, ಅದು ಅದರ ಅಂತಿಮ ಉದ್ದೇಶಿತ ಕಕ್ಷೆಯನ್ನು ತಲುಪುವುದನ್ನು ತಡೆಯಿತು. ಅಪರೂಪದ ವೈಫಲ್ಯಗಳ ಹೊರತಾಗಿಯೂ, PSLV 60ಕ್ಕೂ ಹೆಚ್ಚು ಹಾರಾಟಗಳ ಅದ್ಭುತ ದಾಖಲೆಯನ್ನು ಹೊಂದಿದೆ. ಪ್ರತಿ ಹಿನ್ನಡೆಯ ನಂತರ ತ್ವರಿತವಾಗಿ ಸ್ವರೂಪಕ್ಕೆ ಮರಳುತ್ತದೆ ಮತ್ತು ವಾಣಿಜ್ಯ ಉಡಾವಣೆಗಳಿಗೆ ಗ್ರಾಹಕರ ವಿಶ್ವಾಸವನ್ನು ಕಾಯ್ದುಕೊಳ್ಳುತ್ತದೆ.
ಇಸ್ರೋದ ವೈಶಿಷ್ಟ್ಯವೇ ಅದರ ಪಾರದರ್ಶಕ ಕಾರ್ಯವಿಧಾನ. ವೈಫಲ್ಯವನ್ನು ಮುಚ್ಚಿಡದೆ, ಅದರ ಕಾರಣಗಳನ್ನು ಸಾರ್ವಜನಿಕವಾಗಿ ವಿಶ್ಲೇಷಿಸುವುದು, ತಾಂತ್ರಿಕ ದೋಷಗಳನ್ನು ಸರಿಪಡಿಸಿ ಮುಂದಿನ ಮಿಷನ್ನಲ್ಲಿ ಅದೇ ತಪ್ಪು ಮರುಕಳಿಸದಂತೆ ಕ್ರಮ ಕೈಗೊಳ್ಳುವುದು ಇದೇ ಇಸ್ರೋದ ಬಲ. ಇಂದಿನ PSLV-C62 ಉಡಾವಣೆಯ ವೈಫಲ್ಯವನ್ನೂ ಇಸ್ರೋ ಇದೇ ಮನೋಭಾವದಿಂದಲೇ ಎದುರಿಸಲಿದೆ. ದೋಷ ಪತ್ತೆ, ತಿದ್ದುಪಡಿ ಹಾಗೂ ಮುಂದಿನ ಉಡಾವಣೆಗೆ ಸಿದ್ಧತೆ ಮಾಡುವ ಕ್ರಮಗಳು ಈಗಾಗಲೇ ಆರಂಭವಾಗಿವೆ ಎನ್ನಲಾಗಿದೆ.
ಹೀಗಾಗಿ ಇಸ್ರೋಗೆ ವೈಫಲ್ಯ ಎಂದರೆ ಅಂತ್ಯವಲ್ಲ. ಅದು ಮುಂದಿನ ಯಶಸ್ಸಿನ ಹಾದಿಗೆ ದಾರಿ ತೋರಿಸುವ ಒಂದು ಹಂತ ಮಾತ್ರ. ಇಂದಿನ ನಿರಾಸೆಯ ಹಿಂದೆಯೇ ನಾಳೆಯ ಮತ್ತೊಂದು ಐತಿಹಾಸಿಕ ಸಾಧನೆಗೆ ಅಡಿಪಾಯ ಎನ್ನುವುದನ್ನು ಇತಿಹಾಸ ಸ್ಪಷ್ಟವಾಗಿ ಹೇಳುತ್ತದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications