ಯುವಕರ ಸೆಳೆಯಲು ಆನ್ ಲೈನ್ ಬಳಸಿಕೊಂಡ ಸಿಮಿ
ಈಮೇಲ್ ಮುಖಾಂತರ, ವಿಡಿಯೋ ತುಣುಕುಗಳ ಮುಖಾಂತರ ಎಚ್ಚರಿಕೆ ನೀಡಿ ದಾಳಿ ನಡೆಸುತ್ತಿದ್ದ ಭಯೋತ್ಪಾದಕ ಸಂಘಟನೆಗಳು ಕಾಲಕ್ರಮೇಣ ಅಪ್ಡೇಟ್ ಆಗುತ್ತಿವೆ. ಈಗ ಆನ್ ಲೈನ್ ಮುಖಾಂತರ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಮತ್ತು ತಮ್ಮ ಬಾಹುಗಳನ್ನು ವಿಸ್ತರಿಸಿಕೊಳ್ಳಲು ಹೊಂಚುಹಾಕುತ್ತಿವೆ.
ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ)ದ ನಾಯಕ ಸಲಾಹುದ್ದಿನ್ ಅಹ್ಮದ್ ಅಂತಿಮಯಾತ್ರೆಯ ಸಂದರ್ಭದಲ್ಲಿ ಬಂಧಿಸಲಾದ ಇಬ್ಬರು ಉಗ್ರರ ಬಂಧನ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಭಾರತದ ಮೇಲೆ ದಾಳಿ ಹೂಡಲು ಏನೇನು ಸಂಚು ಹೂಡುತ್ತಿದೆ ಎಂಬುದು ಬಯಲಾಗುತ್ತಿದೆ.
ಅವರಿಬ್ಬರು ಅಫಘಾನಿಸ್ತಾನಕ್ಕೆ ಹೋಗುತ್ತಿದ್ದರು ಎಂದು ಹೈದರಾಬಾದ್ ಪೊಲೀಸರು ಹೇಳಿಕೆ ನೀಡಿದ್ದರೂ, ಅದಕ್ಕೆ ವ್ಯತಿರಿಕ್ತವಾಗಿ ಜಾಗೃತ ದಳ ಅವರ ಹುನ್ನಾರವನ್ನು ಬಯಲು ಮಾಡಿದೆ. ಅವರಿಬ್ಬರು, ಮಹಾರಾಷ್ಟ್ರದ ಹತ್ತು ಜಿಹಾದಿಗಳ ಗುಂಪಿಗೆ ಸೇರಿದ್ದು, ಆನ್ ಲೈನ್ ಮಾಧ್ಯಮದ ಮುಖಾಂತರ ಸಿಮಿಯ ಶಕ್ತಿ ವರ್ಧನೆಯಲ್ಲಿ ತೊಡಗಿದ್ದಾರೆ.

ವಿಧ್ವಂಸಕ ಕೃತ್ಯಕ್ಕೆ ಸಾಮಾಜಿಕ ತಾಣಗಳ ಬಳಕೆ
ಓಮೆರ್ಖೇಡ್ ನಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ಮುದಸ್ಸರ್ ಮತ್ತು ವಿದ್ಯಾರ್ಥಿಯಾಗಿರುವ ತಾರಿಕ್ 2009ರಿಂದಲೇ ಸಿಮಿಯ ಸದಸ್ಯರಾಗಿದ್ದಾರೆ. ಇವರಿಬ್ಬರ ಮಿದುಳಿನ ಕೂಸು ಆನ್ ಲೈನ್ ಮೂಲಕ ಸಿಮಿಯ ಸಂಘಟನೆಯನ್ನು ಬಲಪಡಿಸುವುದು ಮತ್ತು ವಿಧ್ವಂಸಕ ಕೃತ್ಯದ ಚಿಂತನೆ ನಡೆಸುವ ವ್ಯಕ್ತಿಗಳ ಸಶಕ್ತ ಯುದ್ಧತಂಡವನ್ನು ಕಟ್ಟುವುದು. ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಇವರಿಬ್ಬರಿಗೆ ಇಂಥ ಖತರ್ನಾಕ್ ಐಡಿಯಾ ಕೊಟ್ಟಿದ್ದು, ಈಗಾಗಲೆ ಬಂಧಿತನಾಗಿರುವ ಮನ್ಸೂರ್ ಪೀರಬಾಯ್ ಎಂಬ ಇಂಡಿಯನ್ ಮುಜಾಹಿದ್ದಿನ್ ಭಯೋತ್ಪಾದಕ. ಇತ್ತೀಚಿನ ದಿನಗಳಲ್ಲಿ ಸಂಘಟನೆಗೆ ಯುವಕರನ್ನು ಸಾಮಾಜಿಕ ತಾಣಗಳ ಮುಖಾಂತರವೇ ನೇಮಕ ಮಾಡಿಕೊಳ್ಳುತ್ತಿವೆ. ಇವರಿಬ್ಬರು ಹೈದರಾಬಾದ್ ನಲ್ಲಿ ಹಲವಾರು ಜನರನ್ನು ಭೇಟಿ ಮಾಡಿ ತಮ್ಮ ಯೋಜನೆಯ ಸಂಚನ್ನು ಹಂಚಿಕೊಳ್ಳುತ್ತಿದ್ದರು.
ಭಾರತದಲ್ಲಿ ಬೃಹತ್ತಾಗಿ ಬೆಳೆಯಬಯಸುತ್ತಿದೆ ಸಿಮಿ
ಭಾರತದಲ್ಲಿ ತನ್ನ ಬಾಹುವನ್ನು ವಿಸ್ತರಿಸುತ್ತೇನೆ ಎಂದು ಘಂಟಾಘೋಷವಾಗಿ ಸಾರಿರುವ ಅಲ್ ಖೈದಾ ಜೊತೆ ಸಿಮಿ ಸಂಘಟನೆ ಅನ್ಯೋನ್ಯ ಸಂಬಂಧ ಹೊಂದಿದೆ. ಸಿಮಿಗೆ ಅಲ್ ಖೈದಾ ತನ್ನ ಕಾರ್ಯತಂತ್ರಗಳ ವಿವರಗಳನ್ನು ನೀಡಿದ್ದು, ಅದಕ್ಕೇ ಅಂಟಿಕೊಳ್ಳುವಂತೆಯೂ ಕಟ್ಟಾಜ್ಞೆ ನೀಡಿದೆ. ಆದರೆ, ಈ ಕಾರ್ಯಾಚರಣೆಯನ್ನು ಕಾರ್ಯರೂಪಕ್ಕೆ ಇಳಿಸಬೇಕಿದ್ದರೆ ತಾನು ಬೃಹತ್ತಾಗಿ ಬೆಳೆಯಬೇಕೆಂಬ ಮಹತ್ವಾಕಾಂಕ್ಷೆಯನ್ನೂ ಸಿಮಿ ಹೊಂದಿದೆ.
ಸಿಮಿ ಸಂಘಟನೆಗೆ ಐಎಸ್ಐಎಸ್ ಸ್ಫೂರ್ತಿ
ಮುದಸ್ಸರ್ ಮತ್ತು ತಾರಿಕ್ ಹತ್ತರಿಂದ ಹದಿನೈದು ಜನರ ತಂಡ ಕಟ್ಟಿಕೊಂಡಿದ್ದು, ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದಾರೆ. ಐಎಸ್ಐಎಸ್ ಸಂಘಟನೆಯನ್ನು ಕೆಲ ಯುವಕರು ಆನ್ ಲೈನ್ ಮುಖಾಂತರವೇ ಸೇರಿಕೊಂಡಿದ್ದು ಗಮನಿಸಿದ ಇವರಿಬ್ಬರು ಅಂತಹುದೇ ನೆಟ್ವರ್ಕನ್ನು ಆರಂಭಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದರು. ಇದಕ್ಕೆಲ್ಲ ಐಎಸ್ಐಎಸ್ ಸಂಘಟನೆಯೇ ಸ್ಫೂರ್ತಿ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ.
ಅಲ್-ಶಬಾಬ್ ಎಂಬ ಮತ್ತೊಂದು ಸಂಘಟನೆಯ ಸಹಾಯವನ್ನು ಬಳಸಿಕೊಂಡು ಅಲ್ ಖೈದ್ ತನ್ನ ತೆಕ್ಕೆಗೆ ಯುವಕರನ್ನು ಸೇರಿಸಿಕೊಳ್ಳುತ್ತಿದೆ. ಇದನ್ನು ಕೂಡ ಗಮನಿಸುತ್ತಿದ್ದ ಈ ಇಬ್ಬರು ಅಲ್ ಖೈದಾ ಜೊತೆಗೆ, ತಾವೂ ಇದಕ್ಕೆ ಕೈಜೋಡಿಸುವುದಾಗಿ ವಾಗ್ದಾನ ನೀಡಿದ್ದು, ಸಾಕಷ್ಟು ಪತ್ರ ವ್ಯವಹಾರಗಳನ್ನು ಅಲ್ ಖೈದಾ ಜೊತೆಗೆ ಮಾಡಿದ್ದಾರೆ. ಹಾಗೆಯೆ, ಭಾರತೀಯ ಯುವಕರಿಗೆ ಜಿಹಾದಿ ತಂಡವನ್ನು ಸೇರಿಕೊಳ್ಳಲು ಕರೆ ನೀಡುತ್ತಿರುವುದಾಗಿ ವಿಚಾರಣೆಯಲ್ಲಿ ಹೇಳಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications