ತ್ರಿವಳಿ ತಲಾಖ್ ಅಂತ್ಯವೇ ನನ್ನ ಗುರಿ: ಭಾರತದ ಮೊದಲ ಮಹಿಳಾ ಇಮಾಮ್
ಮಲ್ಲಪುರಂ(ಕೇರಳ), ಜನವರಿ 30: 'ತ್ರಿವಳಿ ತಲಾಖ್ ಗೆ ಅಂತ್ಯ ಸಿಗುವವರೆಗೂ ನನ್ನ ಹೋರಾಟ ನಿರಂತರವಾಗಿ ಸಾಗುತ್ತದೆ' ಎಂದು ಭಾರತದ ಮೊದಲ ಮಹಿಳಾ ಇಮಾಮ್ ಎಂಬ ಹೆಗ್ಗಳಿಕೆ ಪಾತ್ರರಾದ ಕೇರಳದ ಜಮಿದಾ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ನನ್ನ ಗುರಿ. ಅದಕ್ಕಾಗಿ ಈ ಅನಿಷ್ಟ ಪದ್ಧತಿಯ ನಿರುದ್ಧ ನಾನು ನಿರಂತರವಾಗಿ ಹೋರಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ನನ್ನನ್ನು ಕೆಲವರು ಟೀಕಿಸುವ ಬಗ್ಗೆ ನನಗೆ ತಿಳಿದಿದೆ. ಅದರ ಬಗ್ಗೆ ನನಗೆ ಬೇಸರವಿಲ್ಲ. ಆದರೆ ಯಾವುದೇ ತರ್ಕವಿಲ್ಲದೆ ಮತ್ತೊಬ್ಬರನ್ನು ಗುರಿಯಾಗಿಸುವುದು ತಪ್ಪು ಎಂದು ಸಹ ಅವರು ಹೇಳಿದ್ದಾರೆ.

ಕುರಾನ್ ಸುನ್ನತ್ ಸೊಸೈಟಿಯ ಕಾರ್ಯದರ್ಶಿಯಾಗಿರುವ ಜಮಿದಾ, ಭಾರತದ ಮೊದಲ ಮಹಿಳಾ ಇಮಾಮ್ ಎಂದು ಇತಿಹಾಸ ನಿರ್ಮಿಸಿದ್ದಾರೆ. ಜನವರಿ 26 ಶುಕ್ರವಾರದಂದು ಕೇರಳದ ಮಲಪ್ಪುರಂ ಜಿಲ್ಲೆಯ ಮಸೀದಿಯೊಂದರಲ್ಲಿ ನಡೆದ ಪ್ರಾರ್ಥನೆಯ ನೇತೃತ್ವ ವಹಿಸುವ ಮೂಲಕ ಹೊಸ ದಾಖಲೆಗೆ ಇವರು ಪಾತ್ರರಾದರು.












Click it and Unblock the Notifications