ನಿರುದ್ಯೋಗ, ಹಣದುಬ್ಬರ, ಭ್ರಷ್ಟಾಚಾರದ ಚಿಂತೆ ಭಾರತೀಯರಲ್ಲಿ ಹೆಚ್ಚಿದೆ: ವರದಿ
ನವದೆಹಲಿ, ಅ.30: ನಗರವಾಸಿ ಭಾರತೀಯರು ನಿರುದ್ಯೋಗ ಮತ್ತು ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಇಪ್ಸೋಸ್ (Ipsos) ನ ಸಮೀಕ್ಷೆ ತಿಳಿಸಿದೆ. ಕುತೂಹಲಕಾರಿಯಾಗಿ, 'ವಾಟ್ ವರಿ ವರ್ಲ್ಡ್' (What Worries the World) ಸಮೀಕ್ಷೆಯ ಅಕ್ಟೋಬರ್ ವರದಿ ಪ್ರಕಾರ ಹತ್ತರಲ್ಲಿ ಇಬ್ಬರು ನಗರ ಭಾರತೀಯರು ಹಣದುಬ್ಬರದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ತಿಳಿಸಿದೆ.
ಹಿಂದಿನ ತಿಂಗಳಿಗಿಂತ ಶೇಕಡಾ 2 ರಷ್ಟು ಹೆಚ್ಚಳವಾಗಿರುವ ಹಣದುಬ್ಬರವು ಜಾಗತಿಕವಾಗಿ ಎಲ್ಲಾ ನಾಗರಿಕರಿಗೆ ಪ್ರಮುಖ ಕಾಳಜಿಯಾಗಿ ಉಳಿದಿದೆ. ವಿಶ್ವದಲ್ಲಿನ ಬಡತನ ಮತ್ತು ಸಾಮಾಜಿಕ ಅಸಮಾನತೆ, ನಿರುದ್ಯೋಗ, ಅಪರಾಧ ಮತ್ತು ಹಿಂಸೆ ಮತ್ತು ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರದ ಸುತ್ತಲಿನ ಸಮಸ್ಯೆಗಳ ಬಗ್ಗೆ ನಾಗರಿಕರು ಚಿಂತಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಇಂದೇ ತಿಳಿಯಿರಿ: ಜಗತ್ತಿನಲ್ಲೇ ಅತಿಹೆಚ್ಚು ಮಂದಿಗೆ ಉದ್ಯೋಗ ಕೊಟ್ಟಿರುವ ಸಂಸ್ಥೆ ಯಾವುದು?
ಇಪ್ಸೋಸ್ ಆನ್ಲೈನ್ ಪ್ಯಾನೆಲ್ ಸಿಸ್ಟಮ್ ಮೂಲಕ ಸೆಪ್ಟೆಂಬರ್ 23 ಮತ್ತು ಅಕ್ಟೋಬರ್ 7 ರ ನಡುವೆ 29 ದೇಶಗಳಲ್ಲಿ ನಾಗರಿಕರ ನಡುವೆ ಸಮೀಕ್ಷೆಯನ್ನು ನಡೆಸಿದೆ. ಇಪ್ಸೋಸ್ ವಾಟ್ ವರಿ ವರ್ಲ್ಡ್ (What Worries the World) ಸಮೀಕ್ಷೆಯು ದೇಶಗಳಾದ್ಯಂತ ಅತ್ಯಂತ ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ವರದಿ ಮಾಡುತ್ತದೆ.
ಕೊರೊನಾದಿಂದ ಭಾರತ ಇನ್ನೂ ತತ್ತರಿಸಿದೆ; ಭಾರತದ ಸಿಇಒ
ಈ ಸಂಶೋಧನೆಗಳ ಕುರಿತು ಪ್ರತಿಕ್ರಿಯಿಸಿದ ಭಾರತದ ಇಪ್ಸೋಸ್ನ ಸಿಇಒ ಅಮಿತ್ ಅಡಾರ್ಕರ್, ಸಾಂಕ್ರಾಮಿಕ ಮತ್ತು ಜಾಗತಿಕ ಮಂದಗತಿಯ ಪರಿಣಾಮವು ಭಾರತದಂತಹ ಮಾರುಕಟ್ಟೆಗಳಲ್ಲಿ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
"ಉಕ್ರೇನ್ನಲ್ಲಿನ ಯುದ್ಧದಿಂದಾಗಿ ದೀರ್ಘಕಾಲದ ಕೊರೊನಾ ವೈರಸ್ ಮತ್ತು ಆರ್ಥಿಕತೆಯ ಜಾಗತಿಕ ಮಂದಗತಿಯ ಪ್ರಭಾವದಿಂದಾಗಿ ಭಾರತವು ಇನ್ನೂ ತತ್ತರಿಸುತ್ತಿದೆ. ಇದು ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತಿದೆ. ಇದು ಭ್ರಷ್ಟಾಚಾರ, ಅಪರಾಧ ಮತ್ತು ಸಾಮಾಜಿಕ ಅಸಮಾನತೆಯ ಹೆಚ್ಚಳಕ್ಕೆ ಕಾರಣವಾಗಿದೆ" ಎಂದಿದ್ದಾರೆ.
ಹಣದುಬ್ಬರದ ಸಮಸ್ಯೆಗಳನ್ನು ಸರ್ಕಾರ ಬಗಹರಿಸಬೇಕು
"ಇಂಧನ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸರ್ಕಾರದ ಕ್ರಮಗಳಿಂದಾಗಿ ಭಾರತವು ಉತ್ತಮ ಸ್ಥಾನದಲ್ಲಿದ್ದರೂ ಹಣದುಬ್ಬರದ ಪರಿಣಾಮವು ಸ್ವತಃ ಪ್ರಕಟವಾಗುತ್ತಿದೆ. ಪ್ರವಾಹ ಮತ್ತು ಪ್ರತಿಕೂಲ ಹವಾಮಾನದ ಪ್ರಭಾವವು ನಗರವಾಸಿ ಭಾರತೀಯರನ್ನು ಹವಾಮಾನ ಬದಲಾವಣೆಯ ಬಗ್ಗೆ ಚಿಂತಿಸುವಂತೆ ಮಾಡುತ್ತಿದೆ. ಈ ಸಮಸ್ಯೆಗಳನ್ನು ಸರಕಾರ ಮೊದಲು ಬಗೆಹರಿಸಬೇಕು"' ಎಂದು ಭಾರತದ ಇಪ್ಸೋಸ್ನ ಸಿಇಒ ಅಮಿತ್ ಅಡಾರ್ಕರ್ ಹೇಳಿದ್ದಾರೆ.
ತಮ್ಮ ಆರ್ಥಿಕತೆಯ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿರುವ ದೇಶದ ಜನ!
ಈ ಸಮೀಕ್ಷೆಯು ತಮ್ಮ ದೇಶಗಳ ನಾಗರಿಕರಲ್ಲಿ ಆಶಾವಾದ ಮತ್ತು ನಿರಾಶಾವಾದದ ಮಟ್ಟವನ್ನು ಸೆರೆಹಿಡಿಯುತ್ತದೆ. ಭಾರತವು ಇಂಡೋನೇಷ್ಯಾವನ್ನು ಹಿಂದಿಕ್ಕಿ ಎರಡನೇ ಅತ್ಯಂತ ಧನಾತ್ಮಕ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಆದರೆ, ಹೆಚ್ಚಿನ ನಾಗರಿಕರು ತಮ್ಮ ಆರ್ಥಿಕತೆಯ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸುತ್ತದೆ.
ವಾಸ್ತವವಾಗಿ, ಶೇಕಡಾ 76 ರಷ್ಟು ನಗರ ಭಾರತೀಯರು ತಮ್ಮ ದೇಶವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಂಬುತ್ತಾರೆ. ಸೌದಿ ಅರೇಬಿಯಾ ವಿಶ್ವದ ಅತ್ಯಂತ ಸಕಾರಾತ್ಮಕ ಮಾರುಕಟ್ಟೆಯಾಗಿ ಉಳಿದಿದ್ದು, ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಸೌದಿ ಅರೇಬಿಯಾದ 93% ನಾಗರಿಕರು ತಮ್ಮ ದೇಶವು ಸರಿಯಾದ ಹಾದಿಯಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಭಾರತದ ನಾಗರಿಕರು ಹೆಚ್ಚು ಆಶಾವಾದಿಗಳು!
"ಭಾರತವು ಇಂಡೋನೇಷ್ಯಾವನ್ನು ಹಿಂದಿಕ್ಕಿ ಎರಡನೇ ಅತ್ಯಂತ ಸಕಾರಾತ್ಮಕ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಹೆಚ್ಚಿನ ನಗರ ಭಾರತೀಯರು ಭಾರತವು ಸರಿಯಾದ ಹಾದಿಯಲ್ಲಿದೆ ಎಂದು ನಂಬುತ್ತಾರೆ" ಎಂದು ಇಪ್ಸೋಸ್ನ ಸಿಇಒ ಅಮಿತ್ ಅಡಾರ್ಕರ್ ಹೇಳಿದ್ದಾರೆ.
"ಒಟ್ಟಾರೆ ದೇಶದ ಜನರ ಮನಸ್ಥಿತಿಯು ಜಾಗತಿಕ ನಾಗರಿಕರಿಗಿಂತ ಭಿನ್ನವಾಗಿ ಸಾಕಷ್ಟು ಆಶಾವಾದಿಯಾಗಿದೆ" ಎಂದು ಅಡಾರ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಪ್ಸೋಸ್, ಫ್ರಾನ್ಸ್ನ ಪ್ಯಾರಿಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಮಾರುಕಟ್ಟೆ ಸಂಶೋಧನೆ ಮತ್ತು ಸಲಹಾ ಸಂಸ್ಥೆಯಾಗಿದೆ. ಕಂಪನಿಯನ್ನು ಅಧ್ಯಕ್ಷರಾದ ಡಿಡಿಯರ್ ಟ್ರುಚೋಟ್ ಅವರು 1975 ರಲ್ಲಿ ಸ್ಥಾಪಿಸಿದ್ದಾರೆ.