ಬೋಟ್ನಲ್ಲಿದ್ದವರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಕರಾಚಿ ವ್ಯಕ್ತಿ
ಪೋರ್ಬಂದರ್ (ಗುಜರಾತ್), ಜ. 3: ಪಾಕಿಸ್ತಾನದ ಕರಾಚಿಯಲ್ಲಿದ್ದ ವ್ಯಕ್ತಿಯೊಂದಿಗೆ ಸ್ಫೋಟಗೊಂಡ ಬೋಟ್ನಲ್ಲಿದ್ದ ಉಗ್ರರು ನಿರಂತರ ಸಂಪರ್ಕದಲ್ಲಿದ್ದರು. ಉಗ್ರರ ಕುಟುಂಬಕ್ಕೆ ಲಕ್ಷಾಂತರ ರು. ನೀಡಿರುವುದಾಗಿ ಅಲ್ಲಿದ್ದ ವ್ಯಕ್ತಿ ಉಗ್ರರಿಗೆ ತಿಳಿಸಿದ್ದ. ಈ ಮಾತುಕತೆಗಳು ದಾಖಲಾಗಿವೆ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (NTRO) ಖಚಿತಪಡಿಸಿದೆ.
ಉಗ್ರರು ಮತ್ತು ಕರಾಚಿಯಲ್ಲಿದ್ದ ವ್ಯಕ್ತಿಯ ಮಧ್ಯೆ ನಡೆದಿರುವ ಸಂಭಾಷಣೆ ಪಾಕಿಸ್ತಾನದ ಕೈವಾಡವನ್ನು ನಿರೂಪಿಸುತ್ತದೆ. ಬೆಳಗ್ಗೆಯಷ್ಟೇ ಸ್ಫೋಟಗೊಂಡಿರುವ ಬೋಟ್ ತನಗೆ ಸಂಬಂಧಿಸಿದ್ದಲ್ಲ ಎಂದು ಪಾಕಿಸ್ತಾನ ಹೇಳಿತ್ತು. ಆದರೆ, ಮಧ್ಯಾಹ್ನವೇ ಪಾಕ್ ಬಣ್ಣ ಬಯಲಾಗಿದೆ. [ಬೋಟ್ ನಮ್ಮದಲ್ಲ ಎನ್ನುತ್ತಿದೆ ಪಾಕಿಸ್ತಾನ]
ಬೋಟ್ನಲ್ಲಿದ್ದವರು ಮೀನುಗಾರರು ಅಥವಾ ಕಳ್ಳಸಾಗಾಣಿಕೆದಾರರು ಅಲ್ಲ. ಅವರು ಟಿ ಶರ್ಟ್ ಹಾಗೂ ಹಾಫ್ ಪ್ಯಾಂಟ್ ಧರಿಸಿದ್ದರು. ಅವರ ವರ್ತನೆ ಅನುಮಾನಾಸ್ಪದವಾಗಿತ್ತು. ಈ ಕುರಿತು ವಿವಿಧ ಗೂಢಚರ ಸಂಸ್ಥೆಗಳು ತನಿಖೆಗಿಳಿದಿವೆ ಎಂದು ಕೋಸ್ಟ್ ಗಾರ್ಡ್ನ ವಾಯವ್ಯ ವಲಯದ ಕಮಾಂಡರ್ ಕುಲದೀಪ್ ಸಿಂಗ್ ತಿಳಿಸಿದ್ದಾರೆ. [ಸುರಕ್ಷಿತ ಸ್ಥಳಕ್ಕಾಗಿ ಹುಡುಕುತ್ತಿದ್ದರೇ ಪಾಕ್ ದುರುಳರು?]
ಭಾರತದ ಮೇಲೆ 26/11 ಮಾದರಿಯಲ್ಲಿ ದಾಳಿ ನಡೆಸುವ ಉದ್ದೇಶದಿಂದ ಪಾಕಿಸ್ತಾನ ಮೂಲದ ಉಗ್ರರು ಈ ಬೋಟ್ನಲ್ಲಿ ಬರುತ್ತಿದ್ದರು. ಭಾರತದ ಜಲ ಗಡಿ ಪ್ರವೇಶಿಸಿ ಮೀನುಗಾರರ ಬೋಟ್ಗಳೊಂದಿಗೆ ಬೆರೆತು ಭೂಪ್ರದೇಶ ಸೇರುವುದು ಉಗ್ರರ ಸಂಚಾಗಿತ್ತು. [ಕೋಸ್ಟ್ ಗಾರ್ಡ್ ಹದ್ದಿನ ಕಣ್ಣಿಗೆ ಪಾಕ್ ಹಾವು ಬಿದ್ದಿದ್ದು ಹೀಗೆ...]
ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಅರೇಬಿಯನ್ ಸಮುದ್ರದ ಕೇತಿ ಬಂದರ್ ಮೇಲೆ ಭಾರತ ಹದ್ದಿನ ಕಣ್ಣಿರಿಸಿದೆ. ಭಾರತ ಹಾಗೂ ಪಾಕಿಸ್ತಾನ ಜಲ ಗಡಿ ಪ್ರದೇಶದಲ್ಲಿ 5ಕ್ಕೂ ಹೆಚ್ಚು ವಿಮಾನಗಳು ಗಸ್ತು ತಿರುಗುತ್ತಿವೆ.