ಭಾರತೀಯರ ಸಾಲ ಹೆಚ್ಚಾಯ್ತು, ಉಳಿತಾಯ ಮಾತ್ರ ಬಿದ್ದೋಯ್ತು!
ಮುಂಬೈ: ಭಾರತೀಯರು ಉಳಿತಾಯಕ್ಕೆ ಹೆಸರಾಗಿದ್ದರು, ಅದರಲ್ಲೂ ಜಗತ್ತಿನ ವಿವಿಧ ದೇಶಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದರೂ ಭಾರತಕ್ಕೆ ಮಾತ್ರ ಸಮಸ್ಯೆ ಆಗಿರಲೇ ಇಲ್ಲ. ಇದಕ್ಕೆಲ್ಲಾ ಭಾರತೀಯರ ಉಳಿತಾಯದ ಗುಣ ಕಾರಣವಾಗಿತ್ತು. ಆದರೆ ಇದೀಗ ಸ್ಫೋಟಕ ಸತ್ಯ ಬಯಲಾಗಿದ್ದು, ಭಾರತೀಯರ ಉಳಿತಾಯ ಕುಸಿತ ಕಾಣುತ್ತಿದೆಯಂತೆ.
ಹೌದು, 2021-22ಕ್ಕೆ ಹೋಲಿಕೆ ಮಾಡಿದ್ರೆ 2022-23ನೇ ಹಣಕಾಸು ವರ್ಷದಲ್ಲಿ ಭಾರತದ ಕುಟುಂಬಗಳ ಉಳಿತಾಯ ಶೇಕಡಾ 55ರಷ್ಟು ಕುಸಿತ ಕಂಡಿದೆಯಂತೆ. ಇದರ ಜೊತೆಗೆ ಸಾಲದ ಪ್ರಮಾಣ 2 ಪಟ್ಟು ಏರಿಕೆ ಕಂಡು ₹15.6 ಲಕ್ಷ ಕೋಟಿಯಷ್ಟು ಆಗಿದೆ ಎಂದು ಎಸ್ಬಿಐ ಸಂಶೋಧನಾ ವರದಿ ಮಾಹಿತಿ ನೀಡಿದೆ. ಈ ಮೂಲಕ 2021-22ರಲ್ಲಿ ನಮ್ಮ ದೇಶದ ಕುಟುಂಬಗಳ ಉಳಿತಾಯದ ಪ್ರಮಾಣವು ಶೇ 11.5ರಷ್ಟು ಇತ್ತು. ಇದು 2022-23ರಲ್ಲಿ ಶೇ 5.1ಕ್ಕೆ ಇಳಿಕೆ ಕಂಡಿದ್ದು, 50 ವರ್ಷಗಳ ಕನಿಷ್ಠ ಮಟ್ಟವಾಗಿದೆ.

ಸಾಲದ ಹೊರೆ ಹೆಚ್ಚಾಗುತ್ತಿದೆ ಏಕೆ?
ಅಂದಹಾಗೆ 2019-20ರಲ್ಲಿ ಕುಟುಂಬಗಳ ಉಳಿತಾಯದ ಪ್ರಮಾಣವು ಶೇ 7.6ರಷ್ಟು ಇತ್ತು ಎನ್ನಲಾಗಿತ್ತು. ಇನ್ನು ಎಸ್ಬಿಐನ ಸಂಶೋಧನಾ ವರದಿಯಂತೆ ಕುಟುಂಬ ಉಳಿತಾಯದ ಪ್ರಮಾಣ ಕಡಿಮೆ ಆಗಿದೆ. ಭೌತಿಕ ಸ್ವರೂಪದ ಸ್ವತ್ತು ಅಂದರೆ ರಿಯಲ್ ಎಸ್ಟೇಟ್, ಚಿನ್ನ ಇತ್ಯಾದಿ ಖರೀದಿ ಹೆಚ್ಚಾಗುತ್ತಿದೆ. ಕುಟುಂಬ ಸಾಲದ ಮೊತ್ತವು ₹8.2 ಲಕ್ಷ ಕೋಟಿಯಷ್ಟು ಹೆಚ್ಚಾಗಿದ್ದು, ವಾಣಿಜ್ಯ ಬ್ಯಾಂಕ್ಗಳಿಂದ ಸುಮಾರು ₹7.1 ಲಕ್ಷ ಕೋಟಿ ಸಾಲ ಪಡೆದ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ.
ಕೊರೊನಾ ಬಳಿಕ ಸಾಲದ ಏರಿಳಿತ
ಇಡೀ ಜಗತ್ತು ಮಹಾಮಾರಿ ಕೊರೊನಾ ಏಟಿಗೆ ನಲುಗಿತ್ತು. ಇದೀಗ ಭಾರತದಲ್ಲಿ ಸಾಲ ಪ್ರಮಾಣ ಹೆಚ್ಚಾಗಲು ಇದೂ ಒಂದು ಕಾರಣ ಅಂತಾ ಹೇಳಲಾಗಿದೆ. ಈಗ ಎಸ್ಬಿಐ ಸಂಶೋಧನಾ ಘಟಕದ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯ ಕಾಂತಿ ಘೋಷ್ ಪ್ರಕಾರ ಕೋವಿಡ್ ನಂತರ ಕುಟುಂಬಗಳ ಸಾಲ ಪ್ರಮಾಣ ₹8.2 ಲಕ್ಷ ಕೋಟಿಯಷ್ಟು ಏರಿದೆ. 2 ವರ್ಷದಲ್ಲಿ ಕುಟುಂಬಗಳು ಪಡೆದ ಶೇ 55ರಷ್ಟು ರಿಟೇಲ್ ಸಾಲವನ್ನು ಮನೆ ಖರೀದಿಸಲು, ಶಿಕ್ಷಣ ವೆಚ್ಚ ಭರಿಸಲು ಮತ್ತು ವಾಹನ ಖರೀದಿಗೆ ಬಳಸಲಾಗಿದೆ ಎನ್ನಲಾಗಿದೆ.
ಬಡ್ಡಿ ದರ ಎಫೆಕ್ಟ್ನಿಂದ ಸಾಲ ಹೆಚ್ಚಳ?
ಹಾಗೆ ಮತ್ತೊಂದು ಕಡೆ ಬಡ್ಡಿದರ ಕಡಿಮೆ ಪ್ರಮಾಣದಲ್ಲಿ ಇರುವ ಹಿನ್ನೆಲೆ ಇಷ್ಟೊಂದು ಪ್ರಮಾಣದಲ್ಲಿ ರಿಟೇಲ್ ಸಾಲ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಇನ್ನು ಇದೇ ಹಿನ್ನೆಲೆ ಕುಟುಂಬಗಳು ಉಳಿತಾಯದ ಬದಲಾಗಿ ಆಸ್ತಿ, ಮನೆ ಖರೀದಿಯಂತಹ ಭೌತಿಕ ಸ್ವರೂಪದ ಉಳಿತಾಯದ ಕಡೆಗೆ ಹೆಚ್ಚು ಆಸಕ್ತಿ ತೋರಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಆಸ್ತಿ ಖರೀದಿಸುವ ಕಡೆಗೆ ಜನರ ಗಮನ ಹೆಚ್ಚಾಗಿರುವುದರಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಚೇತರಿಕೆ ಜೊತೆ ಆಸ್ತಿಗಳ ಬೆಲೆ ಕೂಡ ಹೆಚ್ಚಾಗಿದೆ.

ಆಧುನಿಕ ಕಾಲದಲ್ಲಿ ಭಾರತದ ಆರ್ಥಿಕತೆ ಕೂಡ ಬದಲಾಗುತ್ತಿದ್ದು, ಭಾರತೀಯರಲ್ಲಿನ ಉಳಿತಾಯದ ರೀತಿ ಕೂಡ ಬದಲಾಗುತ್ತಿದೆ. ಹಾಗೇ ಸಾಲದ ಪ್ರಮಾಣವು ಕೂಡ ಏರಿಕೆ ಕಾಣುತ್ತಿದೆ. ಈ ಮೂಲಕ ರಿಯಲ್ ಎಸ್ಟೇಟ್ ವಲಯದಲ್ಲಿ ಹೊಸ ಯುಗವು ಆರಂಭ ಆಗುವ ಮುನ್ಸೂಚನೆ ಸಿಕ್ಕಂತಾಗಿದೆ. ಏಕೆಂದರೆ ಕೊರೊನಾ ಬಳಿಕ ರಿಯಲ್ ಎಸ್ಟೇಟ್ ವಲಯ ನಲುಗಿ ಹೋಗಿತ್ತು.
-
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
Adani: ವಿಕಲಚೇತನ ಛಾಯಾಗ್ರಾಹಕರಿಗಾಗಿ 'ಗ್ಲೋಬಲ್ ಎಬಿಲಿಟಿ ಫೋಟೋಗ್ರಫಿ ಚಾಲೆಂಜ್ 2026' ಘೋಷಣೆ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಮಾರ್ಚ್ 26ರ ದರಪಟ್ಟಿ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್












Click it and Unblock the Notifications