Get Updates
Get notified of breaking news, exclusive insights, and must-see stories!

Operation Sindoor: ಉಗ್ರರ ಸ್ವರ್ಗ ಪಾಕಿಸ್ತಾನಕ್ಕೆ ನರಕ ತೋರಿಸಿದ ಭಾರತ: ಏರ್‌ಸ್ಟ್ರೈಕ್ ಬಗ್ಗೆ ಸೇನಾಧಿಕಾರಿಗಳ ವಿವರಣೆ

ನವದೆಹಲಿ, ಮೇ 07: ಕಾಶ್ಮೀರದ ಪಹಲ್ಮಾಮ್‌ನಲ್ಲಿ ನಡೆದ ಪಾಕ್ ಉಗ್ರರ ದಾಳಿಗೆ ಭಾರತ ತಡರಾತ್ರಿ (ಮೇ 07) ಒಂಬತ್ತು ಕಡೆ ದಾಳಿ ಮಾಡುವ ಮೂಲಕ ಎದಿರೇಟು ನೀಡಿದೆ. ಇದಕ್ಕೆ 'ಸಿಂಧೂರ ಕಾರ್ಯಾಚರಣೆ' ಅಡಿ ಭಾರತವು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ದಾಳಿ ಮಾಡಿದೆ. ಕಾರ್ಯಾಚರಣೆ ಪೂರ್ಣಗೊಳ್ಳುತ್ತಿದ್ದಂತೆ ಭಾರತೀಯ ರಕ್ಷಣಾ ಇಲಾಖೆ ವತಿಯಿಂದ ಇಂದು ಬೆಳಗ್ಗೆ 10.25ಕ್ಕೆ ಮಹತ್ವದ ಸುದ್ದಿಗೋಷ್ಠಿ ನಡೆಯಿತು. 'ಸಿಂಧೂರ ಕಾರ್ಯಾಚರಣೆ' ಹೇಗೆ ಸಾಧ್ಯವಾಯಿತು. ಹೇಗೆಲ್ಲ ದಾಳಿ ಮಾಡಲಾಯಿತು ಎಂದೆಲ್ಲ ಪ್ರಮುಖ ಅಂಶಗಳನ್ನು ಮಿಲಿಟರಿ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಗ್ರರನ್ನು ಹತ್ಯೆ ಮಾಡಿದ್ದೇವೆ ಎಂದು ಈಗಾಗಲೇ ಅಜಿತ್ ಧೋವೆಲ್ ಅವರು ಅಮೆರಿಕ, ಚೀನಾ, ರಷ್ಯಾ ಸೇರಿದಂತೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ಮಾಹಿತಿ ನೀಡಿದ್ದಾರೆ. ದಾಳಿ ಪ್ರತಿಕಾರದ ಸಂದೇಶವನ್ನು ಸಾರಿದ್ದೇವೆ ಎಂದು ವಿಶ್ವದ ರಾಷ್ಟ್ರಗಳಿಗೆ ತಿಳಿಸಿದ್ದು. ಭಾರತದ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Indian Defence Ministry Press Meet on May 7th About Sindoor Operation Indian Attack on Pakistan PoK

ಈಗಾಗಲೇ ಪ್ರಧಾನಿ ನಿವಾಸದಲ್ಲಿ ಪ್ರಮುಖ ಚರ್ಚೆ ಶುರುವಾಗಿದೆ. ಮಹತ್ವದ ಸಭೆ ಸಹ ನಡೆದಿದೆ. ಸುದ್ದಿಗೋಷ್ಠಿಗೂ ಮೊದಲು. ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಸೇನಾ ಮುಖ್ಯಸ್ಥರ ಜೊತೆಗೂ ಪ್ರಧಾನಿ ಮೋದಿಯವರು ಚರ್ಚಿಸಿದ್ದಾರೆ. ಪಾಕಿಸ್ತಾನ ಮೇಲಿನ ಪ್ರತಿ ಹಂತದ ಕಾರ್ಯಾಚರಣೆಯ ಮಾಹಿತಿಯನ್ನು ಪ್ರಧಾನಿ ಮೋದಿ ಪಡೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರಲ್ಲಿ 26 ಮಂದಿಯನ್ನು ಪಾಕ್ ಉಗ್ರರು ದಾಳಿ ಹತ್ಯೆಗೈದಿದ್ದರು. ಉಗ್ರ ಸಂಘಟನೆಯ ಪಾತ್ರದಲ್ಲಿ ಇದರಲ್ಲಿ ಖಚಿತವಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಸೂಕ್ತ ತಯಾರಿ ನಡೆಸಿ 'ಸಿಂಧೂರು ಕಾರ್ಯಾಚಣೆ' ಅಡಿಯಲ್ಲಿ ಪಾಕ್ ಉಗ್ರರ ಅಡಗು ತಾಣಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಭಾರತೀಯ ಸೈನೆ ಏರ್‌ಸ್ಟ್ರೈಕ್ ಮಾಡಿದೆ. ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಸಿಗಬೇಕು ಎಂಬದು ಭಾರತದ ಉದ್ದೇಶ ಎಂದರು.

ಉಗ್ರರಿಗೆ ಸಹಾಯಕ್ಕೆ ನಿಂತವರಿಗೂ ತಕ್ಕ ಶಾಸ್ತಿ..

ಉಗ್ರರ ಪಹಲ್ಗಾಮ್ ದಾಳಿ ಸ್ಪಷ್ಟ ಮಾಹಿತಿ, ಗುಪ್ತಚರ ಖಚಿತ ಮಾಹಿತಿ, ಉಗ್ರರ ಗುರುತು ಪತ್ತೆ ಮಾಡಿ, ಸ್ಥಳೀಯ ಸಾಕ್ಷ್ಯಗಳ ಆಧಾರದಲ್ಲಿ ಇಂದು ಏರ್‌ಸ್ಟ್ರೈಕ್ ಮಾಡಲಾಗಿದೆ. ಉಗ್ರರಿಗೆ ಹಣ ಸಹಾಯ ಮಾಡುತ್ತಿದ್ದವರಿಗೆ, ಆಶ್ರಯ ನೀಡಿದವರಿಗೆ ತಕ್ಕ ಪಾಕ ಕಲಿಸಲಾಗಿದೆ. ಈ ನಿಟ್ಟಿನಲ್ಲೇ ಸಿಂಧೂರ ಕಾರ್ಯಾಚರಣೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಭಾರತದ ಮೇಲೂ ದಾಳಿ ಆಗುವ ಸಾಧ್ಯತೆ ಇದ್ದು, ಅದರ ವಿರುದ್ಧ ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದೇವೆ. 26/11 ಮುಂಬೈ ಉಗ್ರರ ದಾಳಿ ಬಳಿಕ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಅತೀ ದೊಡ್ಡ ಉಗ್ರ ದಾಳಿ ಎಂದು ಅವರು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಉಗ್ರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿತ್ತು.

ಇನ್ನೂ ಭಯೋತ್ಪಾದಕರಿಗೆ ಪಾಕಿಸ್ತಾನ ಸ್ವರ್ಗವಾಗಿದೆ. ಪಾಕ್‌ನಲ್ಲಿ ಉಗ್ರರ ಅಡಗುತಾಣ ತಡೆಯಲುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದೆ. ವಿಶ್ವದ ವಿವಿಧ ನಿಷೇಧಿತ ಉಗ್ರ ಸಂಘಟನೆಗಳ ಉಗ್ರರು ಪಾಕಿಸ್ತಾನದಲ್ಲಿ ಇದ್ದಾರೆ ಎಂಬ ಖಚಿತ ಮಾಹಿತಿ ಇದೆ. ಅದರೆ ಇದನ್ನು ತಡೆಯುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಯಾವ ಕ್ರಮ ಕೈಗೊಂಡಿಲ್ಲ. ಇದರ ಬದಲು ಅವರು ವಾದ ಮುಂದುವರೆಸಿದ್ದಾರೆ ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+