ಭಾರತೀಯ ಬ್ಯಾಂಕಿಂಗ್ ಮಹಾಸಭೆಯಲ್ಲಿ ವಸೂಲಾಗದ ಸಾಲದ್ದೇ ಚರ್ಚೆ
ನವದೆಹಲಿ, ಆಗಸ್ಟ್ 24: ಭಾರತೀಯ ಬ್ಯಾಂಕಿಂಗ್ ಮಹಾಸಭೆಯಲ್ಲಿ ಬ್ಯಾಂಕುಗಳ ಬಹುದೊಡ್ಡ ಸಮಸ್ಯೆಯಾದ ವಸೂಲಿಯಾಗದ ಸಾಲದ ಬಗ್ಗೆ ಭಾರಿ ಚರ್ಚೆ ನಡೆಯಿತು.
ಹಿಂದಿರುಗದ ಸಾಲ ಅಥವಾ ವಸೂಲಾಗದ ಸಾಲ ಭಾರತೀಯ ಬ್ಯಾಂಕಿಂಗ್ ವಲಯ ಎದುರಿಸುತ್ತಿರುವ ಬಹು ಮುಖ್ಯ ಸಮಸ್ಯೆ. ಭಾರತೀಯ ಬ್ಯಾಂಕಿಂಗ್ ವಲಯ ಮತ್ತು ಆರ್ಥಿಕ ಸಂಸ್ಥೆಗಳು ಎದುರಿಸುತ್ತಿರುವ ಈ ಸಮಸ್ಯೆಗಳನ್ನು ಭಾರತೀಯ ಮಾದರಿಯಲ್ಲಿಯೇ ಪರಿಹರಿಸಲು ಬ್ಯಾಂಕುಗಳು ಯತ್ನಿಸಬೇಕಾಗಿದೆ ಎಂಬುದು ಬ್ಯಾಂಕಿಂಗ್ ದಿಗ್ಗಜರು ಅಭಿಪ್ರಾಯಪಟ್ಟರು.
ಐಸಿಐಸಿಐ ಬ್ಯಾಂಕ್ ಛೇರ್ಮನ್ ಗಿರೀಶ್ ಚಂದ್ರ ಚತುರ್ವೇಧಿ ಮಾತನಾಡಿ, ಸಾಲ ವಸೂಲಾತಿ ಎಂಬುದು ಭಾರತೀಯ ಬ್ಯಾಂಕಿಂಗ್ನ ಬಹುದೊಡ್ಡ ಸಮಸ್ಯೆ. ವಿದೇಶದಲ್ಲಿ ಸಾಲವಸೂಲಾತಿ ಎಂಬುದು ಕೇವಲ ಕೆಲವೇ ತಿಂಗಳುಗಳ ಪ್ರಕ್ರಿಯೆ ಆದರೆ ಭಾರತದಲ್ಲಿ ಸಾಲ ವಸೂಲಾತಿ ಮಾಡಲು 5-7 ವರ್ಷಗಳೇ ಹಿಡಿಯುತ್ತವೆ ಎಂದರು.

ಹಿಂದಿರುಗದ ಸಾಲದ ವಸೂಲಾತಿಗೆ ಕಾನೂನಿನಲ್ಲಿಯೇ ಕೆಲವು ಮಾರ್ಪಾಡುಗಳು ಅವಶ್ಯಕತೆ ಇದೆ ಎಂಬುದು ಚತುರ್ವೇಧಿ ಅವರ ಅಭಿಪ್ರಾಯ. ಆದರೆ ಭಾರತದಂತಹಾ ಸಂಯುಕ್ತ ರಾಷ್ಟ್ರದಲ್ಲಿ ಕೆಲವು ಕಾನೂನುಗಳು ಕೇಂದ್ರದ ಕೈಯಲ್ಲಿದ್ದರೆ, ಕೆಲವು ರಾಜ್ಯದ ಕೈಯಲ್ಲಿವೆ ಹಾಗಾಗಿ ಬದಲಾಣೆಗಳಾಗಲು ತಡವಾಗುತ್ತವೆ. ಆದರೆ ಇದರಿಂದ ತೊಂದರೆ ಅನುಭವಿಸುವುದು ಬ್ಯಾಂಕ್.
ಯುಕೋ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ರವಿ ಕೃಷ್ಣಾರೆಡ್ಡಿ ಮಾತನಾಡಿ, 'ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸಣ್ಣ ಅಥವಾ ಮಧ್ಯಮ ಪ್ರಮಾಣದ ಹಿಂತರುಗದ ಸಾಲಗಳಿವೆ. ಆದರೆ ಸಮಸ್ಯೆ ಇರುವುದು ಅಭಿವೃದ್ಧಿ ಬ್ಯಾಂಕುಗಳಲ್ಲಿ. ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಿಸಿಕೊಳ್ಳಲು ವಿಶೇಷ ತರಬೇತಿ ಇಲ್ಲ, ಕಾನೂನುಗಳೂ ನಮ್ಮ ಪರವಾಗಿಲ್ಲ' ಎಂಬುದು ಅವರ ಅಭಿಪ್ರಾಯ.
ಈ ಹಂತದಲ್ಲಿ ವಸೂಲಿಯಾಗದ ಸಾಲದ ವಿರುದ್ಧ ಬ್ಯಾಂಕುಗಳಿರುವ ಕೊನೆಯ ಅವಕಾಶವೆಂದು ದಿವಾಳಿತನದ ಸಂಹಿತ ಅಥವಾ ಬ್ಯಾಂಕ್ರಪ್ಟಿಸಿ ಕೋಡ್ (ಐಬಿಸಿ). 2016ರ ಐಬಿಸಿಯ ನಿಯಮಾವಳಿಗಳಿಂದ ಬ್ಯಾಂಕುಗಳು ವಸೂಲಿಯಾಗದ ಸಾಲ ಅಥವಾ ಲಾಭ ಉತ್ಪಾದಿಸದ ಸ್ವತ್ತು ಹಾಗೂ ಅವೈಜ್ಞಾನಿಕವಾಗಿ ಸಾಲದ ವಿರುದ್ಧ ಹೋರಾಡಬಹುದಾಗಿದೆ ಎಂದು ಭಾರತ ಸರ್ಕಾರದ ಮಾಜಿ ಹಣಕಾಸು ಸಲಹೆಗಾರ ಪಟ್ನಾಯಕ್ ಹೇಳಿದ್ದಾರೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications