India Weather: ದೆಹಲಿ, ಯುಪಿಯಲ್ಲಿ ಅಧಿಕ ಚಳಿ- ವಾಯುಭಾರ ಕುಸಿತದಿಂದ ಹಲವೆಡೆ ಮಳೆ ಮುನ್ಸೂಚನೆ

ಜನವರಿ 31ರಿಂದ ಹೊಸ ವಾಯುಭಾರ ಕುಸಿತ ಸಕ್ರಿಯಗೊಳ್ಳಲಿದ್ದು, ಫೆಬ್ರವರಿ 3ರಂದು ದೆಹಲಿಯಲ್ಲಿ ಲಘು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ದಿನದ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ. ಪ್ರಸ್ತುತ ದೆಹಲಿಯ ಜನರು ಶೀತವನ್ನು ಮಾತ್ರವಲ್ಲದೆ ಕೆಟ್ಟ ಗಾಳಿಯ ಗುಣಮಟ್ಟವನ್ನೂ ಎದುರಿಸುತ್ತಿದ್ದಾರೆ. ಮಂಗಳವಾರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 276ಕ್ಕೆ ದಾಖಲಾಗಿದ್ದು, ಇದು 'ಕಳಪೆ' ವರ್ಗಕ್ಕೆ ಸೇರಿದೆ. ಹಾಗಾದರೆ ದೇಶದ ಇತರ ರಾಜ್ಯಗಳ ಹವಾಮಾನ ಹೇಗಿದೆ? ಎಲ್ಲೆಲ್ಲಿ ಮಳೆ ಬೀಳಲಿದೆ? ಎಲ್ಲಿ ಒಣಹವೆ ಮುಂದುವರೆಯಲಿದೆ ಎಂದು ತಿಳಿಯೋಣ.

ಉತ್ತರ ಪ್ರದೇಶದ ಹವಾಮಾನ ವರದಿ

ಉತ್ತರ ಪ್ರದೇಶದಲ್ಲಿ ಹಗಲಿನಲ್ಲಿ ಸುಡುವ ಬಿಸಿಲು ಮತ್ತು ರಾತ್ರಿಯ ಚಳಿ ಜನರನ್ನು ತೊಂದರೆಗೊಳಿಸಿದೆ. ಜನವರಿ29 ಮತ್ತು 30 ರಂದು ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ದಟ್ಟವಾದ ಮಂಜು ಆವರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿಜ್ನೋರ್, ಮೊರಾದಾಬಾದ್, ಬರೇಲಿ, ಗೋರಖ್‌ಪುರ ಮತ್ತು ಡಿಯೋರಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಕವಿದಿರುವ ಸೂಚನೆ ನೀಡಲಾಗಿದೆ.

India Weather extreme cold in delhi up- rain forecast at many places in india

ಇನ್ನೂ ಜನವರಿ 31ರಿಂದ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಫೆಬ್ರವರಿ ಆರಂಭದಲ್ಲಿಯೂ ತುಂತುರು ಮಳೆ ಮುಂದುವರಿಯಬಹುದು. ಈ ಅವಧಿಯಲ್ಲಿ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ. ಇಟಾವಾ ಮತ್ತು ಬುಲಂದ್‌ಶಹರ್‌ನಲ್ಲಿ ಕನಿಷ್ಠ ತಾಪಮಾನ 6°C ದಾಖಲಾಗಿದ್ದರೆ, ವಾರಣಾಸಿಯಲ್ಲಿ ಅತ್ಯಂತ ಬಿಸಿಯಾದ ದಿನ 25.9°C ದಾಖಲಾಗಿದೆ.

ಪ್ರಯಾಗರಾಜ್ ಮೌನಿ ಅಮಾವಾಸ್ಯೆಯ ಹವಾಮಾನ ವರದಿ:

ಇಂದು ಮೌನಿ ಅಮವಾಸ್ಯೆಯಾಗಿದ್ದರಿಂದ ಪ್ರಯಾಗ್‌ರಾಜ್ ಮಹಾಕುಂಭ ಮೇಳಕ್ಕೆ ಭಕ್ತರ ದಂಡೆ ಹರಿದು ಬರುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ಹವಾಮಾನ ಸಂಪೂರ್ಣವಾಗಿ ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬೆಳಿಗ್ಗೆ 4 ಗಂಟೆಯಿಂದಲೇ ಸಂಗಮದಲ್ಲಿ ಸ್ನಾನ ಮಾಡಲು ಭಕ್ತರು ಸೇರಿದ್ದಾರೆ. ಆಡಳಿತ ವರದಿ ಪ್ರಕಾರ, ಇಂದು ಸುಮಾರು 10 ಕೋಟಿ ಜನರು ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಮಂಗಳವಾರವೇ ಕುಂಭಮೇಳದಲ್ಲಿ ಭಾರಿ ಜನಸಂದಣಿ ಕಂಡುಬಂದಿದ್ದು, 5 ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದ್ದಾರೆ.

ರಾಜಸ್ಥಾನದಲ್ಲಿ ಶೀತ ಮತ್ತು ಮಳೆಯ ಮುನ್ಸೂಚನೆ

ರಾಜಸ್ಥಾನದಲ್ಲಿ ಹಗಲಿನಲ್ಲಿ ಸೌಮ್ಯವಾದ ಬಿಸಿಲು ಇದ್ದರೂ, ರಾತ್ರಿ ವೇಳೆ ಚಳಿ ಹೆಚ್ಚಾಗಿರುತ್ತದೆ. ಸಿಕಾರ್‌ನ ಫತೇಪುರದಲ್ಲಿ ಕನಿಷ್ಠ 1ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ರಾಜ್ಯದ ಅತ್ಯಂತ ಕಡಿಮೆ ತಾಪಮಾನವಾಗಿದೆ. ಜನವರಿ 31ರಿಂದ ರಾಜಸ್ಥಾನದಲ್ಲಿ ಹೊಸ ಪಾಶ್ಚಿಮಾತ್ಯ ವಾಯುಭಾರ ಕುಸಿತ ಸಕ್ರಿಯಗೊಳ್ಳಲಿದ್ದು, ಜೈಪುರ ಮತ್ತು ಭರತ್‌ಪುರ ವಿಭಾಗಗಳಲ್ಲಿ ಲಘು ಮಳೆಯಾಗಲಿದೆ.

ಮುಂದಿನ ಕೆಲವು ದಿನಗಳಲ್ಲಿ ಹಗುರ ಮಳೆ, ಆಲಿಕಲ್ಲು ಮಳೆ ಮತ್ತು ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಿಗ್ಗೆ ಮತ್ತು ರಾತ್ರಿ ವೇಳೆ ಹೆಚ್ಚು ಚಳಿ ಇರಲಿದ್ದು, ಜನರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಜನವರಿ ಕೊನೆಯ ದಿನಗಳವರೆಗೂ ಉತ್ತರ ಭಾರತದಲ್ಲಿ ಚಳಿಯಿಂದ ಮುಕ್ತಿ ಸಿಗುವ ಸಾಧ್ಯತೆಯೇ ಇಲ್ಲ. ಪಶ್ಚಿಮ ದಿಕ್ಕಿನ ಅಡಚಣೆಯಿಂದಾಗಿ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಮತ್ತು ಶೀತ ಗಾಳಿಯ ಪರಿಣಾಮ ಮುಂದುವರಿಯಲಿದೆ. ಬೆಳಿಗ್ಗೆ ಮತ್ತು ರಾತ್ರಿ ಬೆಚ್ಚಗಿನ ಬಟ್ಟೆಗಳನ್ನು ಧರಿಸಲು ಮತ್ತು ಮಂಜಿನಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿರಲು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+