Putin in India: ಪುಟಿನ್ ಭಾರತ ಭೇಟಿಗೂ ಮೊದಲೇ $2 ಮಿಲಿಯನ್ ಜಲಂತರ್ಗಾಮಿ ನೌಕೆ ಒಪ್ಪಂದ
ದೆಹಲಿ, ಡಿಸೆಂಬರ್ 04: ಭಾರತಕ್ಕೆ ರಷ್ಯಾ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಗಮಿಸಿದ್ದಾರೆ. ಅವರಿಗೆ ದೆಹಲಿಯಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ಇದಕ್ಕೂ ಮೊದಲೇ ಭಾರತವು ರಷ್ಯಾದಿಂದ ಸುಮಾರು 2 ಶತಕೋಟಿಗೆ ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಯನ್ನು ಗುತ್ತಿಗೆಗೆ ಪಡೆಯಲಿದೆ. ಈ ಮೂಲಕ ಎರಡು ದೇಶಗಳ ಸಂಬಂಧ ಮತ್ತಷ್ಟು ಉತ್ತಮವಾಗಲಿದೆ.
ಈ ಗುತ್ತಿಗೆ ಒಪ್ಪಂದದಿಂದ ಒಂದು ದಶಕದ ಮಾತುಕತೆಗಳು ಮುಕ್ತಾಯಗೊಂಡಿವೆ. ಒಪ್ಪಂದವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿಯ ಒಂದು ವಾರದ ಮೊದಲು ಆಗಿದೆ. ಮುಖ್ಯವಾಗಿ ಈ ದ್ವಿಪಕ್ಷೀಯ ರಕ್ಷಣಾ ಮತ್ತು ಇಂಧನ ಸಹಕಾರ ಪ್ರತಿಬಿಂಬವಾಗಿದೆ. ತರಬೇತಿಯ ಉದ್ದೇಶ ಹೊಂದಿದ್ದು, ಈ ಜಲಾಂತರ್ಗಾಮಿ ನೌಕೆಯನ್ನು ಎರಡು ವರ್ಷಗಳಲ್ಲಿ ತಲುಪಿಸಲಾಗುವುದು ಎಂದು ರಷ್ಯಾ ತಿಳಿಸಿದೆ.

ಜಲಾಂತರ್ಗಾಮಿ ನೌಕೆ ಪಡೆಯುವ ಗುತ್ತಿಗೆ ಬಗೆಗಿನ ಚರ್ಚೆಗಳು ಸಮಸ್ಯೆಗಳಿಂದ ಕೂಡಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಸದ್ಯ ಆ ಸಮಸ್ಯೆ ಬಗೆಹರಿದಿದ್ದು, ದರ್ಶಕಗಳ ಮಾತುಕತೆ ಇತ್ಯರ್ಥವಾಗಿದೆ. ಇದೇ ವಿಚಾರವಾಗಿ ಭಾರತೀಯ ಅಧಿಕಾರಿಗಳ ತಂಡವು ನವೆಂಬರ್ನಲ್ಲಿ ರಷ್ಯಾದ ಹಡಗುಕಟ್ಟೆಗೆ ಭೇಟಿ ನೀಡಿತ್ತು. ವಿಶೇಷವೆಂದರೆ ಒಪ್ಪಂದದಡಿ ಗುತ್ತಿಗೆ ಪಡೆಯಲಾಗುತ್ತಿರುವ ಜಲಾಂತರ್ಗಾಮಿ ನೌಕೆಯನ್ನು ಯುದ್ಧಕ್ಕಾಗಿ ನಿಯೋಜಿಸಲಾಗುವುದಿಲ್ಲ. ಬದಲಿಗೆ ಭಾರತದ ಪರಮಾಣು-ಜಲಾಂತರ್ಗಾಮಿ ಕಾರ್ಯಾಚರಣೆಗಳ ತರಬೇತಿ ಪಡೆಯಲಾಗುತ್ತದೆ.
ರಷ್ಯಾ -ಭಾರತ ದೇಶಗಳ ಜಲಾಂತರ್ಗಾಮಿ ನೌಕೆಯ ಗುತ್ತಿಗೆ 10 ವರ್ಷಗಳ ಅವಧಿಗೆ ಸಿಮೀತವಾಗಿದೆ. ಇನ್ನೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದ ಆಕ್ರಮಣ ಮಾಡಿದ ನಂತರ ಪುಟಿನ್ ಅವರ ಮೊದಲ ಭೇಟಿ ಆಗಿದೆ. ಮೋದಿ ಅವರು ರಷ್ಯಾ ಮತ್ತು ಚೀನಾ ಎರಡರೊಂದಿಗೂ ಸಂಬಂಧ ವಿಸ್ತರಿಸದ್ದಾರೆ. ಇದರ ಹಿಂದೆ ವಿದೇಶಾಂಗ, ರಾಜತಾಂತ್ರಿಕ ಉದ್ದೇಶಗಳು ಇವೆ ಎಂದು ವಿಶ್ಲೇಷಿಸಲಾಗಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications