Tunnel: ಜಲಗರ್ಭದಲ್ಲಿ ಬಸ್ಸು, ರೈಲು: 104 ಅಡಿ ಆಳದ ನದಿಯೊಳಗೆ ಜನ ಸಂಚಾರ, ಭಾರತದಲ್ಲಿ ಇದೇ ಮೊದಲು
ನವದೆಹಲಿ: ಭಾರತದಲ್ಲಿ ಪ್ರಪ್ರಥಮ ಬಾರಿಗೆ ನದಿ ನೀರಿನ ಆಳದಲ್ಲಿ ಸುರಂಗ ರಸ್ತೆ ಹಾಗೂ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ. ದೇಶದ ಮಟ್ಟಿಗೆ ಇದೊಂದು ಅತ್ಯಂತ ಮಹತ್ವದ ಯೋಜನೆಯಾಗಿದೆ. ನದಿಯ ಆಳದೊಳಗೆ ಅವಳಿ (ಸುರಂಗ) ಕೊಳವೆಗಳ ಮೂಲಕ ಜನರನ್ನು ಹೊತ್ತ ರೈಲು ಮತ್ತು ವಾಹನಗಳು ಚಲಿಸಲಿವೆ. ಎಲ್ಲಿಂದ-ಎಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ? ಯಾವ ನದಿ ಕೆಳಗೆ ಯೋಜನೆ ಬರುತ್ತದೆ, ಏನೆಲ್ಲ ಪ್ರಯೋಜನ, ಯಾವೆಲ್ಲ ರಾಜ್ಯಗಳು, ಭಾಗಗಳನ್ನು ಸಂಪರ್ಕಿಸುತ್ತದೆ? ಅಂದಾಜು ವೆಚ್ಚದ ಪೂರ್ಣ ಮತ್ತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ದೇಶದ ಈಶಾನ್ಯ ಭಾಗದಲ್ಲಿ ಈ ಸಾರಿಗೆ ಮೂಲ ಸೌಕರ್ಯ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಬೃಹತ್ ಮಟ್ಟದ 33 ಕಿಲೋ ಮೀಟರ್ ಉದ್ದದ ಯೋಜನೆಯನ್ನು ಬ್ರಹ್ಮಪುತ್ರ ನದಿಯ ಕೆಳಗೆ ಸಾಕಾರಗೊಳಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಅಸ್ಸಾಂ ವ್ಯಾಪ್ತಿಯಲ್ಲಿ ರಸ್ತೆ ಮತ್ತು ರೈಲು ಸಾರಿಗೆ ಸುಧಾರಣೆ ಆಗಲಿದೆ. ಮಣಿಪುರ, ಅರುಣಾಚಲ ಪ್ರದೇಶ ಮತ್ತು ಈಶಾನ್ಯ ಭಾಗಗಳಿಗೆ ಪ್ರಮುಖ ಸಂಪರ್ಕವನ್ನು ಬಲಪಡಿಸುತ್ತದೆ. ಈ ಯೋಜನೆ ಅನುಷ್ಠಾನವು ಭಾರತ ತಂತ್ರಜ್ಞಾನ, ಎಂಜಿನಿಯರಿಂಗ್, ರಸ್ತೆ ಮತ್ತು ರೈಲು ಮೂಲ ಸೌಕರ್ಯ ಕ್ಷೇತ್ರದ ಮಟ್ಟಿಗೆ ಮೈಲಿಗಲ್ಲಾಗಲಿದೆ.

ಈ ಸುರಂಗ ರಸ್ತೆ, ರೈಲು ಯೋಜನೆಯಿಂದ 6.5 ಗಂಟೆ ಪ್ರಯಾಣವನ್ನು ಕೇವಲ 30 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಾತ್ಕಾಲಿಕ ಅಥವಾ ಸ್ಥಾಯಿ ಸರ್ಕಾರಿ ಗುಂಪು ಇರುವ 'ಭಾರತೀಯ ಅಂತರ-ಸಚಿವಾಲಯ ಸಮಿತಿ (ಐಎಂಪಿ) ;ವತಿಯಿಂದ ಈ ಯೋಜನೆ ಆರಂಭಿಸಲು ಎಲ್ಲ ಹಂತಗಳಿಗೂ ಈಗಾಗಲೇ ತಾತ್ವಿಕ ಅನುಮೋದನೆ ನೀಡಲಾಗಿದೆ.
ಯೋಜನೆ ಪ್ರಮುಖ ವಿವರಗಳು
* ಗೋಹ್ಪುರ್ - ನುಮಲಿಗಢ ಸಂಪರ್ಕಿಸುವ ರಸ್ತೆ-ರೈಲು ಮಾರ್ಗ ಯೋಜನೆ ಇದಾಗಿದೆ.
* ಒಟ್ಟು ಯೋಜನೆಯ ಉದ್ದ: 33.7 ಕಿಲೋ ಮೀಟರ್ ಮೀ
* ನೀರೊಳಗಿನ ಸುರಂಗ ಮಾರ್ಗ: 15.8 ಕಿಲೋ ಮೀಟರ್
* ನದಿಪಾತ್ರದ ಎಷ್ಟು ಆಳದಲ್ಲಿ ನಿರ್ಮಾಣ: 32 ಮೀಟರ್
* ಎರಡು (ಅವಳಿ) ಕೊಳವೆಯಲ್ಲಿ ರಸ್ತೆ, ರೈಲು ಮಾರ್ಗ ನಿರ್ಮಾಣ

ಸುರಂಗ ಸಂರಚನೆ ಹೇಗಿರಲಿದೆ?
* ರೈಲು ಸುರಂಗ: ಏಕ ವಿದ್ಯುದ್ದೀಕೃತ ಹಳಿ, ನಿಲುಭಾರವಿಲ್ಲದ (Ballastless design) ವಿನ್ಯಾಸ
* ರಸ್ತೆ ಸುರಂಗ: 2 ಏಕ ದಿಕ್ಕಿನಲ್ಲಿ ಸಂಚಾರ ಪಥಗಳ ನಿರ್ಮಾಣ
* ಸುರಕ್ಷತೆಗಾಗಿ ರೈಲು ಸಂಚಾರದ ಸಮಯದಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಲು ಪ್ಲಾನ್
ಬೃಹತ್ ಸಾರಿಗೆ ಸಂಪರ್ಕ ಸುಧಾರಣೆ, ಲಿಂಕ್
* ಪ್ರಯಾಣದ ಸಮಯ ಕಡಿತ: 6.5 ಗಂಟೆಗಳಿಂದ ಕೇವಲ 30 ನಿಮಿಷಕ್ಕೆ ಇಳಿಕೆ
* ದೂರ ಕಡಿತ: ಮೊದಲು ಕ್ರಮಿಸಬೇಕಿದ್ದ 240 ಕಿಲೋ ಮೀಟರ್ ದೂರವು 34 ಕಿಮೀ.ಗೆ ಇಳಿಕೆ
* ಸಂಪರ್ಕ ಲಿಂಕ್: ಅರುಣಾಚಲ ಪ್ರದೇಶ, ಮಣಿಪುರ ಮತ್ತು ಈಶಾನ್ಯ ಪ್ರದೇಶಕ್ಕೆ ಸಂಪರ್ಕ ಸುಧಾರಣೆ
ಅಂದಾಜು ವೆಚ್ಚ ಮತ್ತು ನಿರ್ಮಾಣ ಕಾಲಮಿತಿ
* ಅಂದಾಜು ವೆಚ್ಚ: ₹18,600 ಕೋಟಿ
* ರಸ್ತೆ ಸಾರಿಗೆ, ರೈಲ್ವೆ ಮತ್ತು ರಕ್ಷಣೆಯಿಂದ ಜಂಟಿಯಾಗಿ ಹಣಕಾಸು ನೆರವು
* ಕಾಮಗಾರಿ ಮಂಜೂರಾದ ಬಳಿಕ 5 ವರ್ಷಗಳಲ್ಲಿ ಪೂರ್ಣಗೊಳಿಸಲು ಗಡುವು
* ಅಸ್ಸಾಂ ಚುನಾವಣೆಗೆ (ಮಾರ್ಚ್ 2026) ಮುನ್ನ ಕೇಂದ್ರ ಸಚಿವ ಸಂಪುಟದ ಅಂತಿಮ ಅನುಮೋದನೆ.
-
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ''












Click it and Unblock the Notifications